ಮುದ್ದೇಬಿಹಾಳ: ಪಟ್ಟಣದ ಎ.ಪಿ.ಎಂ.ಸಿ ಆವರಣದಲ್ಲಿರುವ ಹನುಮಂತ ದೇವರ ಗುಡಿಯ ಹಿಂದೆ ತಮ್ಮ ಪಾಯಿದೆಗೋಸ್ಕರ ಇಸ್ಪೀಟ್ ಆಡುತ್ತಿದ್ದ ೮ ಜನರ ವಿರುದ್ಧ ಇಲ್ಲಿನ ಪಿಎಸ್ಐ ಸಂಜೀವ ತಿಪರೆಡ್ಡಿ ಪ್ರಕರಣ ದಾಖಲಿಸಿದ್ದಾರೆ.
ಪಟ್ಟಣದ ಬಸವರಾಜ ಕಡಿ, ಸಂಗಪ್ಪ ಮದರಿ, ಈರಣ್ಣ ಬಿರಾದಾರ, ಬಸವರಾಜ ನರಸಲಗಿ, ಹನುಮಂತ ಕನ್ನೊಳ್ಳಿ, ಶ್ರೀಶೈಲ ರೇವಡಿ, ತಾಲೂಕಿನ ಕುಂಟೋಜಿ ಗ್ರಾಮದ ಮಹಾಂತೇಶ ಒಣರೊಟ್ಟಿ, ಮುರಾಳ ಗ್ರಾಮದ ಪರಶುರಾಮ ಜೋಗಿನ್ ಇವರ ಮೇಲೆ ಪ್ರಕರಣ ದಾಖಲಾಗಿದ್ದು ಇಸ್ಪೀಟ್ ಎಲೆಗಳು ಮತ್ತು ಹಣವನ್ನು ವಶಕ್ಕೆ ಪಡೆಯಲಾಗಿದೆ.
Subscribe to Updates
Get the latest creative news from FooBar about art, design and business.
Related Posts
Add A Comment
