ವಿಜಯಪುರ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಕೇಂದ್ರ ಬಜೆಟ್ ಜನಪರವಾಗಿದ್ದು ಜನರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ.
ಈ ಕುರಿತು ಬಜೆಟ್ ಪ್ರತಿಕ್ರಿಯೆ ನೀಡಿರುವ ಅವರು, ಚುನಾವಣೆ ದೃಷ್ಟಿಕೋನ ಇರಿಸದೇ ಜನಪರ ನಿಲುವಿನ ಹಾಗೂ ದೇಶದ ಪ್ರಗತಿಯ ದೃಷ್ಟಿಯಿಂದ ಬಜೆಟ್ ಮಂಡನೆಯಾಗಿದೆ.
ಯಾವ ಹೊಸ ತೆರಿಗೆಯನ್ನು ವಿಧಿಸದೇ ಜನಸಾಮಾನ್ಯರಿಗೆ ಅನುಕೂಲ ಕಲ್ಪಿಸಲಾಗಿದೆ, ಸೋಲಾರ್ ಮೂಲಕ ಮನೆ ಮನೆಗೂ ಉಚಿತವಾಗಿ ವಿದ್ಯುತ್ ಪೂರೈಸುವ ಸಂಕಲ್ಪವನ್ನು ಮಾಡಿರುವುದು ಒಂದು ಉತ್ತಮ ಹೆಜ್ಜೆಯಾಗಿದೆ. ಮಾರಕ ಕ್ಯಾನ್ಸರ್ ರೋಗದಿಂದ ತಪ್ಪಿಸಲು ಮಕ್ಕಳಿಗೆ ವಿಶೇಷ ಲಸಿಕೆ ನೀಡಲು ಮುಂದಾಗಿರುವುದು ಕೇಂದ್ರ ಸರ್ಕಾರದ ಆರೋಗ್ಯ ಕಾಳಜಿಯ ಉದಾಹರಣೆಯಾಗಿದೆ. ಒಟ್ಟಾರೆಯಾಗಿ ರೈತಪರ, ಶ್ರೀಸಾಮಾನ್ಯನ ಪರ, ದುಡಿಯುವ ವರ್ಗದ ಪರವಾದ ಬಜೆಟ್ ಮಂಡನೆಯಾಗಿದೆ ಎಂದು ಅವರು ಹೇಳಿದ್ದಾರೆ.
ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕುಚಬಾಳ ಸಹ ಪ್ರತಿಕ್ರಿಯೆ ನೀಡಿ, ಜನಪ್ರಿಯತೆಗಿಂತ ಜನಪರತೆಗೆ ಒತ್ತು ನೀಡಿರುವುದು ಕೇಂದ್ರ ಬಿಜೆಪಿ ಸರ್ಕಾರದ ಜನಪರ ಕಾಳಜಿಗೆ ಸಾಕ್ಷಿಯಾಗಿದೆ. ಎಲ್ಲ ವರ್ಗಗಳ ಕಲ್ಯಾಣ ಕೇಂದ್ರಿಕರಿಸಿ ಬಜೆಟ್ ಮಂಡನೆಯಾಗಿದೆ. ವಿಶ್ವ ಆರ್ಥಿಕ ರಂಗದಲ್ಲಿ ಭಾರತ ಮುನ್ನಡೆಯಲು ಪೂರಕವಾಗಿ ಈ ಬಜೆಟ್ ರೂಪಿಸಿ ಮಂಡಿಸಲಾಗಿದೆ. ರೈತರಿಗೆ ೧ ಲಕ್ಷ ರೂ. ಶೂನ್ಯ ಬಡ್ಡಿದರದಲ್ಲಿ ಸಾಲ,
ಪಿಎಂ ಆವಾಸ್ ಯೋಜನೆಯಡಿಯಲ್ಲಿ ೩ ಕೋಟಿ ರೂ.ಮನೆ ನಿರ್ಮಾಣ, ಮೀನುಗಾರಿಕಾ ವಲಯದಲ್ಲಿ ೫೫ ಲಕ್ಷ ಹೊಸ ಉದ್ಯೋಗ
ಸೃಷ್ಟಿ ಹೀಗೆ ದುಡಿಯುವ ಕೈಗಳಿಗೆ ಕೆಲಸ, ಬಡವರಿಗೆ ಅಭಯ, ಮಹಿಳಾ ಸಬಲೀಕರಣ ಒತ್ತು ಹೀಗೆ ಎಲ್ಲ ವಲಯಗಳಲ್ಲಿಯೂ ಬಜೆಟ್ ವ್ಯಾಪಿಸಿದೆ, ಇದು ಒಂದು ಅದ್ಭುತ ಬಜೆಟ್ ಎಂದು ಅವರು ಹೇಳಿದ್ದಾರೆ.
ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಅವರು ಪ್ರತಿಕ್ರಿಯೆ ನೀಡಿ, ಆರೋಗ್ಯದ ಬಗ್ಗೆ ಈ ಬಜೆಟ್ ನಲ್ಲಿ ಒತ್ತು ನೀಡುವ ಮೂಲಕ ಆರೋಗ್ಯ ಭಾಗ್ಯ ಕರುಣಿಸುವ ಪಣ ತೊಡಲಾಗಿದೆ. ಮಾರಕ ಕ್ಯಾನ್ಸರ್ ರೋಗದಿಂದ ರಕ್ಷಿಸಲು ಮಕ್ಕಳಿಗೆ ವ್ಯಾಕ್ಸೀನ್, ಆಸ್ಪತ್ರೆಗಳ ಕುಂದುಕೊರತೆಗಳನ್ನು ನಿವಾರಿಸಲು ವಿಶೇಷ ಸಮಿತಿ ರಚನೆ ಹೀಗೆ ಅನೇಕ ಕ್ರಮ ಕೈಗೊಳ್ಳುವ ಘೋಷಣೆ ಮಾಡಿರುವುದು ಜನರ ಆರೋಗ್ಯಕ್ಕೆ ಆದ್ಯತೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.
ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪೂರ, ಪ್ರತಿಕ್ರಿಯೆ ನೀಡಿ,
ಲಕ್ ಪತಿ ದೀದಿ ಯೋಜನೆ ಗುರಿ ಹೆಚ್ಚಿಸಿ ೩ ಕೋಟಿ ಮಹಿಳೆಯರನ್ನು ಆರ್ಥಿಕ ಸಬಲೀಕರಣವಾಗಿಸುವ ಮಹತ್ವದ ಯೋಜನೆ, ಸೋಲಾರ್ ಮೂಲಕ ಮನೆಗಳಿಗೆ ಉಚಿತ ವಿದ್ಯುತ್ ಪೂರೈಕೆಗೆ ಒತ್ತು ನೀಡಿರುವುದು ಹೀಗೆ ಪ್ರತಿ ಅಂಶವೂ ಜನಪರವಾಗಿದೆ, ಇದು ಜನರು ಮೆಚ್ಚಿದ ಬಜೆಟ್ ಎಂದು ಹೇಳಿದರು.
ಕರ್ನಾಟಕ ಸಾವಯವ ಬೀಜ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ ಪ್ರತಿಕ್ರಿಯೆ ನೀಡಿ, ಕೇಂದ್ರ ಬಜೆಟ್ ಚುನಾವಣಾ ದೃಷಿಕೋನದ ಬಜೆಟ್ ಆಗದೇ ಜನರ ಹಾಗೂ ದೇಶದ ಪ್ರಗತಿಯ ಬಜೆಟ್ ಆಗಿದೆ. ಕೋವಿಡ್ ಕಾಲಘಟ್ಟದಲ್ಲಿ ಜೀವವನ್ನೇ ಪಣಕ್ಕಿಟ್ಟು ದುಡಿದ ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೂ ಆಯುಷ್ಮಾನ್ ವಿಸ್ತರಣೆ ಮಾಡಿರುವುದು ಅಭೂತಪೂರ್ವ ಸಂಗತಿ ಎಂದು ಅವರು ಹೇಳಿದ್ದಾರೆ.
