Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಮಕ್ಕಳ ಸಾಹಿತ್ಯ ನಿರಂತರ ಹರಿವ ನದಿ ಇದ್ದಂತೆ

ಚಡಚಣ ತಾಲೂಕು ಕಾ.ನಿ.ಪನೂತನ ಪದಾಧಿಕಾರಿಗಳಿಗೆ ಸನ್ಮಾನ

ಕದಂಬ ಸೈನ್ಯ ಜಿಲ್ಲಾಧ್ಯಕ್ಷರಾಗಿ ಹಿರೇಮಠ ನೇಮಕ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಸಹಕಾರಿ ಸಂಸ್ಥೆಗಳೇ ರೈತರ ಜೀವಾಳ :ಸಚಿವ ಶಿವಾನಂದ
(ರಾಜ್ಯ ) ಜಿಲ್ಲೆ

ಸಹಕಾರಿ ಸಂಸ್ಥೆಗಳೇ ರೈತರ ಜೀವಾಳ :ಸಚಿವ ಶಿವಾನಂದ

By Updated:No Comments3 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಮೋರಟಗಿಯಲ್ಲಿ ಕೃಷಿ ಸಹಕಾರಿ ಸಂಘದ ನೂತನ ಕಟ್ಟಡ ಉದ್ಘಾಟನೆ

