Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಯುಪಿಎಸ್‌ಸಿ ಪರೀಕ್ಷಾ ಪೂರ್ವ ತರಬೇತಿಗೆ ಅರ್ಜಿ ಆಹ್ವಾನ

೧೪.೮೩ ಲಕ್ಷ ನಮೂನೆಗಳ ಡಿಜಿಟಲೀಕರಣ ಪೂರ್ಣ

ಜು.೨೬ ರಂದು ಸಣ್ಣ ಮತ್ತು ಜಿಲ್ಲಾ ಪತ್ರಿಕೆಗಳ ಸಂಘದ ಪದಗ್ರಹಣ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಚರ್ಮಗಂಟು ರೋಗದ ವಿರುದ್ಧ ಲಸಿಕಾ ಅಭಿಯಾನ ಪ್ರಾರಂಭ :ಮೇಟಿ
(ರಾಜ್ಯ ) ಜಿಲ್ಲೆ

ಚರ್ಮಗಂಟು ರೋಗದ ವಿರುದ್ಧ ಲಸಿಕಾ ಅಭಿಯಾನ ಪ್ರಾರಂಭ :ಮೇಟಿ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಮುದ್ದೇಬಿಹಾಳ: ತಾಲೂಕಿನ ಎಲ್ಲ ಹಳ್ಳಿಗಳಲ್ಲಿ ಈಗಾಗಲೇ ಚರ್ಮಗಂಟು ರೋಗದ ವಿರುದ್ಧ ಲಸಿಕಾ ಅಭಿಯಾನವು ಪ್ರಾರಂಭವಾಗಿದ್ದು ಈ ಅಭಿಯಾನವು ಜುಲೈ ೨೦ನೇ ತಾರೀಖಿನವರೆಗೆ ಚಾಲ್ತಿಯಲ್ಲಿರುತ್ತದೆ. ಎಲ್ಲ ರೈತರುಗಳು ತಮ್ಮ ಜಾನುವಾರುಗಳಿಗೆ ಲಸಿಕೆ ಹಾಕಿಸಿಕೊಳ್ಳುವಂತೆ ಪಶು ವೈದ್ಯಾಧಿಕಾರಿ ಶಿವಾನಂದ ಮೇಟಿ ಸಲಹೆ ನೀಡಿದರು.
ಈ ಕುರಿತು ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು, ಈ ರೋಗವು ದನ ಮತ್ತು ಎಮ್ಮೆ ಎರಡರಲ್ಲಿಯೂ ಎಲ್‌ಎಸ್‌ಡಿ ವೈರಸ್ ನಿಂದ ಉಂಟಾಗುತ್ತದೆ. ಆದರೆ ಕಾಯಿಲೆ ಮತ್ತು ರೋಗಕ್ಕೆ ತುತ್ತಾಗುವ ದೃಷ್ಟಿಯಿಂದ ಎಮ್ಮೆಗಳಿಗೆ ಹೋಲಿಸಿದರೆ ದನಗಳಲ್ಲಿ ಈ ರೋಗವು ತೀವ್ರವಾಗಿರುತ್ತದೆ. ಮಿಶ್ರ ತಳಿ ರಾಸುಗಳಲ್ಲಿ ಚರ್ಮದ ಗಂಟುಗಳ ಗಾತ್ರವು ಹೆಚ್ಚು ದೊಡ್ಡದಾಗಿ ಇರುತ್ತವೆ. ಸದರಿ ಲಸಿಕಾ ಅಭಿಯಾನದಲ್ಲಿ ಕೇವಲ ದನಗಳಿಗೆ ಮಾತ್ರ ಲಸಿಕೆಯನ್ನು ಹಾಕಲಾಗುತ್ತದೆ. ಈ ರೋಗವು ಪ್ರಾಣಿಜನ್ಯ ರೋಗವಲ್ಲ. ಆದ್ದರಿಂದ ಜಾನುವಾರುಗಳಿಂದ ಮನುಷ್ಯರಿಗೆ ಹರಡುವುದಿಲ್ಲ. ಯಾವುದೇ ಗಾಬರಿ ಪಡುವ ಅವಶ್ಯಕತೆ ಇಲ್ಲ. ಕಾಯಿಸಿದ ಹಾಲು ಮನುಷ್ಯರ ಬಳಕೆಗೆ ಸುರಕ್ಷಿತವಾಗಿರುತ್ತದೆ. ಕುರಿ ಮತ್ತು ಮೇಕೆಗಳು ದನಗಳ ಸಮೀಪವಿದ್ದರೂ ಕೂಡ ಈ ರೋಗವು ಹರಡುವುದಿಲ್ಲ. ಈ ರೋಗವು ಮುಖ್ಯವಾಗಿ ಸಂಧಿಪದಿ ಕೀಟಗಳು ವಿಶೇಷವಾಗಿ ಕಚ್ಚುವ ನೊಣಗಳು ಸೊಳ್ಳೆಗಳು ಮತ್ತು ಉಣ್ಣೆಗಳಿಂದ ಹರಡುತ್ತದೆ. ಹಾಗೂ ಕಲುಷಿತಗೊಂಡ ನೀರು ಮತ್ತು ಆಹಾರ ಸೇರಿದಂತೆ ವೀರ್ಯ, ಭ್ರೂಣದ ಮಾಸಿನ ಮೂಲಕ ಹರಡುವ ಸಾಧ್ಯತೆ ಇರುತ್ತದೆ ಎಂದರು.
ರೋಗದ ಲಕ್ಷಣಗಳು
