ಸಿಂದಗಿ: ಪಟ್ಟಣದ ಅಖಿಲ ಭಾರತೀಯ ಸೋಮವಂಶ ಆರ್ಯ ಕ್ಷತ್ರೀಯ ಸಮಾಜ ಟ್ರಸ್ಟ್ (ನಾಸಿಕನ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಸಿಂದಗಿ ನಗರದ ಹಿರಿಯ ನ್ಯಾಯವಾದಿ ಅಶೋಕ ಗಾಯಕವಾಡ ಅವರನ್ನು ಜ್ವಾಜಾ ಸೈಫನ್ ಮುಲ್ಕ್ ಟ್ರಸ್ಟ್ ಹಾಗೂ ಹಿರೋಡೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.
ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು, ನಾಸಿಕನ ಅಖಿಲ ಭಾರತೀಯ ಸೋಮವಂಶ ಆರ್ಯ ಕ್ಷತ್ರೀಯ ಸಮಾಜ ಟ್ರಸ್ಟ್ (ನಾಸಿಕ) ನ ಉಪಾಧ್ಯಕ್ಷರಾಗಿ ಸಮಾಜದ ಟ್ರಸ್ಟ್ಗೆ ಅವಿರೋಧವಾಗಿ ಆಯ್ಕೆ ಮಾಡಿದ್ದು ಸಂತಸ ತಂದಿದೆ. ಸಮಾಜದ ಹಿತ ರಕ್ಷಣೆಗೆ ಸದಾ ಬೆನ್ನುಲುಬಾಗಿ ನಿಲ್ಲುವೆ. ಕ್ಷತ್ರೀಯ ಸಮಾಜವನ್ನು ಶೈಕ್ಷಣಿಕ, ಸಮಾಜಿಕ, ಆರ್ಥಿಕ ಮತ್ತು ರಾಜಕೀಯವಾಗಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಶ್ರಮಿಸುವೆ ಎಂದರು.
ಈ ವೇಳೆ ದರ್ಗಾದ ಅಧ್ಯಕ್ಷ ಮಹಾದೇವಪ್ಪ ಗಾಯಕವಾಡ, ಅಂಬಾಜಿ ಗಾಯಕವಾಡ, ಅಶೋಕ ಸುಲ್ಪಿ, ಸೇರಿದಂತೆ ಸಿಂದಗಿಯ ಸೋಮವಂಶ ಕ್ಷತ್ರೀಯ ಸಮಾಜ ಬಾಂಧವರು ಮತ್ತು ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

