Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಸಮಾನತೆ ಸ್ಥಾಪನೆಗೆ ಪ್ರಜಾಪ್ರಭುತ್ವ ತತ್ವ ಸಹಕಾರಿ

ಅಕ್ರಮ ಪಡಿತರ ಸಾಗಾಟ: ಆಹಾರ ಇಲಾಖೆ ದಾಳಿ

ರಾಷ್ಟ್ರೀಯ ಲೋಕ ಅದಾಲತ್:೩೭೭೬ ಪ್ರಕರಣಗಳು ಇತ್ಯರ್ಥ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಪ.ಪಂ & ತಹಸೀಲ್ ಕಛೇರಿ ಮೇಲೆ ಲೋಕಾ ಅಧಿಕಾರಿಗಳ ಧಿಡೀರ್ ದಾಳಿ!
(ರಾಜ್ಯ ) ಜಿಲ್ಲೆ

ಪ.ಪಂ & ತಹಸೀಲ್ ಕಛೇರಿ ಮೇಲೆ ಲೋಕಾ ಅಧಿಕಾರಿಗಳ ಧಿಡೀರ್ ದಾಳಿ!

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಉದಯರಶ್ಮಿ ದಿನಪತ್ರಿಕೆ

ಚಡಚಣ: ಪಟ್ಟಣದ ಪ.ಪಂ. ಹಾಗೂ ತಲಶೀಲ್ದಾರ ಕಛೇರಿ ಮೇಲೆ ಮಂಗಳವಾರ ಲೋಕಾಯುಕ್ತ ಅಧಿಕಾರಿಗಳು ಧಿಡೀರ ದಾಳಿ ನಡೆಸಿ, ವಿವಿಧ ಕಡತಗಳನ್ನು ಪರಿಶೀಲನೆ ಮಾಡಿದರು.
ಪ.ಪಂ. ಕಛೇರಿಯಲ್ಲಿ ೨೦೨೩-೨೪, ೨೦೨೪-೨೫ನೇ ಸಾಲಿನಲ್ಲಿ ಭೂಪರಿವರ್ತನೆ (ಎನ್.ಎ.) ಆಗಿರುವ ಜಮೀನುಗಳ ಎಲ್ಲ ದಾಖಲೆಗಳನ್ನು ಪರಿಶೀಲನೆ ನಡೆಸಿ, ಅದರ ಸಂಪೂರ್ಣ ಮಾಹಿತಿಯನ್ನು ಪಡೆದ ಲೋಕಾಯುಕ್ತ ಅಧಿಕಾರಿಗಳು ಹೆಚ್ಚಿನ ಮಾಹಿತಿಗಾಗಿ ಎಲ್ಲ ಭೂಪರಿವರ್ತನೆ ಕಡತಗಳ ನಕಲು ಪ್ರತಿಯನ್ನು ಪಡೆದರು. ಇತ್ತಿಚೆಗೆ ಪಟ್ಟಣದ ಹೊರವಲಯದಲ್ಲಿ ಭೂಪರಿವರ್ತನೆಯಾಗಿರುವ ಡೈಮಂಡ ಪಾರ್ಕನ ಸುಮಾರು ೪೦ ಎಕರೆ ಸಿಟಿ ಸರ್ವೆಯಲ್ಲಿ(ಪ.ಪಂಚಾಯತಿ ಸರಹದ್ದಿನಲ್ಲಿ) ಬರುವದಿಲ್ಲ ಮತ್ತು ಅದರಲ್ಲಿ ಈಗಾಗಲೇ ೪೦% ನಿವೇಶನಗಳ ಉತಾರಿಯನ್ನು ಪ.ಪಂ.ನವರು ನೀಡಿದ್ದಾರೆ ಎಂದು ಸಾರ್ವಜನಿಕರು ಆಕ್ಷೇಪಣೆ ಮಾಡಿದಾಗ ಲೋಕಾಯುಕ್ತ ಅಧಿಕಾರಿಗಳು ಇದರ ಕುರಿತು ಪ.ಪಂ.ನ ಮುಖ್ಯಾಧಿಕಾರಿಯನ್ನು ವಿಚಾರಿಸಿ, ಹೆಚ್ಚಿನ ಮಾಹಿತಿಗಾಗಿ ಈ ಭೂಪರಿವರ್ತನೆ ಕಡತದ ನಕಲು ಪ್ರತಿಯನ್ನು ನೀಡುವಂತೆ ಸೂಚಿಸಿದರು.
ನಂತರ ಪ.ಪಂ.ನ ಎಲ್ಲ ವಾಹನಗಳ ಲಾಗ್‌ಬುಕ್ ಪರಿಶೀಲನೆ ನಡೆಸಿ, ಅದರ ಖರ್ಚು ವೆಚ್ಚಗಳ ಬಗ್ಗೆ ಸಂಪೂರ್ಣ ಮಾಹಿತಿ ಪರಿಶೀಲನೆ ನಡೆಸಿದರು. ಪ.ಪಂ.ನಲ್ಲಿ ಒಟ್ಟು ೮ ವಾಹನಗಳು ಇದ್ದು ಅವುಗಳಲ್ಲಿ ಕೇವಲ ೪ ವಾಹನಗಳು ಮಾತ್ರ ಚಾಲನೆಯಲ್ಲಿವೆ ಎಂದು ಪ.ಪಂ. ಸಿಬ್ಬಂದಿ ಮಾಹಿತಿ ನೀಡಿದರು.
