ತಿಕೋಟಾ: ತಾಲ್ಲೂಕಿನ ಅರಕೇರಿ ಸಮೀಪದ ಮುಮ್ಮೆಟ್ಟ ಗುಡ್ಡದ ಅಮೋಘಸಿದ್ದ ದೇವಸ್ಥಾನಕ್ಕೆ ಭಕ್ತರು ಹೋಗಲು ಅನೂಕೂಲವಾಗಲೆಂದು ವಿಜಯಪುರ ಕೇಂದ್ರ ಬಸ್ ನಿಲ್ದಾಣದಿಂದ ಬಸ್ ಸೇವೆ ಆರಂಭಿಸುವಂತೆ ಸಚಿವ ಎಂ.ಬಿ.ಪಾಟೀಲ ನೀಡಿದ ನಿರ್ದೆಶನದಂತೆ ಆಪ್ತ ಕಾರ್ಯದರ್ಶಿ ಸಂತೋಷ ಲೋಕುರೆ ಅವರು ಡಿಟಿಓ ದೇವಾನಂದ ಬಿರಾದಾರ ಅವರಿಗೆ ವಿನಂತಿಸಿದ್ದರಿಂದ ಬುಧವಾರ ಬಸ್ ಸೇವೆ ಆರಂಭವಾಯಿತು.
ವಿಜಯಪುರ ಕೇಂದ್ರ ಬಸ್ ನಿಲ್ದಾಣದಿಂದ ಬೆಳಗ್ಗೆ ಎಂಟು ಗಂಟೆಗೆ, ಮದ್ಯಾಹ್ನ ಒಂದು ಗಂಟೆಗೆ, ಸಾಯಂಕಾಲ ಐದು ಗಂಟೆಗೆ ವಿಜಯಪುರದಿಂದ ಮುಮ್ಮೆಟ್ಟಿಗುಡ್ಡಕ್ಕೆ ಹೊರಡುವದು. ಕೇಂದ್ರ ಬಸ್ ನಿಲ್ದಾಣದಿಂದ ರಾಮಮಂದಿರ ಲಿಂಗದಗುಡಿರಸ್ತೆ, ಬಂಜಾರಾಕ್ರಾಸ್, ಬಾಯ್ ಪಾಸ್, ಮೋತಾಬಾಯಿಕ್ರಾಸ್, ಕರಾಡದೊಡ್ಡಿ ಕ್ರಾಸ್, ಅರಕೇರಿ, ಅರಕೇರಿ ಎಲ್.ಟಿ.2, ಅರಕೇರಿ ಎಲ್.ಟಿ.3 ಮಾರ್ಗವಾಗಿ ಮುಮ್ಮೆಟ್ಟಿಗುಡ್ಡ ತಲುಪುವದು.
ವಿಶೇಷ ಪೂಜೆ: ನೂತನವಾಗಿ ಆರಂಭವಾದ ಬಸ್ ಗೆ ತೆಂಗಿನ ಗರಿ ಹಾಗೂ ಹೂವುಗಳಿಂದ ಸಿಂಗರಿಸಿ ಬಲೂನಗಳನ್ನು ಕಟ್ಟಿ ಪೂಜೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮುಮ್ಮೆಟ್ಟಿಗುಡ್ಡದ ಪೂಜಾರಿ ನಾಡಗೌಡ ಒಡೆಯರ್, ಮುಖಂಡರಾದ ಅರವಿಂದ ರಾಠೋಡ, ರಾವಸಾಬ ಮಾನೆ, ಸೊಮು ಬರಕಡೆ, ಪ್ರಕಾಶ ರಾಠೋಡ, ಸಿದ್ದು ದಳವಾಯಿ, ಬಾಜಿರಾಯ ಖರೆ, ಗೋವಿಂದ ರಾಠೋಡ, ಮಾಸಿದ್ದ ಜಿಡ್ಡಿಮನಿ, ಸಂಜು ಖರೆ ಇತರರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

