ಮುದ್ದೇಬಿಹಾಳ: ಪಟ್ಟಣದ ಗಾಂಧಿ ರಸ್ತೆಯಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಬಟ್ಟೆ ಪುಸ್ತಕ ನೀಡುವ ಮೂಲಕ ಶಾಲಾ ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳಲಾಯಿತು.
ಈ ವೇಳೆ ವಿದ್ಯಾರ್ಥಿಗಳನ್ನುದ್ದೇಶಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ಸಾವಳಗಿ ಮಾತನಾಡಿ, ಶಾಲೆಗೆ ಪ್ರಾರಂಭದಿಂದ ಹಾಜರಿದ್ದಲ್ಲಿ ವಿದ್ಯಾರ್ಥಿಗಳಿಗೆ ಸಂಪೂರ್ಣ ಪಠ್ಯ ಅರ್ಥವಾಗುತ್ತದೆ. ಕೆಲವು ದಿನಗಳ ನಂತರ ಹಾಜರಾಗುವ ವಿದ್ಯಾರ್ಥಿಗಳು ವಿದ್ಯಾಭ್ಯಾಸದಿಂದ ವಂಚಿತರಾಗುತ್ತಾರೆ. ಹೀಗಾದಲ್ಲಿ ಪರೀಕ್ಷೆಗಳಲ್ಲಿ ಒಳ್ಳೆಯ ಫಲಿತಾಂಶ ಪಡೆಯಲು ಸಾಧ್ಯವಿಲ್ಲ. ಪಾಲಕರು ತಮ್ಮ ಮಕ್ಕಳು ಶಾಲೆಗೆ ತೆರಳುವಂತೆ ಒತ್ತಾಯಿಸಬೇಕು ಎಂದರು.
ಈ ವೇಳೆ ಎಸ್ಡಿಎಂಸಿ ಸದಸ್ಯ ಸುಲೇಮಾನ ಸಾತಿಹಾಳ, ಸದಸ್ಯ ರುಕ್ಸಾನ ಸಂಕನಾಳ, ಮುಖ್ಯ ಶಿಕ್ಷಕ ಎಂಎಸ್.ಕವಡಿಮಟ್ಟಿ, ಶಿಕ್ಷಕರಾದ ಎ.ಎಸ್.ಬಾಗವಾನ, ಎಂ.ಎಸ್.ಚಟ್ಟೇರ, ರೇಣುಕಾ ಸಜ್ಜನ, ಎಂ.ಬಿ.ಪಾಟೀಲ, ಅಪ್ಪು ಪವಾರ, ಎಂ.ಎಸ್.ನಾಟೆಕಾರ, ರಿಯಾನಾ ಬೇಗಂ, ಶರಣಮ್ಮ ಹಡಲಗೇರಿ ಸೇರಿದಂತೆ ಮತ್ತೀತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

