ವಿಜಯಪುರ: ಆರೋಗ್ಯ ಇಲಾಖೆ ಹಾಗೂ ಸರಕಾರಿ ನರ್ಸಿಂಗ್ ಮಹಾವಿದ್ಯಾಲಯ, ಸರಕಾರಿ ನರ್ಸಿಂಗ್ ಶಾಲೆ ವಿಜಯಪುರ ಸಹಯೋಗದಲ್ಲಿ ಜೂ.೫ ರಂದು ವಿಜಯಪುರದ ಪ್ಯಾರಾಮೆಡಿಕಲ್ ಸಂಸ್ಥೆಯಲ್ಲಿ ವಿಶ್ವ ಪರಿಸರ ದಿನ ಆಚರಿಸಲಾಯಿತು.
ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಶ್ರೀ ಸಿದೇಶ್ವರ ಸ್ವಾಮಿಗಳ ವನದಲ್ಲಿರುವ ೬೦೦ ಮತ್ತು ಬೃಂದಾವನದಲ್ಲಿರುವ ೭೦೦ ಸಸಿಗಳಿಗೆ ನೀರುಣಿಸುವ ಮೂಲಕ ಪರಿಸರ ಪ್ರಜ್ಞೆ ಮೆರೆಯಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ|| ಶಿವಾನಂದ ಮಾಸ್ತಿಹೋಳಿ, ಸ್ಥಳೀಯ ವೈದ್ಯಾಧಿಕಾರಿಗಳಾದ ಡಾ|| ಚಂದು ರಾಠೋಡ ಮತ್ತು ಡಾ|| ಎ. ಜಿ. ಬಿರಾದಾರ, ನರ್ಸಿಂಗ ಗ್ರೇಡ ೧ ರಾದ ಶ್ರೀಮತಿ ಸುಜಾತಾ ಭಜಂತ್ರಿ, ನರ್ಸಿಂಗ ಸೂಪರವೈಜರಾದ ಶ್ರೀಮತಿ ವಿಣಾ ಕುಲಕರ್ಣಿ, ಶ್ರೀಮತಿ ಭಾರತಿ ಸೂರಗಾವಿ ನರ್ಸಿಂಗ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಶ್ರೀಮತಿ ಗೀತಾ ತರವಿ, ನರ್ಸಿಂಗ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಭಾರತಿ ಮೋಕಾಶಿ, ಎಲ್ಲ ಭೋದಕರು ಮತ್ತು ವಿದ್ಯಾರ್ಥಿಗಳು ಉಪಸ್ತಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

