ಸಾವಿರಾರು ಶಿಕ್ಷಕರಿಂದ ಜಿಲ್ಲಾಧಿಕಾರಿ, ಜಿಪಂ ಸಿಇಓ, ಡಿಡಿಪಿಐಗೆ ಮನವಿ
ವಿಜಯಪುರ: ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ಆಗಸ್ಟ್ 12 ರಂದು ಬೆಂಗಳೂರಿನ ಫ್ರೀಡಂ ಪಾರ್ಕನಲ್ಲಿ ಹಮ್ಮಿಕೊಂಡಿರುವ ರಾಜ್ಯ ಮಟ್ಟದ ಬೃಹತ್ ಹೋರಾಟಕ್ಕಾಗಿ ಬುಧವಾರ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ವತಿಯಿಂದ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ, ಜಿಲ್ಲಾ ಪಂಚಾಯತ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ, ಹಾಗೂ ಡಿಡಿಪಿಐ ಎನ್.ಎಚ್.ನಾಗೂರ ಅವರಿಗೆ ಸಾವಿರಾರು ಶಿಕ್ಷಕರು ರ್ಯಾಲಿ ಮೂಲಕ ಸಾಗಿ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿ ಮಾತನಾಡಿದ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಜಿ.ಎಸ್.ಬೇವನೂರ 2017 ರ ವೃಂದ ಮತ್ತು ನೇಮಕಾತಿ ನಿಯಮಗಳು 2016 ಕ್ಕಿಂತ ಮುಂಚೆ ನೇಮಕಾತಿ ಹೊಂದಿದ ಶಿಕ್ಷಕರಿಗೆ ಅನ್ವಯವಾಗುವುದಿಲ್ಲ ಎಂದು ಕಾರ್ಯಾದೇಶ ಹೊರಡಿಸಬೇಕು. 1ರಿಂದ 8 ನೇ ತರಗತಿಗೆ ನೇಮಕ ಹೊಂದಿದವರನ್ನು ಪಿ.ಎಸ್.ಟಿ ಎಂದು ಪದನಾಮ ಮಾಡಿ 1 ರಿಂದ 5 ಕ್ಕೆ ಹಿಂಬಡ್ತಿ ನೀಡಿದ್ದನ್ನು ಹಿಂಪಡೆಯಬೇಕು. 2016 ಕ್ಕಿಂತ ಮುಂಚೆ ನೇಮಕ ಹೊಂದಿದ ಎನ್.ಸಿ.ಟಿ.ಈ ನಿಯಮಾವಳಿ ಪ್ರಕಾರ ಪದವಿ ವಿದ್ಯಾರ್ಹತೆಯನ್ನು ಹೊಂದಿದ ಎಲ್ಲ ಸೇವಾನಿರತ ಶಿಕ್ಷಕರನ್ನು ಜಿಪಿಟಿ ಶಿಕ್ಷಕರೆಂದು ಸೇವಾಜೇಷ್ಠತೆಯೊಂದಿಗೆ ಪುನರ್ ಪದನಾಮೀಕರಣ ಮಾಡಬೇಕು ಎಂದರು.
ಜಿಲ್ಲಾ ಪ್ರದಾನ ಕಾರ್ಯದರ್ಶಿ ಅರ್ಜುನ ಲಮಾಣಿ ಮಾತನಾಡಿ, ಈ ಮೊದಲಿನ ಪ್ರೌಢಶಾಲಾ ಬಡ್ತಿ ನಿಯಮಾವಳಿಯಂತೆ 2016 ರ ಮುಂಚೆ ನೇಮಕಾತಿ ಹೊಂದಿದ ಹಾಗೂ ಬಿಎಡ್ ಪದವಿ ಪಡೆದ ಪ್ರಾಥಮಿಕ ಶಾಲಾ ಶಿಕ್ಷಕರು ಖಾಲಿಯಾಗುವವರೆಗೂ ಪ್ರೌಢಶಾಲೆಗೆ ಬಡ್ತಿ ನೀಡಬೇಕು. ತದನಂತರದಲ್ಲಿ ಹೊಸದಾಗಿ ನೇಮಕಗೊಂಡ ಜಿಪಿಟಿ ಶಿಕ್ಷಕರನ್ನು ಪರಿಗಣಿಸಬೇಕು. ಈ ಮುಂಚಿನ ನಿಯಮಾವಳಿಯಂತೆ ಮುಖ್ಯ ಶಿಕ್ಷಕರ ಹುದ್ದೆಗೆ ವಿದ್ಯಾರ್ಹತೆಯನ್ನು ಪರಿಗಣಿಸದೇ ಅಖಂಡ ಸೇವಾಹಿರಿತನದ ಆಧಾರದ ಮೇಲೆ ಬಡ್ತಿ ನೀಡಬೇಕು.