ಜ್ವರ, ಹೈನುರಾಸುಗಳಲ್ಲಿ ಹಾಲಿನ ತೀವ್ರ ಕಡಿತ, ಊದಿಕೊಂಡಿರುವ ದುಗ್ಧರಸ ಗ್ರಂಥಿಗಳು, ಕೀಲುಗಳ ಬಾವು ಮತ್ತು ಊತ, ಜ್ವರ ಕಾಣಿಸಿಕೊಂಡ ೪೮ ಗಂಟೆಗಳಲ್ಲಿ ದೇಹದ ಬಹುತೇಕ ಎಲ್ಲಾ ಭಾಗಗಳಲ್ಲಿ ೧-೫ ಸೆಂ.ಮೀ ವ್ಯಾಸದ ಚರ್ಮದ ಗಂಟುಗಳು ಕಾಣಿಸುತ್ತವೆ. ರೋಗವು ಮುಂದುವರಿದಂತೆ ಗಂಟುಗಳು ನೆಕ್ರೋಟಿಕ್ ಹಾಗೂ ಫೈಬ್ರೋಟಿಕ್ ಆಗಬಹುದು. ಇದು ಕೆಲವು ತಿಂಗಳುಗಳವರೆಗೆ ಕೂಡ ಇರಬಹುದು. ಸಾಮಾನ್ಯವಾಗಿ ದೊಡ್ಡ ಗಂಟುಗಳು ನೆಕ್ರೋಟಿಕ್ ಪ್ರಕ್ರಿಯೆಯಿಂದ ಗುಣವಾಗುತ್ತವೆ ಮತ್ತು ಸಣ್ಣ ಗಂಟುಗಳು ಸ್ವಯಂ ಪ್ರೇರಿತವಾಗಿ ಗುಣವಾಗುತ್ತವೆ. ಗರ್ಭ ಧರಿಸಿದ ಹಸುಗಳಲ್ಲಿ ಗರ್ಭಪಾತವಾಗಬಹುದು. ಮೂಗಿನ ಹೊಳ್ಳೆಗಳು, ಕೆಚ್ಚಲು ಮತ್ತು ಯೋನಿಯ ಮೇಲೆ ಹುಣ್ಣುಗಳು ಬೆಳೆಯಬಹುದು.
ಚಿಕಿತ್ಸೆ:
ರೋಗದ ಗುಣಲಕ್ಷಣಗಳು ಹಾಗೂ ರೋಗ ಚರಿತ್ರೆಯ ಆಧಾರದ ಮೇಲೆ ಪಶುವೈದ್ಯರು ರೋಗವನ್ನು ತಾತ್ಕಾಲಿಕವಾಗಿ ನಿರ್ಣಯಿಸಬಹುದು. ಅದಾಗ್ಯೂ ರೋಗದ ದೃಢೀಕರಣ ಪ್ರಯೋಗಾಲಯದ ಪರೀಕ್ಷೆಗಳಂದ ಮಾಡಿಸಬೇಕು. ರೋಗನಿರೋಧಕ ಶಕ್ತಿಯನ್ನು ವೃದ್ಧಿಸಲು ಪ್ರತಿಜೀವಕಗಳ ಜೊತೆ ಸಹ ಚಿಕಿತ್ಸೆಯನ್ನೂ ಪ್ರಾರಂಭಿಸಬೇಕು.
ರೋಗವನ್ನು ನಿಯಂತ್ರಿಸುವ ಕ್ರಮಗಳು:
ರೋಗನಿರೋಧಕ ಲಸಿಕೆ, ಸೋಂಕಿತ ಪ್ರಾಣಿಗಳನ್ನು ಬೇರ್ಪಡಿಸುವಿಕೆ, ಜಾನುವಾರು ಮಾರುಕಟ್ಟೆ ನಿಷೇಧಿಸುವಿಕೆ, ಸಾಧ್ಯವಾದಲ್ಲಿ ಸೊಳ್ಳೆ ಪರದೆ ಉಪಯೋಗಿಸುವಿಕೆ, ಕೀಟ ನಿವಾರಕಗಳು ಹಾಗೂ ಕೀಟನಾಶಕಗಳ ನಿಯಮಿತ ಬಳಕೆ, ಪ್ರಾಣಿಗಳ ಕೊಟ್ಟಡಿಗಳನ್ನು ಸೋಂಕು ನಿವಾರಕಗಳಿಂದ ನಿರ್ಮಲೀಕರಣ ಮಾಡುವುದು ಮತ್ತು ಕಳೇಬರವನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡುವುದು.
ಸೋಂಕನ್ನು ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕಾಗಿ ಲಸಿಕಾ ಕಾರ್ಯಕ್ರಮ ಅತ್ಯಂತ ಮುಖ್ಯವಾದ ಸಾಧನವಾಗಿದೆ. ಲಸಿಕೆಗೊಳಪಟ್ಟ ಪ್ರಾಣಿಗಳಲ್ಲಿ ಪ್ರತಿರಕ್ಷೆಯನ್ನು ಅಭಿವೃದ್ಧಿ ಮಾಡುವ ಮೂಲಕ ಸೋಂಕಿಗೆ ಒಳಗಾಗುವ ಪ್ರಾಣಿಗಳ ಒಟ್ಟು ಸಂಖ್ಯೆಗಳನ್ನು ಕಡಿಮೆ ಮಾಡುತ್ತದೆ. ಲಸಿಕೆಯನ್ನು ಹಾಕಿಸುವುದರಿಂದ ನೇರ ಮತ್ತು ಪರೋಕ್ಷ ಆರ್ಥಿಕ ನಷ್ಟವನ್ನು ತಪ್ಪಿಸಬಹುದು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಯುಪಿಎಸ್‌ಸಿ ಪರೀಕ್ಷಾ ಪೂರ್ವ ತರಬೇತಿಗೆ ಅರ್ಜಿ ಆಹ್ವಾನ