ಮೋರಟಗಿ: ಸಹಕಾರ ಸಂಸ್ಥೆಗಳು ಬದುಕಿದರೆ ಮಾತ್ರ ರೈತರಿಗೆ ಸರ್ಕಾರ ಸಹಕರಿಸಲು ಸಾಧ್ಯ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.
ಪಟ್ಟಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ ನಿ. ನೂತನ ಕಟ್ಟಡ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.
ರೈತರು ಉತ್ತಮ ಬದುಕು ನಡೆಸಲು ಮೊದಲು ಪ್ರಕೃತಿ ಒಲಿಯಬೇಕು. ನಂತರ ಸರ್ಕಾರ ಒಲಿಯಬೇಕು. ಇಂದು ರಾಜ್ಯದಲ್ಲಿ ೬೫ ಲಕ್ಷಕ್ಕೂ ಹೆಚ್ಚು ಜನ ಕೃಷಿಯನ್ನೇ ನಂಬಿ ಬದುಕು ನಡೆಸುತ್ತಿದ್ದಾರೆ ಎಂದರೆ ಸಹಕಾರಿ ಸಂಘಗಗಳೇ ಕಾರಣ. ಮೊದಲು ರೈತರಿಗೆ ಶೇ.೧೬ರಷ್ಟು ಬಡ್ಡಿ ದರದಲ್ಲಿ ಸಾಲ ದೊರೆಯುತ್ತಿತ್ತು. ನಂತರ ಶೇ.೧೨, ಶೇ.೭ ಹಾಗೂ ಶೇ.೩ರಂತೆ ಬಡ್ಡಿ ದರ ಕಡಿಮೆಯಾಗುತ್ತ ಬಂತು. ಸದ್ಯ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುತ್ತಿರುವ ರಾಜ್ಯ ಎಂಬ ಹೆಮ್ಮೆ ಕರ್ನಾಟಕದ್ದಾಗಿದೆ ಎಂದರು.
ಸರ್ಕಾರ ರೈತರ ಪರವಾಗಿ ನಿಲ್ಲದಿದ್ದರೆ ಕೃಷಿಕರು ಸಂಕಷ್ಟ ಎದುರಿಸಬೇಕಾಗುತ್ತದೆ. ರೈತರು ಸಾಕಷ್ಟು ಪರಿಶ್ರಮದಿಂದ ಬೆಳೆದೆರೂ ಸೂಕ್ತ ಬೆಲೆ ಸಿಗದೆ ತೊಂದರೆಗೆ ಸಿಲುಕುತ್ತಾರೆ. ರೈತರಿಗೆ ನೀರು, ವಿದ್ಯುತ್ ಕೊಡುವುದು ಎಷ್ಟು ಮುಖ್ಯವೋ ಅಷ್ಟೇ ಅವರ ಬೆಲೆಗೆ ಉತ್ತಮ ಬೆಲೆ ಸಿಗಬೇಕು. ರೈತರ ಬೆಳೆಗೆ ಬೆಲೆ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಅವರು ಇಂದಿಗೂ ಸಾಲದಲ್ಲೇ ಬದುಕುವಂತಾಗಿದೆ. ಈ ಭಾಗದ ರೈತರು ದ್ರಾಕ್ಷಿ, ಈರುಳ್ಳಿ, ತೊಗರಿ ಮತ್ತಿತರ ಬೆಳೆ ಬೆಳೆದರೂ ಸೂಕ್ತ ಬೆಲೆ ಸಿಗುತ್ತಿಲ್ಲ. ದೇಶದಲ್ಲಿ ಯಾವುದೇ ಉತ್ಪಾದನೆ ಉತ್ತಮ ಬೆಲೆ ಸಿಗುವಂತೆ ರೈತರ ಬೆಳೆಗಳಿಗೂ ಉತ್ತಮ ಬೆಲೆ ಸಿಗಬೇಕು ಎಂದರು.
ಇಂದು ಅವಿಭಜಿತ ವಿಜಯಪುರ ಜಿಲ್ಲೆಯಲ್ಲಿ ೨೮ ಕಾರ್ಖಾನೆಗಳು ರುವುದರಿಂದ ಕಬ್ಬಿಗೆ ಉತ್ತಮ ಬೆಲೆ ಸಿಗುತ್ತಿದೆ. ಕಬ್ಬು ಬೆಳೆಗಾರರಿಗೆ ಸಹಕಾರಿ ಸಂಸ್ಥೆಗಳೇ ಆಸರೆಯಾಗಿವೆ.
ರೈತರ ಬದುಕು ಹಸನಾಗಬೇಕಾದರೆ ಇಂಥ ಸಹಕಾರಿ ಸಂಸ್ಥೆಗಳು ಬೆಳೆಯಬೇಕು. ಈ ಊರಿನ ಹಿರಿಯರ ಪುಣ್ಯದಿಂದ ಪಟ್ಟಣದ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ ಶತಮಾನ ಕಂಡಿದೆ. ಲಾಭ ಕಡಿಮೆಯಾದರೂ ರೈತರಿಗೆ ಆಸರೆಯಾಗಿ ಈ ಸಂಸ್ಥೆ ಇಷ್ಟು ವರ್ಷ ಬದುಕಿದೆ ಎಂಬುದು ಅಭಿಮಾನದ ಸಂಗತಿ ಎಂದರು.
ಶಾಸಕ ಅಶೋಕ ಮನಗೂಳಿ ಮಾತನಾಡಿ, ರೈತರು, ಸದಸ್ಯರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ೧ ಕೋಟಿ, ೧೦ ಲಕ್ಷ ರೂ.ವೆಚ್ಚದಲ್ಲಿ ಸಂಸ್ಥೆಗೆ ಭವ್ಯ ಕಟ್ಟಡ ನಿರ್ಮಿಸಲಾಗಿದ್ದು, ಸಚಿವ ಶಿವಾನಂದ ಪಾಟೀಲರು ಇದನ್ನು ಲೋಕಾರ್ಪಣೆಗೊಳಿಸಿದ್ದು ಸಂತಸದ ಸಂಗತಿ.
ಶಿವಾನಂದ ಪಾಟೀಲರಿಗೆ ರೈತರ ಬಗ್ಗೆ ಅಪಾರ ಕಾಳಜಿ ಇದೆ.