ಶಿಕ್ಷಕ ಸಂಘದ ರಾಜ್ಯ ಕೋಶಾಧ್ಯಕ್ಷ ಸುರೇಶ ಶಡಶ್ಯಾಳ, ಜುಬೇರ ಕೇರೂರ, ಬಿ.ಟಿ.ಗೌಡರ, ಪುಷ್ಪಾ ಗಚ್ಚಿನಮಠ, ಸಿ.ಟಿ.ಜತ್ತಿ, ಅಶೋಕ ಚನಬಸಗೋಳ, ಅಲ್ಲಾಭಕ್ಷ ವಾಲಿಕಾರ, ಹಣಮಂತ ಕೊಣದಿ, ಎಂ. ಎಂ. ವಾಲಿಕಾರ, ಚಂದ್ರಶೇಖರ್ ಜಿತ್ತಿ, ಅಶೋಕ ಚನಬಸುಗೋಳ, ಮಲಕಪ್ಪ ಟಕ್ಕಳಕಿ, ವೈ. ಟಿ. ಪಾಟೀಲ, ಆನಂದ್ ಭೂಸನೂರ, ನೀಜು ಮೇಲಿನಕೇರಿ, ಎ.ಎಚ್. ವಾಲಿಕಾರ, ಬಿ. ಎಸ್. ಮಠ, ಎ. ಬಿ. ದಧಕೆ, ವೀರಭದ್ರಪ್ಪ, ಎಚ್.ಎಂ.ಚಿತ್ತರಗಿ, ಬಿ. ಟಿ. ವಜ್ಜಲ, ಸುರೇಶ ಬಿರಾದಾರ, ಬಸವರಾಜ್ ಮುಖರ್ತಿಹಾಳ, ಬಿ. ಪಿ. ನಾಗಾವಿ, ಅಶೋಕ ಬೂದಿಹಾಳ, ಅಶೋಕ್ ಭಜಂತ್ರಿ, ಆನಂದ್ ಪವಾರ, ಸಾಬು ಗಗನಮಾಲಿ, ಝಕೀರ್ ಇಂಡಿಕರ, ಅಲ್ತಾಫ ಭೋರಾಮಣಿ, ಎಸ್. ವಿ. ಹರಳಯ್ಯಾ , ಕಾಂತು ಇಂಡಿ, ಪ್ರಭು ಚಂದಕವಟೆ, ಜಯರಾಮ ಚವ್ಹಾಣ, ಸೋಮನಾಥ ಬಾಗಲಕೋಟ, ಅಕ್ಕುಬಾಯಿ ನಾಯಕ, ಜಯಶ್ರೀ ಬೆಣ್ಣಿ, ಭಾರತಿ ಉಪಾಸೆ , ಎಂ. ಬಿ. ಆಲೂರು, ಆನಂದ ಕೆಂಭಾವಿ, ತಿಪ್ಪಣ್ಣ ಜಂಬಗಿ, ಆರ್. ಡಿ. ಪವಾರ, ಅಭಿದ್ ಹುಣಸಗಿ, ಪ್ರವೀಣ್ ಪತ್ತಾರ, ಮಂಜುನಾಥ, ವಾಸೀಂ ಚಟ್ಟರಕಿ ಇದ್ದರು.

