ಬ್ರಹ್ಮದೇವನಮಡು: ಕಲಬುರಗಿ ಜಿಲ್ಲೆ ಕೋಟನೂರ (ಡಿ) ಗ್ರಾಮದಲ್ಲಿ ಇತ್ತಿಚೇಗೆ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಅಪಮಾನ ಮಾಡಿರುವುದನ್ನು ಖಂಡಿಸಿ ಕನಾ೯ಟಕ ರಾಜ್ಶ ದಲಿತ ಸಂಘಷ೯ ಸಮಿತಿ ಭೀಮ ಗಜ೯ನೆ ತಾಲೂಕು ಘಟಕ ಹಾಗೂ ವಿವಿಧ ಕನ್ನಡಪರ ಸಂಘಟನೆ ಮುಖಂಡರು,ಕಾಯ೯ಕತ೯ರು ಸೋಮವಾರ ಬೃಹತ್ ಪ್ರತಿಭಟನೆ ನಡೆಸಿ ಕಂದಾಯ ಇಲಾಖೆ ಅಧಿಕಾರಿ ಬಸಯ್ಶ ಮಠ ಅವರ ಮೂಲಕ ಮುಖ್ಶಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಗ್ರಾಮದ ಅಂಬಿಗರ ಚೌಡಯ್ಶ ವೃತ್ತದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಅಂಬೇಡ್ಕರ್ ವೃತ್ತ ತಲುಪಿತ್ತು. ನಂತರ ಸಿಂದಗಿ – ಶಹಾಪೂರ ರಾಜ್ಶ ಹೆದ್ದಾರಿ ಸಂಚಾರ ತಡೆದು ಎರಡು ಗಂಟೆಗಳ ಕಾಲ ಟೈರಗೆ ಬೆಂಕಿ ಹಚ್ಚಿ ಆಕ್ರೋಶ ವ್ಶಕ್ತಪಡಿಸಿದರು. ವಾಹನಗಳ ಸಂಚಾರ ಸಂಪೂಣ೯ ಸ್ಥಗಿತಗೊಂಡಿದ್ದರಿಂದ ರಸ್ತೆಯುದ್ದಕ್ಕೂ ಬಸ್, ಖಾಸಗಿ ವಾಹನಗಳು ನಿಂತುಕೊಂಡಿದ್ದರಿಂದ ಪ್ರಯಾಣಿಕರು ತೊಂದರೆ ಅನುಭವಿಸಿದರು. ಗ್ರಾಮದ ಅಂಗಡಿ ಮುಂಗಟ್ಟುಗಳು ಎರಡು ಗಂಟೆ ಸ್ವಯಂ ಪ್ರೇರಣೆಯಿಂದ ಮುಚ್ಚಲಾಗಿತ್ತು.
ಪ್ರತಿಭಟನೆ ನೇತೃತ್ವ ವಹಿಸಿದ್ದ ದಸಂಸ ಭೀಮ ಘಜ೯ನೆ ತಾಲೂಕು ಸಂಚಾಲಕ ಶ್ರೀಶೈಲ ಜಾಲವಾದಿ, ದಯಾನಂದ ಮಠ, ಮೋದಿನ ಶಾಬಾದಿ, ಪಿಎಲ್ಡಿ ಬ್ಶಾಂಕ್ ಮಾಜಿ ಅಧ್ಶಕ್ಷ ಶಿವು ಹತ್ತಿ, ರಾಜ್ಶ ಸಂಚಾಲಕ ಸಿದ್ದು ಮೇಲಿನಮನಿ, ಜಿಲ್ಲಾ ಸಂಘಟನಾ ಸಂಚಾಲಕ ಹುಯೋಗಿ ತಳ್ಳೊಳ್ಳಿ ಮಾತನಾಡಿ, ಬಾಬಾಸಾಹೇಬರ ಪುತ್ಥಳಿಗೆ ಅಪಮಾನ ಮಾಡಿದ ಅಪರಾಧಿಗಳ ವಿರುದ್ದ ದೇಶದ್ರೋಹದ ಪ್ರಕರಣ ದಾಖಲಿಸಿ, ಅವರ ಆಸ್ತಿ ಮುಟ್ಟಗೋಲು ಹಾಕಿಕೊಳ್ಳಬೇಕು. ಕೃತ್ಶ ಎಸಗಿದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಿ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.
ಅರಣುಕುಮಾರ ಸಿಂಧೆ, ಪ್ರಭುಗೌಡ ಬಿರಾದಾರ ಅಲ್ಲಾಪೂರ, ಬಸನಗೌಡ ಪಾಟೀಲ, ಗ್ರಾಪಂ ಸದಸ್ಶರಾದ ಬಸವರಾಜ ಮಾರಲಭಾವಿ, ರುಕ್ಮುದ್ದಿನ್ ಹಳಿಮನಿ, ಗೌತಮ್ ಮೇಟಿ, ಗೊಲ್ಲಾಳ ಬೈಚಬಾಳ, ಗೊಲ್ಲಾಳಪ್ಪ ನಾಯ್ಕೋಡಿ, ಸೈಪುನಸಾಬ್ ಕೋರವಾರ, ಶರಣಪ್ಪ ಕನಾ೯ಳ, ಮಾಂತೇಶ , ವಿನೋದ ಹಂಚಿನಾಳ, ಮಲ್ಲು ಹಡಪದ ಸೇರಿದಂತೆ ದಲಿತ ಸಂಘಟನೆ ಹಾಗೂ ವಿವಿಧ ಕನ್ನಡಪರ ಸಂಘಟನೆ ಕಾಯ೯ಕತ೯ರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

