Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

13 ವರ್ಷ ಕಳೆದರೂ ನೀರಿಲ್ಲ: ಚಿಕ್ಕಲಕಿ ಕ್ರಾಸ್‌ನಲ್ಲಿ ರೈತರ ಆಕ್ರೋಶ ಸ್ಫೋಟ

ಬಿಎಲ್ಡಿಇ ಎಸ್.ಎಸ್.ಎಂ ಕಾಲೇಜ‌ ಆಫ್ ಫಾರ್ಮಸಿಗೆ ೨ನೇ ಸ್ಥಾನ

ಜು.೨೭ ರಂದು ಡಾ.ಹಳಕಟ್ಟಿ, ಬಂಥನಾಳ ಶ್ರೀ & ಬಂಗಾರಮ್ಮ ಸ್ಮರಣೆ ಕಾರ್ಯಕ್ರಮ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ವಚನ ಸಾಹಿತ್ಯ ಸಂಶೋಧನೆಗೆ ಜೀವನವನ್ನೇ ಸವೆದ ಮಹಾಪುರುಷ ಡಾ.ಹಳಕಟ್ಟಿ
(ರಾಜ್ಯ ) ಜಿಲ್ಲೆ

ವಚನ ಸಾಹಿತ್ಯ ಸಂಶೋಧನೆಗೆ ಜೀವನವನ್ನೇ ಸವೆದ ಮಹಾಪುರುಷ ಡಾ.ಹಳಕಟ್ಟಿ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಆಲಮಟ್ಟಿ: ಯಾವುದೇ ಮನೆ, ಮಠ,  ದೇಗುಲಗಳಲ್ಲಿ ಪೂಜೆಗೆ ಸೀಮಿತವಾಗಿ ನಶಿಸುತ್ತಿದ್ದ ೧೨ ನೇ ಶತಮಾನದ ಶರಣರು ತಾಡೋಲೆಗಳಲ್ಲಿ ರಚಿಸಿದ್ದ ವಚನಗಳನ್ನು ಸಂಗ್ರಹಿಸಿ, ಸಂಶೋಧಿಸಿ ಕೃತಿ ಸಂಪುಟಗಳಲ್ಲಿ ಹೊರ ತಂದ ಡಾ ಫ.ಗು. ಹಳಕಟ್ಟಿ ಅವರು ಜೀವನದುದ್ಧಕ್ಕೂ ಸರಳ ಫಕೀರನಂತೆ ಬದುಕು ಸಾಗಿಸಿದರು ಎಂದು ಸಾಹಿತಿ ಮೋಹನ ಕಟ್ಟಿಮನಿ ಅಭಿಪ್ರಾಯಪಟ್ಟರು.
ಆರ್‌ಬಿಪಿಜಿ ಹಳಕಟ್ಟಿ ಪ್ರೌಢಶಾಲೆಯಲ್ಲಿ ನಿಡಗುಂದಿ ತಾಲ್ಲೂಕು ಆಡಳಿತ  ವಚನ ಪಿತಾಮಹ ಡಾ ಫ.ಗು. ಹಳಕಟ್ಟಿ ಅವರ ೧೪೪ ನೇ ಜನ್ಮದಿನದ ಅಂಗವಾಗಿ ಹಮ್ಮಿಕೊಂಡ ವಚನ ಸಂರಕ್ಷಣಾ ದಿನದಲ್ಲಿ ಅವರು ಉಪನ್ಯಾಸ ನೀಡಿ ಮಾತನಾಡಿದರು.
ಹುಟ್ಟಿದ ಆರಂಭದಿಂದ ೮೩ ವರ್ಷಗಳಕಾಲ ನಿರಂತರವಾಗಿ ತಮ್ಮ ಸುಖವನ್ನು ಬಯಸದೆ ವಚನ ಸಾಹಿತ್ಯದ ಸಂಶೋಧನೆಗಾಗಿ ಜೀವನವನ್ನೇ ಸವೆದ ಮಹಾಪುರುಷನ ಜನ್ಮ ದಿನವನ್ನು ಸರಕಾರ ಆಚರಣೆ ಮಾಡಬೇಕಾದರೆ ೧೩೦  ವರ್ಷ ತೆಗೆದುಕೊಂಡಿತು ಅದೇ ನಮ್ಮ ದುರ್ದೈವ.ಎಂದು ವಿಷಾಧಿಸಿದರು.
ಬಿಎಲ್‌ಡಿಎ ಶಿಕ್ಷಣ ಸಂಸ್ಥೆ ಮತ್ತು ಸಿದ್ದೇಶ್ವರ ಬ್ಯಾಂಕ್ ಸ್ಥಾಪಿಸಿದ ಹಳಕಟ್ಟಿಯವರು ಲಿಂಗೈಕ್ಯರಾಗಿದ್ದಾಗ ಅವರ ಸಮಾಧಿಗಾಗಿ ಯಾರೂ ಜಾಗ ನೀಡಲಿಲ್ಲ, ಕೊನೆಗೆ ಜ್ಞಾನಯೋಗಾಶ್ರಮದ ಮಲ್ಲಿಕಾರ್ಜುನ ಸ್ವಾಮೀಜಿ ತಾವು ರಚಿಸಿದ ಗ್ರಂಥ ಮಾರಾಟ ಮಾಡಿ ಹಳಕಟ್ಟಿಯವರ ಸಮಾಧಿ ಅಭಿವೃದ್ಧಿಗೊಳಿಸಿದರು ಎಂದರು.
