ವಿಜಯಪುರ: ನಗರದ ಹೊರ ವಲಯದಲ್ಲಿರುವ ಅರಕೇರಿ ಗ್ರಾಮದಲ್ಲಿರುವ ಇಂಡಿಯಾ ರಿಸರ್ವ ಬಟಾಲಿಯನಲ್ಲಿ ಪ್ರತಿವರ್ಷದಂತೆ ಈ ವರ್ಷವು ೨೦೨೪ರ ವಿಶ್ವ ಪರಿಸರ ದಿನವನ್ನು “ಭೂಮಿ ಮರುಸ್ಥಾಪನೆ, ಮರುಭೂಮಿ ಮತ್ತು ಬರ ಸ್ಥಿತಿಸ್ಥಾಪಕತ್ವ” ಎಂಬ ಘೋಷವಾಕ್ಯ ಪ್ರಮುಖ ಆಧಾರ ಸ್ಥಂಭವಾಗಿಟ್ಟುಕೊಡು,ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಎನ್.ಬಿ.ಮೆಳ್ಳೆಗಟ್ಟಿ ಕೆ.ಎಸ್.ಪಿ.ಎಸ್ ಕಮಾಂಡೆಂಟ್ ಐ.ಆರ್.ಬಿ ವಿಜಯಪುರ ರವರು ವಿಶ್ವ ಪರಿಸರ ದಿನ ಕಾರ್ಯಕ್ರಮ ಉಧ್ಘಾಟನೆ ಮಾಡಿ, ಜೈವಿಕ ವೈವಿಧ್ಯತೆ ಹಾಗೂ ನೈಸರ್ಗಿಕ ಆವಾಸಸ್ಥಾನಗಳನ್ನು ರಕ್ಷಿಸಲು ಮತ್ತು ಕ್ಷೀಣಿಸಿದ ಪರಿಸರ ವ್ಯವಸ್ಥೆಗಳನ್ನು ಪುನಃ ಸ್ಥಾಪಿಸಲು ಸಾಮೂಹಿಕ ಪ್ರಯತ್ನಗಳಿಗೆ ಕರೆ ನೀಡಿದರು.
ಪರಿಸರ ವ್ಯವಸ್ಥೆಯ ಸಂರಕ್ಷಣೆಯ ಮೇಲೆ ಕೇಂದ್ರೀಕರಿಸುವ ಮೂಲಕ, ಹವಾಮಾನ ಬದಲಾವಣೆಯಿಂದ ನಾವು ವ್ಯಾಪಕವಾದ ಪರಿಸರ ಸವಾಲುಗಳನ್ನು ಎದುರಿಸಬಹುದು, ಅದ್ದರಿಂದ ಎಲ್ಲರೂ ಪರಿಸರವನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಸುಸ್ಥಿರ ಭವಿಷ್ಯವನ್ನು ನಿರ್ಮಿಸುವಲ್ಲಿ ನಾವೆಲ್ಲರೂ ಪಾತ್ರವಹಿಸಬೇಕಾಗಿದೆ. ನಮ್ಮ ಉಸಿರಿಗಾಗಿ ಹಸಿರನ್ನು ಬೆಳೆಸೋಣ, ಪ್ರತಿಯೊಬ್ಬರು ಸಸಿನೆಟ್ಟು ಮರಗಳನ್ನು ಬೆಳೆಸೋಣ ಈ ಭೂಮಿಯನ್ನು ಹಸಿರುಮಯಗೊಳಿಸೋಣ ಎಂದು ತಿಳಿಸಿ ಅಧ್ಯಕ್ಷೀಯ ಭಾಷಣವನ್ನು ಮಾಡಿದರು.
ಈ ಕಾರ್ಯಕ್ರದಲ್ಲಿ ಮುಖ್ಯ ಅತಿಥಿಗಳಾಗಿ ಡಾ. ಭೀಮಪ್ಪ ಎ. ಡೀನ್ ಕೃಷಿ ಮಹಾ ವಿಧ್ಯಾಲಯ, ವಿಜಯಪುರ, ಭೂಮಿಯ ಮೇಲಿನ ಜೀವಿಗಳನ್ನು ಉಳಿಸಿಕೊಳ್ಳಲು ಅಗತ್ಯವಾದ ಪರಿಸರ ವ್ಯವಸ್ಥೆಯನ್ನು ರಕ್ಷಿಸಿ ಸಮತೋಲನ ಕಾಪಾಡಿಕೊಳ್ಳಲು ಜೈವಿಕ ಗೊಬ್ಬರ, ನೀರಿನ ಸಂರಕ್ಷಣೆ ಹಾಗೂ ಪರಿಸರ ಮಾಲಿನ್ಯ ಉಂಟುಮಾಡುವ ವಾಹನಗಳನ್ನು ನಿಯಂತ್ರಣ ಮಾಡಿ, ಮಾಲಿನ್ಯ ಉಂಟುಮಾಡುವ ಅನೀಲಗಳನ್ನು ನಿಯಂತ್ರಿಸಿ ಹಸಿರುಮನೆ ಪರಿಣಾಮದಿಂದ ನಮ್ಮ ಪರಿಸರವನ್ನು ಸಂರಕ್ಷಣೆಮಾಡಿ, ಜೀವ ಭೂಮಿಯನ್ನು ಹಸಿರುಗೋಳಿಸಿ ಮುಂದಿನ ಪೀಳಿಗೆಗೆ ಜವಾಬ್ಧಾರಿಯುತ ಕರ್ತವ್ಯ ನಿರ್ವಹಿಸೋಣ ಎಂದು ಹೇಳಿದರು.
ಶರಣಬಸವ ಸಹಾಯಕ ಕಮಾಂಡೆಂಟ್ ಐ.ಆರ್.ಬಿ ವಿಜಯಪುರ.ಶ್ರೀ ಪ್ರಭುಲಿಂಗ ಬ್ಯುಯ್ಯರ ಆರ್.ಎಫ್. ಒ ಜಲಾನಯನ ಇಲಾಖೆ ವಿಜಯಪುರ. ಮತ್ತು ಗಿರೀಶ ಹುಲಕಟ್ಟಿ ಆರ್.ಎಫ್.ಒ ಅರಣ್ಯ ಇಲಾಖೆ ವಿಜಯಪುರ, ಐ.ಆರ್.ಬಿ.ಪೊಲೀಸ್ ಪಡೆಯ ಇನ್ಸ್ಪೆಕ್ಟರ್ ರ್ದರ್ಜೆಯ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿವರ್ಗ, ಮತ್ತು ಮುರಾರ್ಜಿ ದೇಸಾಯಿ ವಸತಿ ಶಾಲೆಯ ಶಿಕ್ಷಕರು ಮತ್ತು ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿಶ್ವ ಪರಿಸರ ದಿನಾಚರಣೆ ಮತ್ತು ಸಸಿ ನೇಡುವ ಕಾರ್ಯಕ್ರಮವನ್ನು ಮಹಾಂತೇಶ ಇಟ್ಟಿ ಆರ್.ಪಿ.ಐ ಐ.ಆರ್.ಬಿ ವಿಜಯಪುರ ಸ್ವಾಗತಿಸಿ ನಿರೂಪಿಸಿದರು.
Subscribe to Updates
Get the latest creative news from FooBar about art, design and business.
ಪರಿಸರ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ :ಮೆಳ್ಳೆಗಟ್ಟಿ
Related Posts
Add A Comment

