ವಿಜಯಪುರ: ನಗರದಲ್ಲಿ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಬಾಲ ಕಾರ್ಮಿಕ ಮತ್ತು ಕಿಶೋರ ಕಾಯ್ದೆಯಡಿ ಸೋಮವಾರ ಅನಿರೀಕ್ಷಿತ ಹಠಾತ್ ದಾಳಿ ಕೈಗೊಂಡು 4 ಮಕ್ಕಳ ರಕ್ಷಣೆಯನ್ನು ಮಾಡಿ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರು ಪಡಿಸಲಾಗಿದೆ.
ಅಲ್ಲದೆ ಬಾಲಕಾರ್ಮಿಕ ಪದ್ಧತಿಯ ಕುರಿತು ನಗರದಲ್ಲಿ ಪ್ರತಿಯೊಂದು ಸಂಸ್ಥೆಗಳಿಗೆ ಭೇಟಿ ನೀಡಿ ಅರಿವು ಮೂಡಿಸಲಾಯಿತು.
ಕರಪತ್ರ ಹಾಗೂ ಸ್ಟೀಕರ್ ಮೂಲಕ ಸಾರ್ವಜನಿಕರಲ್ಲಿ ಹಾಗೂ ಅಂಗಡಿ, ವಿವಿಧ ಸಂಸ್ಥೆಗಳ ಮಾಲೀಕರಲ್ಲಿ ಜನಜಾಗೃತಿಯನ್ನು ಮೂಡಿಸಲಾಯಿತು.
ದಾಳಿಯಲ್ಲಿ ಕಲಂ 17 ರಡಿ ನೇಮಕಗೊಂಡ ವಿವಿಧ ಇಲಾಖೆಯ ಅಧಿಕಾರಿಗಳಾದ S G ಖೈನೂರ, ಜಗದೇವಿ ಸಜ್ಜನ, ನೀಲಮ್ಮ ಖೇಡಗಿ, S S ಅಳ್ಳಗಿ, L S ಬಿರಾದಾರ, C M ಕೋರೆ, V K ಹೊಸಮನಿ, B P ಜಕ್ಕನಗೌಡರ, ಗಿರೀಶ, ಮಹೇಶ ಚವ್ಹಾಣ, ಸರಸ್ವತಿ ಔಟಿ ಹಾಗೂ ಸಚಿನ ಕಟ್ಟಿ ಈ ದಾಳಿಯಲ್ಲಿ ಹಾಜರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