ಬಿಎಲ್ ಡಿಎ ಸಂಸ್ಥೆ ಸ್ಥಾಪಿಸಿ ೧೦ ಕ್ಕೂ ಹೆಚ್ಚು ಕನ್ನಡ ಶಾಲೆ ಆರಂಭಿಸಿದರು. ಮುಚ್ಚುತ್ತಿದ್ದ ಬಾಸೆಲ್ ಮಿಷನ್ ಆಂಗ್ಲಮಾಧ್ಯಮ ಶಾಲೆಯನ್ನು  ಬಿಎಲ್ ಡಿಎ ಸಂಸ್ಥೆಗೆ ಪಡೆದುಕೊಂಡರು. ಆ ಕಾಲದಲ್ಲಿ ಕಾನೂನು ಪದವಿ ಪಡೆದಿದ್ದರೂ ಇವರ ಕುಟುಂಬ ಅನೇಕ ಬಾರಿ ಊಟಕ್ಕೂ ಪರದಾಡಿತ್ತು ಎಂದರು.
ತಹಶೀಲ್ದಾರ್ ಎ.ಡಿ. ಅಮರವಾಡಗಿ ಮಾತನಾಡಿ, ಈಗಿನ ಪೀಳಿಗೆಗೆ ಶರಣರ ವಚನಗಳನ್ನು ನೀಡಲು ಶ್ರಮಿಸಿದ ಫ.ಗು. ಹಳಕಟ್ಟಿ ಜಯಂತಿಯನ್ನು  ವಚನ ಸಂರಕ್ಷಣಾ ದಿನವನ್ನಾಗಿ ಆಚರಿಸಲು ರಾಜ್ಯ ಸರ್ಕಾರ ಆದೇಶಿಸಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖ್ಯ ಶಿಕ್ಷಕ ಜಿ.ಎಂ. ಕೋಟ್ಯಾಳ ಪ್ರತಿಯೊಬ್ಬ ವಿದ್ಯಾರ್ಥಿಯೂ ಡಾ.ಫ.ಗು.ಹಳಕಟ್ಟಿಯವರ ಬಗ್ಗೆಯಾಗಲಿ ಹರ್ಡೇಕರ್ ಮಂಜಪ್ಪನವರ ಬಗ್ಗೆಯಾಗಲಿ ಎಷ್ಟು ಸಾದ್ಯವೋ ಅಷ್ಟು  ಕೃತಿಗಳನ್ನು ಕೇಳಿ ನಾವು ತಿಳಿದುಕೊಂಡು ಮುಂದಿನ ಪೀಳಿಗೆಗೆ ಅವರ ಚರಿತ್ರೆ ಹೋಗಬೇಕು. ಬಿಜಾಪುರ ಜಿಲ್ಲೆಯನ್ನು ಅವರ ಕರ್ಮಭೂಮಿಯನ್ನಾಗಿ ಮಾಡಿಕೊಂಡು ಜೀವನದ ಉಸಿರಿರುವರೆಗೂ ದುಡಿದಂತಹ ಇವರಿಬ್ಬರ ಹೆಸರನ್ನು ಹೇಳೋದೆ ನಮ್ಮ ಭಾಗ್ಯ ಎಂದರು.
ಪ್ರಾಚಾರ್ಯ ಪಿ.ಎ. ಹೇಮಗಿರಿಮಠ, ಯು.ಎ.ಬಶೆಟ್ಟಿ, ಮಂಜುನಾಥ ಹಿರೇಮಠ,  ಬಿ.ಎಸ್. ಅವಟಿ, ಬಿ.ಎಸ್. ಯರವಿನತೆಲಿಮಠ,  ಎಸ್.ಐ.ಗಿಡ್ಡಪ್ಪಗೋಳ, ಎನ್.ಎಸ್. ಬಿರಾದಾರ, ಐ.ಎಲ್. ಶಿಂಧೆ, ರಾಜಕುಮಾರ ರಾಠೋಡ, ತನುಜಾ ಪೂಜಾರಿ,  ಬಿ.ಡಿ. ಚಲವಾದಿ ಇದ್ದರು.
ತಾಲ್ಲೂಕಿನ ನಾನಾ ಪ್ರೌಢಶಾಲೆಗಳಲ್ಲಿ ಫ.ಗು. ಹಳಕಟ್ಟಿ ಕುರಿತು ಏರ್ಪಡಿಸಿದ್ದ ಭಾಷಣ, ವಚನ ಕಂಠಪಾಠ, ಪ್ರಬಂಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಲಾಯಿತು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

