ಕೆಂಭಾವಿ: ರೈತ ಸಂಘದ ಹೋರಾಟಗಾರ ಮತ್ತು ಮಾಹಿತಿ ಹಕ್ಕು ಕಾರ್ಯಕರ್ತ
ದೇವಿಂದ್ರಪ್ಪ ಗೌಡ.ವಿ.ಪೊಲೀಸ ಪಾಟೀಲ ಮಾಲಗತ್ತಿ ಇವರನ್ನು
ಯಾದಗಿರಿ ಜಿಲ್ಲಾಧ್ಯಕ್ಷರಾಗಿ ಹಾಗೂ ಜಿಲ್ಲಾ ಗೌರವ ಅಧ್ಯಕ್ಷರಾಗಿ ಬಸವರಾಜಪ್ಪ ಗೌಡ. ಜಿ. ಮಾಲಿ ಪಾಟೀಲ ಹೆಮ್ಮಡಗಿ ಇವರನ್ನು ಆಯ್ಕೆ ಮಾಡಿ ವೇದಿಕೆ ರಾಜ್ಯಾಧ್ಯಕ್ಷ
ವಿ. ಹನುಮಂತರಾಯಪ್ಪ ಆದೇಶ ಹೊರಡಿಸಿದ್ದಾರೆ.
ವೇದಿಕೆಯ ನೀತಿ ನಿಯಮಗಳ ಅಡಿಯಲ್ಲಿ ಅಸಹಾಯಕರು, ಅಶಕ್ತರು, ರೈತರ ಸಾರ್ವಜನಿಕರ ಕೆಲಸ ಮಾಡುವುದು ಹಾಗೂ ವೇದಿಕೆ ಮೂಲ ಉದ್ದೇಶಗಳ
ಹಿತ ಕಾಪಾಡುವುದು, ಮುಂದಿನ ದಿನಗಳಲ್ಲಿ ಯಾದಗಿರಿ ಜಿಲ್ಲೆಯಾದ್ಯಂತ ಪದಾಧಿಕಾರಿಗಳನ್ನು ಆಯ್ಕೆ ಮಾಡಿಕೊಂಡು ಸಂಘಟನೆಗೆ ಒತ್ತು ನೀಡಲು ಆದೇಶ ನೀಡಲಾಗಿದೆ ಎಂದು ರಾಜ್ಯಾಧ್ಯಕ್ಷ
ವಿ. ಹನುಮಂತರಾಯಪ್ಪ
ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

