ವಿಜಯಪುರ: ಮಗುವಿನ ಶಿಕ್ಷಣದ ಜೊತೆಗೆ ಸಮಾಜದ ಮೌಲ್ಯ ಹಾಗು ಸಂಸ್ಕಾರ ನೀಡುವ ಅತ್ಯವಶ್ಯಕತೆ ಉಂಟಾಗಿದೆ ಎಂದು ಮನಗೂಳಿ ಹಿರೇಮಠ ಸಂಸ್ಥಾನದ ಅಭಿನವ ಸಂಗನಬಸವ ಸ್ವಾಮಿಜಿಯವರು ಅಭಿಪ್ರಾಯ ವ್ಯಕ್ತಪಡಿಸಿದರು
ಶುಕ್ರವಾರ ಕೀರ್ತಿ ನಗರದಲ್ಲಿರುವ ಸರಸ್ವತಿ ತರಬೇತಿ ಸಂಸ್ಥೆಯ ಆಶ್ರಯದಲ್ಲಿ ” ಮಗುವಿನ ಪರಿಪೂರ್ಣ ವ್ಯಕ್ತಿತ್ವ ರೂಪಿಸುವವಲ್ಲಿ ಶಿಕ್ಷಕರ ಪಾತ್ರ” ಕುರಿತು ಚಿಂತನ ಗೋಷ್ಠಿಯ ಸಾನಿಧ್ಯ ವಹಿಸಿ ಮಾತನಾಡುತ್ತಾ, ಮಗುವಿನ ಸರ್ವಾಂಗೀಣ ಬೆಳವಣಿಗೆ ಮಹತ್ವ ನೀಡಬೇಕೇಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಗ೯ದ ಕೋಣೆಯಲ್ಲಿ ಮಗುವಿನ ಪರಿಪೂರ್ಣ ವ್ಯಕ್ತಿತ್ವ ವಿಕಸನಗೊಳಿಸುವುದೇ ಶಿಕ್ಷಣವೆಂದು
ಹೇಳಿದ ಅವರು, ಮಗುವಿನ ಮೇಲೆ ಪಾಲಕರು ಹಾಗು ಶಿಕ್ಷಕರು ತುಂಬ ಒತ್ತಡ ಹೇರುವದು ಮನೋವೈಜ್ಞಾನಿಕವಾಗಿ ಸರಿಯಲ್ಲ. ಮಗು ಆಡುತ್ತಾ ಕಲಿಯಬೇಕೇಂದರು.
ಎ ಎ ಪಾಸಿ೯ ವಿಶ್ರಾಂತ ಜಂಟಿ ನಿರ್ದೇಶಕ ಸಾವ೯ಜನಿಕ ಶಿಕ್ಷಣ ಇಲಾಖೆ ವಿಜಯಪುರ ಮಾತನಾಡಿ, ತರಬೇತಿ ಸಂಸ್ಥೆಗಳು ಗುಣಮಟ್ಟದ ಶಿಕ್ಷಣ ಒದಗಿಸಬೇಕು. ಶಿಕ್ಷಕರು ಮಕ್ಕಳಲ್ಲಿರುವ ಸೂಕ್ತವಾದ ಪ್ರತಿಭೆ ಗುರುತಿಸುವ ಕಾರ್ಯ ಮಾಡುವುದೇ ಪ್ರಾಧ್ಯಾಪಕರ ಕತ೯ವ್ಯವೆಂದರು.
ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಜಂಬುನಾಥ ಕಂಚ್ಯಾಣಿ ಮಾತನಾಡಿದರು.
ರಾಜೇಂದ್ರ ಬಿರಾದಾರ ಹಾಗು ಪಂಡಿತ ತೋಂಟದಾರ್ಯ ಮಾತನಾಡಿದರು.
ಮಹಾನಗರ ಪಾಲಿಕೆಯ ಸದಸ್ಯ ಪ್ರೇಮಾನಂದ ಬಿರಾದಾರ. ಶ್ರೀಧರ ಬಿಜ್ಜರಗಿ. ಎ ಡಿ ಜಾಧವ. ಎಸ್ ನಡುವಿನಮನಿ. ರವಿಕುಮಾರ ಹಡಪದ. ತಿಪ್ಪಣ್ಣ ಶಹಪೂರ.
ಡಿ ಎಚ್ ಅವಟಿ. ವಿಶ್ರಾಂತ ಶಿಕ್ಷಕ ಆಯ್ ಟಿ ಪಡಗಣ್ಣವರ ಹಾಜಿ ರಂಜನಗಿ. ವೇದಿಕೆಯ ಮೇಲಿದ್ದರು
ಬಸವರಾಜ ನಾಟಿಕಾರ ಸಂಗೀತ ಸೇವೆ ನೀಡಿದರು. ತರಬೇತಿ ಸಂಸ್ಥೆಯ ಮುಖ್ಯಸ್ಥ ಅಜೀತ ನಡುವಿನ ಸ್ವಾಗತಿಸಿ ಪರಿಚಯಿಸಿದರು. ಪ್ರಾಸ್ತಾವಿಕವಾಗಿ ಹಣಮಂತರಾಯ ಬಿರಾದಾರ ಮಾತನಾಡಿದರು. ಸಂಗಪ್ಪ ಬಿರಾದಾರ ನಿರೂಪಿಸಿದರು. ಸೋಮಶೇಖರ ಪ್ರಕಾಶ ಚಿಕ್ಕಲಕಿ ವಂದಿಸಿದರು.
ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಕಂಬಾರ .ಶಿವಪ್ಪ ಬಿರಾದಾರ .
ಈರಣ್ಣ ಪತ್ತಾರ. ರತ್ನಾಬಾಯಿ ಬಿರಾದಾರ. ಶ್ರೀಶೈಲ ಬಜೇನಿ. ರಾಜು ಅಂಗಡಿ. ಕವಿತಾ ಕೂಬರಡ್ಡಿ
ಸವಿತಾ ಅಗಸರ. ರತ್ನಾ ಪತ್ತಾರ. ಗಂಗಾಬಾಯಿ ನರಸನಗೌಡರ.
ಆಶೀಪ ಬಾಗಾಯತ. ರತ್ನಾ ನಡುವಿನಮನಿ. ಶರಪ್ಪ ಕಟ್ಟಿಮನಿ.
ಸತೀಶ ನಡುವಿನಮನಿ. ಮುಂತಾದವರು ಉಪಸ್ಥಿತರಿದ್ದರು
Subscribe to Updates
Get the latest creative news from FooBar about art, design and business.
Related Posts
Add A Comment

