ವಿಜಯಪುರ: ಕರ್ನಾಟಕ ರಾಜ್ಯ ಉಪ್ಪಾರ ಸಂಘ,ಬೆಂಗಳೂರು ಇವರ ಆಶ್ರಯದಲ್ಲಿ ಸನ್ ೨೦೨೪ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿ.ಯು.ಸಿ.ಯಲ್ಲಿ ಶೇ.೯೦% ರಷ್ಟು ಅಂಕ ಪಡೆದು ಉತ್ತೀರ್ಣಗೊಂಡ ಉಪ್ಪಾರ ಸಮಾಜದ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಬೆಂಗಳೂರು ನಗರದ ಅರಮನೆ ಮೈದಾನದಲ್ಲಿ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಪ್ರತಿಭಾ ಪುರಸ್ಕಾರದ ದಿನಾಂಕ ಇನ್ನು ನಿಗದಿಯಾಗಿರುವದಿಲ್ಲ. ಅಲ್ಲಿಯವರೆಗೆ ನೀವು ತಮ್ಮ ಸ್ವ ವಿವರಗಳನ್ನು ಈ ಕೆಳಕಂಡ ಮೊಬೈಲ್ ಸಂಖ್ಯೆಗಳಿಗೆ ಸಂಪರ್ಕಿಸು ಮಾಹಿತಿ ಸಲ್ಲಿಸಬಹುದು.
ಕಾರಣ ವಿಜಯಪುರ ಜಿಲ್ಲೆಯ ಉಪ್ಪಾರ ಸಮಾಜದ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿ.ಯು.ಸಿ.ಯಲ್ಲಿ ಶೇ.೯೦% ಅಂಕ ಪಡೆದ ವಿದ್ಯಾರ್ಥಿ/ವಿದ್ಯಾರ್ಥಿನಿಯರು ತಮ್ಮ ಅಂಕಪಟ್ಟಿ ಹಾಗೂ ಸ್ವ ವಿವರಗಳೊಂದಿಗೆ ವಿಜಯಪುರ ಜಿಲ್ಲಾ ಉಪ್ಪಾರ ಸಮಾಜದ ಅಧ್ಯಕ್ಷರಾದ ಜಕ್ಕಪ್ಪ ಯಡವೆ ಮೊ:೯೪೮೩೨೪೮೫೦೮, ಪುಂಡಲೀಕ ಉಪ್ಪಾರ : ೦೮೩೫೨-೬೩೬೩೫೨ ಮಾಹಲಿಂಗ ಉಪ್ಪಾರ, ಸಿದ್ದು ಗೇರಡೆ ಮೊಬೈಲ್ ನಂ. ೯೦೦೮೮೪೫೯೮೬ ಇವರನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.
Subscribe to Updates
Get the latest creative news from FooBar about art, design and business.
ಉಪ್ಪಾರ ಸಮಾಜದ ವಿದ್ಯಾರ್ಥಿಗಳಪ್ರತಿಭಾ ಪುರಸ್ಕಾರ :ಅರ್ಜಿ ಆಹ್ವಾನ
Related Posts
Add A Comment