೨೭ ವರ್ಷಗಳ ಸುದೀರ್ಘ ರಾಜಕೀಯ ಬದುಕಿನ ಜತೆಗೆ ಅಧ್ಯಕ್ಷರಾಗಿ ಡಿಸಿಸಿ ಬ್ಯಾಂಕ್ ಪುನರುಜ್ಜೀವನಗೊಳಿಸಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ ೨೭೨ ಸಂಘಗಗಳಲ್ಲಿ ೨೩೨ ಸಂಘಗಳಿಗೆ ಸ್ವಂತ ಕಟ್ಟಡಗಳಿವೆ. ಇದಕ್ಕೂ ಮುನ್ನ ಈ ಸಂಘಗಗಳ ಸ್ಥಿತಿ ದಯನೀಯವಾಗಿತ್ತು. ಶಿವಾನಂದ ಪಾಟೀಲರ ಮುಂದಾಲೋಚನೆ, ಬದ್ಧತೆ, ಸಹಕಾರಿ ರಂಗದ ಮೇಲೆ ಅವರಿಗೆ ಇರುವ ಪ್ರೀತಿ ಶ್ಲಾಘನೀಯ ಎಂದರು.
ಗ್ರಾಮೀಣ ಭಾಗದ ಸಹಕಾರಿ ಸಂಘಗಳು ೨೦ ವರ್ಷಗಳಲ್ಲಿ ಸಾಕಷ್ಟು ವೇಗ ಪಡೆದುಕೊಂಡಿವೆ. ಇದಕ್ಕೆ ಡಿಸಿಸಿ ಬ್ಯಾಂಕ್ ಸಹಕಾರವೇ ಕಾರಣ. ಇಂದು ಡಿಸಿಸಿ ಬ್ಯಾಂಕ್‌ನಿAದ ಲಕ್ಷಾಂತರ ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿದೆ. ಸಹಕಾರಿ ಸಂಘವನ್ನು ಕಟ್ಟಬಹುದು, ಆದರೆ ಅದನ್ನು ಉಳಿಸಿ ಬೆಳೆಸುವುದು ಸುಲಭವಲ್ಲ. ಪಟ್ಟಣದ ಸಂಘ ಬೆಳೆಯಲು ಹಿಂದಿನ ಆಡಳಿತ ಮಂಡಳಿ ಶ್ರಮ ಹಾಗೂ ಗ್ರಾಮಸ್ಥರ ಸಹಕಾರ ಕಾರಣ ಎಂದರು.
ಆಲಮೇಲದಲ್ಲಿ ತೋಟಗಾರಿಕೆ ಕಾಲೇಜ್ ಆರಂಭಿಸಲು ನಮ್ಮ ತಂದೆ ೨೦೧೯ರಲ್ಲಿ ಶ್ರಮಿಸಿದ್ದರು. ಮಂಜೂರು ಕೂಡ ಮಾಡಿಸಿದ್ದರು. ಸರ್ಕಾರಗಳು ಬದಲಾದ ಮೇಲೆ ಈ ಕಾರ್ಯ ಕುಂಠಿತವಾಗಿತ್ತು. ಆದರೆ ನಾನು ಶಾಸಕನಾದ ಮೇಲೆ ಶಿವಾನಂದ ಪಾಟೀಲರ ಸಹಕಾರದಿಂದ ಮತ್ತೆ ಮಂಜೂರಾಗಿದೆ ಎಂದ ಅವರು ಮೋರಟಗಿ ಮತ್ತು ಬಳಗಾನೂರ ಗ್ರಾಮಗಳನ್ನು ಹೋಬಳಿಗಳನ್ನಾಗಿ ಮೇಲ್ದರ್ಜೆಗೆ ಏರಿಸಲು ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದು ಸಚಿವರಲ್ಲಿ ವಿನಂತಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಮ ನಿ ಪ್ರ ಸಿದ್ದಲಿಂಗ ಮಹಾಸ್ವಾಮಿಗಳು ವೀರಕ್ತಮಠ ನೆಲೋಗಿ ಪಾವನ ಸಾನಿದ್ಯ ವಹಿಸಿದ್ದರು, ಪಿಕೆಪಿಎಸ್ ಅಧ್ಯಕ್ಷರು ವೀರನಗೌಡ ಪಾಟೀಲ್, ಮಾಜಿ ಜಿ ಪಂ ಸದಸ್ಯ ಎನ್ ಆಫ್ ತಿವಾರಿ, ಎಂ ಕೆ ಕಣ್ಣಿ, ಎನ್ ಎನ್ ಪಾಟೀಲ್, ಗ್ರಾ. ಪಂ. ಅಧ್ಯಕ್ಷರ ಪ್ರತಿನಿಧಿ ರವಿಕಾಂತ ನಡುವಿನಕೇರಿ, ಪಿಕೆಪಿಎಸ್ ಉಪಾಧ್ಯಕ್ಷ ಚನ್ನಬಸಪ್ಪ ದುದ್ದಗಿ, ಜೆ ಬಿ ಪಾಟೀಲ್ ಉಪ ಪ್ರಧಾನ ವ್ಯವಸ್ಥಾಪಕರು ವಿಜಯಪುರ, ಎಸ್ ಕೆ ವಡ್ಡರ ಸಹಾಯಕ ನಿಬಂಧಕರು ಸಹಕಾರಿ ಸಂಘ ಇಂಡಿ, ಆರ್ ಎಂ ಬಣಗಾರ ನಿವೃತ್ತ ವಿ ಡಿ ಸಿ ಅಧಿಕಾರಿಗಳು ವಿಜಯಪುರ, ಜಿ ಕೆ ನೆಲ್ಲಗಿ ಮಾಜಿ ಅಧ್ಯಕ್ಷರು ಪಿಕೆಪಿಎಸ್, ಇನಾಯತ ದೊಡಮನಿ, ರಜಾಕ ಬಾಗವನ, ಈರಣ್ಣ ಅರಕೇರಿ, ವಿದ್ಯಾದರು ಮಲಗಿ, ಮಲ್ಲಪ್ಪ ವಲಿಕಾರ್, ಸೈಪನ್ ಸಾಬ್ ಭಗವಾನ್, ಶಂಕ್ರಮ್ಮ ಬಿಸ್ಟಾಕಿ, ಅಂಬುಬಾಯಿ ಭಾರತಿ, ಸಂತೋಷ್ ಬಿರಾದಾರ್, ಶ್ರೀಮಂತ ತಿಪ್ಪಶೆಟ್ಟಿ, ಇರಬಸಪ್ಪ ಮಾದರ್, ಅಜರುದ್ದೀನ್ ಶಿಲೆದಾರ್, ಸಿದ್ದಣ್ಣ ಮಡ್ಡಿ, ಲಕ್ಷ್ಮಿ ಕೆರಿಗೊಂಡ ಸೇರಿದಂತೆ ಸುತ್ತಲಿನ ರೈತರು ಗ್ರಾಮಸ್ಥರು ಇದ್ದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಮಕ್ಕಳ ಸಾಹಿತ್ಯ ನಿರಂತರ ಹರಿವ ನದಿ ಇದ್ದಂತೆ