13 ವರ್ಷ ಕಳೆದರೂ ನೀರಿಲ್ಲ: ಚಿಕ್ಕಲಕಿ ಕ್ರಾಸ್‌ನಲ್ಲಿ ರೈತರ ಆಕ್ರೋಶ ಸ್ಫೋಟ

ಬಿಎಲ್ಡಿಇ ಎಸ್.ಎಸ್.ಎಂ ಕಾಲೇಜ‌ ಆಫ್ ಫಾರ್ಮಸಿಗೆ ೨ನೇ ಸ್ಥಾನ

ಜು.೨೭ ರಂದು ಡಾ.ಹಳಕಟ್ಟಿ, ಬಂಥನಾಳ ಶ್ರೀ & ಬಂಗಾರಮ್ಮ ಸ್ಮರಣೆ ಕಾರ್ಯಕ್ರಮ

ಯುವಕರನ್ನು ಕೆಣಕಿದವರಾರೂ ಉದ್ಧಾರವಾಗಿಲ್ಲ :ಎಂಎಲ್ಸಿ ಸುನೀಲಗೌಡ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • 13 ವರ್ಷ ಕಳೆದರೂ ನೀರಿಲ್ಲ: ಚಿಕ್ಕಲಕಿ ಕ್ರಾಸ್‌ನಲ್ಲಿ ರೈತರ ಆಕ್ರೋಶ ಸ್ಫೋಟ
    In (ರಾಜ್ಯ ) ಜಿಲ್ಲೆ
  • ಬಿಎಲ್ಡಿಇ ಎಸ್.ಎಸ್.ಎಂ ಕಾಲೇಜ‌ ಆಫ್ ಫಾರ್ಮಸಿಗೆ ೨ನೇ ಸ್ಥಾನ
    In (ರಾಜ್ಯ ) ಜಿಲ್ಲೆ
  • ಜು.೨೭ ರಂದು ಡಾ.ಹಳಕಟ್ಟಿ, ಬಂಥನಾಳ ಶ್ರೀ & ಬಂಗಾರಮ್ಮ ಸ್ಮರಣೆ ಕಾರ್ಯಕ್ರಮ
    In (ರಾಜ್ಯ ) ಜಿಲ್ಲೆ
  • ಯುವಕರನ್ನು ಕೆಣಕಿದವರಾರೂ ಉದ್ಧಾರವಾಗಿಲ್ಲ :ಎಂಎಲ್ಸಿ ಸುನೀಲಗೌಡ
    In (ರಾಜ್ಯ ) ಜಿಲ್ಲೆ
  • ಯುವಕರ ನ್ಯಾಯಯುತ ಹೋರಾಟ ಗೌರವಿಸಿ :ಬಬಲೇಶ್ವರ
    In (ರಾಜ್ಯ ) ಜಿಲ್ಲೆ
  • ಮಕ್ಕಳಲ್ಲಿ ಒಳ್ಳೆಯ ಅಭ್ಯಾಸಗಳ ರೂಢಿ
    In ವಿಶೇಷ ಲೇಖನ
  • “ನಮ್ಮ ಕಥಾ ಅರಮನೆ” ಮುನ್ನಡೆಸುವ ರೂವಾರಿ ಡಾ.ರಾಜಶೇಖರ ನಾಗೂರ
    In ವಿಶೇಷ ಲೇಖನ
  • ‘ನಮ್ಮ ಕಥಾ ಅರಮನೆ’ ಕನ್ನಡದ ಅಕ್ಷರೋತ್ಸವಕ್ಕೆ ೮ನೇ ವಾರ್ಷಿಕೋತ್ಸವ ಸಂಭ್ರಮ
    In ವಿಶೇಷ ಲೇಖನ
  • ಉದಯರಶ್ಮಿ ಇಂದಿನ ದಿನಪತ್ರಿಕೆ ಜುಲೈ 24, 2026
    In ದಿನಪತ್ರಿಕೆ
  • ಉದಯರಶ್ಮಿ ಇಂದಿನ ದಿನಪತ್ರಿಕೆ ಜುಲೈ 23, 2026
    In ದಿನಪತ್ರಿಕೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.