ದೇವರಹಿಪ್ಪರಗಿ: ಪ್ರತಿ ಮೂರು ವರ್ಷಗಳಿಗೊಮ್ಮೆ ಆಚರಿಸಲ್ಪಡುವ ಇಬ್ರಾಹಿಂಪೂರ ಗ್ರಾಮದೇವತೆ ದ್ಯಾಮವ್ವದೇವಿ ಜಾತ್ರಾ ಮಹೋತ್ಸವ ದಿ:೬ ರಂದು(ಇಂದು) ಆರಂಭಗೊಳ್ಳಲಿದೆ
ದಿ:೬ ಗುರುವಾರ(ಇಂದು) ಮುಂಜಾನೆ ೮ ಗಂಟೆಗೆ ದೇವಿಯು ಗಂಗಾಸ್ಥಳ ಮಾಡಿಕೊಂಡು ಪೋತರಾಜರೊಂದಿಗೆ ಕುಂಭ, ಕಳಸ, ಡೋಳ್ಳು ಕುಣಿತದೊಂದಿಗೆ ಬಂಡಿಯಲ್ಲಿ ಮೆರವಣಿಗೆಯಲ್ಲಿ ಹೊರಟು, ಅಗಸಿಯಲ್ಲಿನ ಲಕ್ಷ್ಮೀ ದೇವಸ್ಥಾನ ಕಟ್ಟಿಯಲ್ಲಿ ಪ್ರತಿಷ್ಠಾಪನೆಗೊಳ್ಳಲಿದ್ದಾಳೆ. ನಂತರ ದಿ:೭ ಶುಕ್ರವಾರದಂದು ಪುನಃ ಕುಂಭ, ಕಳಸ, ಡೋಳ್ಳು ಕುಣಿತದೊಂದಿಗೆ ಬಂಡಿಯಲ್ಲಿ ಮೆರವಣಿಗೆಯಲ್ಲಿ ಹೊರಟು, ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮೂಲ ದೇವಸ್ಥಾನಕ್ಕೆ ತಲುಪುವಳು. ಅದೇ ದಿನ ರಾತ್ರಿ ಶ್ರೀರಾಘವೇಂದ್ರ ಕೃಷ್ಣ ಪಾರಿಜಾತ ಕಂಪನಿಯಿಂದ ಶ್ರೀಕೃಷ್ಣ ಪಾರಿಜಾತ ಎಂಬ ಪೌರಾಣಿಕ ನಾಟಕ ಜರುಗುವುದು ಎಂದು ಜಾತ್ರಾ ಸಮೀತಿ ಪ್ರಕಟಣೆ ಮೂಲಕ ತಿಳಿಸಿದೆ.
Subscribe to Updates
Get the latest creative news from FooBar about art, design and business.
Related Posts
Add A Comment