ಚಡಚಣ ತಾಲೂಕು ಕಾ.ನಿ.ಪನೂತನ ಪದಾಧಿಕಾರಿಗಳಿಗೆ ಸನ್ಮಾನ

ಕದಂಬ ಸೈನ್ಯ ಜಿಲ್ಲಾಧ್ಯಕ್ಷರಾಗಿ ಹಿರೇಮಠ ನೇಮಕ

ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ವಾಲಿ ಚನ್ನಪ್ಪ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಮಕ್ಕಳ ಸಾಹಿತ್ಯ ನಿರಂತರ ಹರಿವ ನದಿ ಇದ್ದಂತೆ
    In (ರಾಜ್ಯ ) ಜಿಲ್ಲೆ
  • ಚಡಚಣ ತಾಲೂಕು ಕಾ.ನಿ.ಪನೂತನ ಪದಾಧಿಕಾರಿಗಳಿಗೆ ಸನ್ಮಾನ
    In (ರಾಜ್ಯ ) ಜಿಲ್ಲೆ
  • ಕದಂಬ ಸೈನ್ಯ ಜಿಲ್ಲಾಧ್ಯಕ್ಷರಾಗಿ ಹಿರೇಮಠ ನೇಮಕ
    In (ರಾಜ್ಯ ) ಜಿಲ್ಲೆ
  • ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ವಾಲಿ ಚನ್ನಪ್ಪ
    In ವಿಶೇಷ ಲೇಖನ
  • ಅತಿಯಾದ ಯೋಚನೆಗೆ ಹಾಕಿ ಪೂರ್ಣ ವಿರಾಮ
    In ವಿಶೇಷ ಲೇಖನ
  • ಕೃಷಿ ಅಧಿಕಾರಿ ಮನೆ ಮೇಲೆ ದಾಳಿ: ರೂ.2.5 ಕೋಟಿ ಅಕ್ರಮ ಆಸ್ತಿ ಪತ್ತೆ
    In (ರಾಜ್ಯ ) ಜಿಲ್ಲೆ
  • ದೌರ್ಜನ್ಯ ಪ್ರಕರಣ ಗಂಭೀರವಾಗಿ ಪರಿಗಣಿಸಿ ಇತ್ಯರ್ಥಗೊಳಿಸಿ
    In (ರಾಜ್ಯ ) ಜಿಲ್ಲೆ
  • ಯಶಸ್ಸು ಸಾಧನೆಗೆ ಆಧ್ಯಾತ್ಮಿಕತೆ ನೆರವು :ಮೋಕ್ಷಾನಂದಜಿ
    In (ರಾಜ್ಯ ) ಜಿಲ್ಲೆ
  • ಬೆಂಬಲ ಬೆಲೆ ಯೋಜನೆ: ಮೆಕ್ಕೆಜೋಳ ಖರೀದಿಗೆ ರೈತರಿಂದ ನೋಂದಣಿ
    In (ರಾಜ್ಯ ) ಜಿಲ್ಲೆ
  • ಬೂದಿ ತುಂಬಿದ ವಾಹನಗಳಿಂದ ವಾಯು ಮಾಲಿನ್ಯ ತಡೆಗಟ್ಟಲು ಆಗ್ರಹ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2025 udayarashminews.com. Designed by udayarashmi news .

Type above and press Enter to search. Press Esc to cancel.