ಪ.ಪಂ.ಗೆ ಸಂಬಂಧಿಸಿದ ಜೆ.ಸಿ.ಬಿ.ಯ ಇಂಧನದ ರಶೀದಿ, ಕಾಮಗಾರಿಗಳ ಬಗ್ಗೆ ಲಾಗ್‌ಬುಕ್‌ನಲ್ಲಿ ದಾಖಲಿಸದೇ ಇರುವುದು ಕಂಡುಬಂತು. ನಂತರ ೨ ವರ್ಷಗಳ ಸಂಪೂರ್ಣ ಲೆಕ್ಕಪರಿಶೋಧನಾ ವರದಿಯನ್ನು ಪರಿಶೀಲಿದ ಅವರು, ಲೆಕ್ಕಪರಿಶೋಧನಾ ಸಮಯದಲ್ಲಿ ಲಾಗ್‌ಬುಕ್‌ನಲ್ಲಿ ದಾಖಲಿಸದೇ ಇರದ ವಾಹನಗಳ ಇಂಧನ ಖರ್ಚುವೆಚ್ಚಗಳನ್ನು ಹೇಗೆ ಪರಿಶೋಧನೆ ಮಾಡಿ ಲೆಕ್ಕಪರಿಶೋಧನಾ ವರದಿಯನ್ನು ನೀಡಿದ್ದಾರೆ ಎಂದು ಪ್ರಶ್ನಿಸಿದ ಅವರು, ಎರಡು ವರ್ಷಗಳ ಅವಧಿಯಲ್ಲಿನ ವಾಹನ ಇಂಧನ ಸಂಪೂರ್ಣ ಮಾಹಿತಿಯನ್ನು ಲಾಗ್‌ಬುಕ್‌ನಲ್ಲಿ ದಾಖಲಿಸದೆ ಇರದ ಕಾರಣ ಅದರ ಸಂಪೂರ್ಣ ವಿವರಗಳನ್ನು ಬೆಳಗಾವಿಯ ಲೋಕಾಯುಕ್ತ ಕಛೇರಿಗೆ ಬಂದು ವರದಿ ನೀಡುವಂತೆ ಪ.ಪಂ. ಮುಖ್ಯಾಧಿಕಾರಿಗಳಿಗೆ ಹೇಳಿದರು.
ಅರ್ಜುನ ಕಾಂಬಳೆ ಎಂಬ ನಿವರಗಿ ಗ್ರಾಮದ ನಿವಾಸಿ ತನ್ನ ಮನೆಗೆ ಹೋಗಲು ರಸ್ತೆ ಇರದೆ ಇರುವದು ಹೇಳಿದಾಗ ಗ್ರಾಮಗಳ ಮನೆಗಳಿಗೆ ಹೋಗಲು ರಸ್ತೆಗೆ ಸಂಬಂಧಿಸಿದ ತಾ.ಪಂ.ಅಧಿಕಾರಿ ಸಂಜಯ ಇಂಗಳೆ ಅವರಿಗೆ ಫೋನ ಮುಖಾಂತರ ಮಾತನಾಡಿದ ಅಧಿಕಾರಿಗಳು ಕೂಡಲೆ ಪಿಡಿಓ ಗೆ ಹೇಳಿ ಅಥವಾ ಖುದ್ದಾಗಿ ರಸ್ತೆಯ ಅನುಕೂಲ ಮಾಡಿ ಕೊಡುವಂತೆ ಸೂಚಿಸಿದರು.
ತಹಶೀಲ್ದಾರ ಕಛೇರಿ ಭೇಟಿ ನೀಡಿದ ಲೋಕಾಯುಕ್ತ ಅಧಿಕಾರಿಗಳು, ಆರ್.ಟಿ.ಎ. ಆರ್.ಟಿ.ಎಸ್. ಮ್ಯುಟೇಶನ್ ಕುರಿತ ದಾಖಲೆ, ವಾರಸಾ, ಭೋಜಾ, ಜಮೀನುಗಳ ವ್ಯಾಜ್ಯ ಕುರಿತಂತೆ ಹಾಗೂ ವಿವಿಧ ದಾಖಲೆಗಳನ್ನು ಪರಿಶೀಲಿದ ಅವರು, ಪಡಿತರ ಚೀಟಿ ರದ್ದಾದ ಕುರಿತು ವಿವರವನ್ನು ಪಡೆದರು. ಕಛೇರಿಯ ಕೆಲಸಗಳ ವಿಳಂಬಕ್ಕೆ ಕಾರಣ ಕೇಳಿದ ಅವರು ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಕಾರ್ಯನಿರ್ವಹಿಸಿ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಲೋಕಾಯುಕ್ತ ಪಿ.ಎಸ್.ಐ.ಗಳಾದ ಭೀಮನಗೌಡ ಬಿರಾದಾರ, ನಿರಂಜನ ಪಾಟೀಲ ಸೇರಿದಂತೆ ಬಾಗಲಕೋಟ, ಬೆಳಗಾವಿಯ ಸಿಬ್ಬಂದಿಗಳು ಇದ್ದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಸಮಾನತೆ ಸ್ಥಾಪನೆಗೆ ಪ್ರಜಾಪ್ರಭುತ್ವ ತತ್ವ ಸಹಕಾರಿ