೧೪.೮೩ ಲಕ್ಷ ನಮೂನೆಗಳ ಡಿಜಿಟಲೀಕರಣ ಪೂರ್ಣ

ಜು.೨೬ ರಂದು ಸಣ್ಣ ಮತ್ತು ಜಿಲ್ಲಾ ಪತ್ರಿಕೆಗಳ ಸಂಘದ ಪದಗ್ರಹಣ

ಬೋರ್‌ವೆಲ್ ಕೊರೆಸುವ ಮೂಲಕ ನೀರಿನ ಸಮಸ್ಯೆಗೆ ಪರಿಹಾರ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಯುಪಿಎಸ್‌ಸಿ ಪರೀಕ್ಷಾ ಪೂರ್ವ ತರಬೇತಿಗೆ ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
  • ೧೪.೮೩ ಲಕ್ಷ ನಮೂನೆಗಳ ಡಿಜಿಟಲೀಕರಣ ಪೂರ್ಣ
    In (ರಾಜ್ಯ ) ಜಿಲ್ಲೆ
  • ಜು.೨೬ ರಂದು ಸಣ್ಣ ಮತ್ತು ಜಿಲ್ಲಾ ಪತ್ರಿಕೆಗಳ ಸಂಘದ ಪದಗ್ರಹಣ
    In (ರಾಜ್ಯ ) ಜಿಲ್ಲೆ
  • ಬೋರ್‌ವೆಲ್ ಕೊರೆಸುವ ಮೂಲಕ ನೀರಿನ ಸಮಸ್ಯೆಗೆ ಪರಿಹಾರ
    In (ರಾಜ್ಯ ) ಜಿಲ್ಲೆ
  • ಮುಳವಾಡ ಕೈಗಾರಿಕಾ ಪ್ರದೇಶಕ್ಕೆ ಡಿಸಿ ಡಾ.ಆನಂದ.ಕೆ ಭೇಟಿ
    In (ರಾಜ್ಯ ) ಜಿಲ್ಲೆ
  • ಕಾರಜೋಳ ವಸತಿ ಶಾಲೆಗೆ ಡಿಸಿ ಡಾ.ಆನಂದ್ ಭೇಟಿ
    In (ರಾಜ್ಯ ) ಜಿಲ್ಲೆ
  • ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವ ಎಚ್‌ಪಿವಿ ಲಸಿಕೆ :ಡಾ.ಮಾಗಿ
    In (ರಾಜ್ಯ ) ಜಿಲ್ಲೆ
  • ವಿಜಯಪುರ ಜಿಲ್ಲೆಯನ್ನು ಬರ ಪೀಡಿತವೆಂದು ಘೋಷಿಸಲು ಆಗ್ರಹ
    In (ರಾಜ್ಯ ) ಜಿಲ್ಲೆ
  • ಆಲಮಟ್ಟಿ ಡ್ಯಾಂನಿಂದ ೬೭,೫೦೦ ಕ್ಯೂಸೆಕ್ ನೀರು ಬಿಡುಗಡೆ
    In (ರಾಜ್ಯ ) ಜಿಲ್ಲೆ
  • ಕೊಲ್ಹಾರದಲ್ಲಿ ಆಧಾರ್ ಸೇವೆ ಸ್ಥಗಿತ: ಸಾರ್ವಜನಿಕರ ಪರದಾಟ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.