ಕರ್ನಾಟಕ ಲಿಂಬೆ ಅಭಿವೃದ್ದಿ ಮಂಡಳಿ ಮಾಜಿ ಅಧ್ಯಕ್ಷ ಚಂದ್ರಶೇಖರ ಕವಟಗಿ ಪ್ರತಿಕ್ರಿಯೆ ನೀಡಿ, ಇಂಧ್ರಧನುಷ್ ಯೋಜನೆ ದೇಶದಾದ್ಯಂತ ವಿಸ್ತರಣೆ, ೧ ಕೋಟಿ ಮನೆಯ ಮಾಳಿಗೆಯ ಮೇಲೆ ಸೊಲಾರ್ ಪ್ಲೇಟ್ ಅಳವಡಿಕೆ ಮೂಲಕ ವಿದ್ಯುತ್ ಉತ್ಪಾದನಾ ಸ್ವಾವಲಂಬನೆಗೆ ಒತ್ತು ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.
ಬಿಜೆಪಿ ಹಿರಿಯ ಧುರೀಣ ವಿವೇಕಾನಂದ ಡಬ್ಬಿ ಪ್ರತಿಕ್ರಿಯೆ ನೀಡಿ, ಜನರ ಕಲ್ಯಾಣ ಗುರಿಯಾಗಿಸಿಕೊಂಡ ಬಜೆಟ್ ಇದಾಗಿದ್ದು, ರೈಲ್ವೆ ಸೌಲಭ್ಯ ಮಹತ್ವದ ಪ್ರಮಾಣದಲ್ಲಿ ಒದಗಿಸಲಾಗಿದೆ, ೪೦ ಸಾವಿರ ಸಾಮನ್ಯ ರೈಲು ಭೋಗಿಗಳನ್ನು ವಂದೇ ಭಾರತ ರೈಲಿನ ಮಾನದಂಡದಲ್ಲಿ ಪರಿವರ್ತನೆಗೆ ಒತ್ತು ನೀಡಿರುವುದು ಉತ್ತಮ ಸಂಗತಿ ಎಂದು ಅವರು ಹೇಳಿದ್ದಾರೆ.
ಪಾಲಿಕೆ ಸದಸ್ಯ ಶಿವರುದ್ರ ಬಾಗಲಕೋಟ ಪ್ರತಿಕ್ರಿಯೆ ನೀಡಿ, ಮೀನುಗಾರಿಕಾ ವಲಯದಲ್ಲಿ ೫೫ ಲಕ್ಷ ಹೊಸಉದ್ಯೋಗ ಸೃಷ್ಟಿ, ನಮ್ಮ ದೇಶದ ಭವ್ಯತೆಯ ಪ್ರತೀಕವಾಗಿರುವ ಪ್ರವಾಸೋದ್ಯಮ ಸ್ಥಳಗಳ ಪ್ರಗತಿಗೆ ಒತ್ತು ನೀಡಲಾಗಿದೆ.
ಬಿಜೆಪಿ ಜಿಲ್ಲಾ ಮಾಧ್ಯಮ ಪ್ರಮುಖ ವಿಜಯ ಜೋಶಿ ಮಾತನಾಡಿ, ಎಣ್ಣೆ ಕಾಳುಗಳ ಉತ್ಪಾದನೆಗಾಗಿ ವಿಶೇಷ ಒತ್ತು, ಹೈನುಗಾರಿಕಾ ಪ್ರಗತಿಗೆ ರೈತರಿಗೆ ನೆರವು ಹೀಗೆ ರೈತಪರವಾದ ಬಜೆಟ್ ಮಂಡನೆಯಾಗಿದೆ ಎಂದು ಅವರು ಹೇಳಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