ಅಕ್ರಮ ಪಡಿತರ ಸಾಗಾಟ: ಆಹಾರ ಇಲಾಖೆ ದಾಳಿ

ರಾಷ್ಟ್ರೀಯ ಲೋಕ ಅದಾಲತ್:೩೭೭೬ ಪ್ರಕರಣಗಳು ಇತ್ಯರ್ಥ

ಪೊಲೀಸ್ ವೈಫಲ್ಯ ಖಂಡಿಸಿ ಸೆ.೧೯ಕ್ಕೆ ಕಾಲ್ನಡಿಗೆ ಜಾಥಾ :ಕೂಚಬಾಳ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಸಮಾನತೆ ಸ್ಥಾಪನೆಗೆ ಪ್ರಜಾಪ್ರಭುತ್ವ ತತ್ವ ಸಹಕಾರಿ
    In (ರಾಜ್ಯ ) ಜಿಲ್ಲೆ
  • ಅಕ್ರಮ ಪಡಿತರ ಸಾಗಾಟ: ಆಹಾರ ಇಲಾಖೆ ದಾಳಿ
    In (ರಾಜ್ಯ ) ಜಿಲ್ಲೆ
  • ರಾಷ್ಟ್ರೀಯ ಲೋಕ ಅದಾಲತ್:೩೭೭೬ ಪ್ರಕರಣಗಳು ಇತ್ಯರ್ಥ
    In (ರಾಜ್ಯ ) ಜಿಲ್ಲೆ
  • ಪೊಲೀಸ್ ವೈಫಲ್ಯ ಖಂಡಿಸಿ ಸೆ.೧೯ಕ್ಕೆ ಕಾಲ್ನಡಿಗೆ ಜಾಥಾ :ಕೂಚಬಾಳ
    In (ರಾಜ್ಯ ) ಜಿಲ್ಲೆ
  • ಇಂದು ಪಠ್ಯಪೂರಕ ಚಟುವಟಿಕೆಗಳ ಉದ್ಘಾಟನೆ
    In (ರಾಜ್ಯ ) ಜಿಲ್ಲೆ
  • ಮಳೆಯಿಂದ ಮನೆಯೊಳಗೆ ನೀರು ನುಗ್ಗಿ ವಸ್ತುಗಳ ಹಾನಿ!
    In (ರಾಜ್ಯ ) ಜಿಲ್ಲೆ
  • ಸಂಗೀತ ಲೋಕದ ಮೇರು ಶಿಖರ ಪಂ.ಪುಟ್ಟರಾಜ ಗವಾಯಿಗಳು
    In (ರಾಜ್ಯ ) ಜಿಲ್ಲೆ
  • ಭೀಮಾ ನದಿಗೆ ಮತ್ತೆ ಅಪಾರ ಪ್ರಮಾಣದ ನೀರು!
    In (ರಾಜ್ಯ ) ಜಿಲ್ಲೆ
  • ಸಿದ್ದಸಿರಿ ಸೌಹಾರ್ದ ಸಹಕಾರಿಯಿಂದ ರೂ.25 ಲಕ್ಷ ದೇಣಿಗೆ
    In (ರಾಜ್ಯ ) ಜಿಲ್ಲೆ
  • ಮುಂಗಾರು ಬೆಳೆಹಾನಿಪುನಃ ಪರಿಶೀಲಿಸಿದ ಎಸಿ ವಸ್ತ್ರದ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2025 udayarashminews.com. Designed by udayarashmi news .

Type above and press Enter to search. Press Esc to cancel.