ಮುದ್ದೇಬಿಹಾಳ: ತಾಲೂಕಿನ ಆಲೂರು ಗ್ರಾಮದ ಪಾನ್ಶಾಪ್ ನಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಪ್ರಕರಣ ದಾಖಲಾಗಿದೆ.
ಬಸಪ್ಪ ಭೀಮಪ್ಪ ಬಿರಾದಾರ ಅಕ್ರಮ ಮಧ್ಯ ಮಾರಾಟಗಾರ. ಈತನು ತನ್ನ ಹತ್ತಿರ ಯಾವುದೇ ಪರ್ಮಿಟ ವ ಲೈಸನ್ಸ್ ಇಲ್ಲದೇ ಅನಧಿಕೃತವಾಗಿ ಮದ್ಯ ತುಂಬಿದ ಟೆಟ್ರಾ ಪ್ಯಾಕೇಟ್ಗಳನ್ನು ತನ್ನ ತಾಬಾದಲ್ಲಿ ಇಟ್ಟುಕೊಂಡು ಆಲೂರ ಗ್ರಾಮದ ಬಸ್ ನಿಲ್ದಾಣ ಹತ್ತಿರ ಇರುವ ತನ್ನ ಪಾನ್ ಶಾಪ್ ನಲ್ಲಿ ಅಕ್ರಮ ಮಧ್ಯ ಮಾರಾಟ ಮಾಡುವಾಗ ಪೊಲೀಸರ ಕೈಗೆ ಸಿಕ್ಕಿದ್ದು ಪಿಎಸ್ಐ ಸಂಜೀವ ತಿಪರೆಡ್ಡಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ.
ಆರೋಪಿತನಿಂದ ೧೮೦ ಎಮ್ಎಲ್ದ ಬ್ಯಾಗ್ಪೈಪರ್ ಅಂತಾ ಬರೆದ ಒಟ್ಟು ೧೨ ವಿಸ್ಕಿ ಪ್ಯಾಕೆಟ್ಗಳು, ೧೨ ಟುಬರ್ಗ ಪ್ರೀಮಿಯಮ್ ಬಿಯರ್ ಬಾಟಲಿಗಳನ್ನು ವಶಕ್ಕೆ ಪಡೆಯಲಾಗಿದೆ.
Subscribe to Updates
Get the latest creative news from FooBar about art, design and business.
Related Posts
Add A Comment
