ಚಡಚಣ: ಊರಿಗೊಂದು ಮಠ, ಮಠಕ್ಕೊಬ್ಬ ಉತ್ತಮ ಗುರು ಬೇಕೆನ್ನುವಂತೆ ಇಲ್ಲಿಯ ವಿರಕ್ತಮಠವು ಇತಿಹಾಸದ ಪರಂಪರೆ ಸಾರುವಂತಿದೆ. ಈಗಿನ ವಿರಕ್ತಮಠದ ಷಡಕ್ಷರದೇವರು ಕಳೆದ ಹತ್ತು ವರ್ಷಗಳಿಂದ ಚಡಚಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಜರುಗುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿದ್ದು ಮಾರ್ಗದರ್ಶಕರಾಗಿದ್ದಾರೆ. ಇವರಿಂದ ಧಾರ್ಮಿಕ ಕಾರ್ಯಕ್ರಮಗಳು ನಿರಂತರ ಸಾಗುತ್ತಿವೆ ಎಂದು ನಿವೃತ್ತ ಪ್ರಾಚಾರ್ಯ ಆರ್. ಪಿ. ಬಗಲಿ ಹೇಳಿದರು.
ಪಟ್ಟಣದ ವಿರಕ್ತಮಠದ ಲಿಂ. ಶಿವಾನಂದ ಮಹಾಸ್ವಾಮಿಗಳ 28 ನೇ ಪುಣ್ಯಸ್ಮರಣೆಯ ನಿಮಿತ್ತ ಲೋಕಾಪೂರದ ಮಹಾಂತಸ್ವಾಮಿಗಳು ಹಿರೇಮಠ ಇವರಿಂದ ಪ್ರವಚನ ಕಾರ್ಯಕ್ರಮದ ಉದ್ಘಾಟನೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತ, ಮಠ ಮಾನ್ಯಗಳಿಂದ ಸಮಾಜದ ಉದ್ದಾರ. ಮಠಗಳು ಧಾರ್ಮಿಕ ರಕ್ಷಣೆಯ ಶಿಕ್ಷಣದ ಕೇಂದ್ರಗಳು. ಪುಣ್ಯಾರಾಧನೆ ಅದ್ದೂರಿಯಾಗಿ ಜರುಗಲಿ. ಎಲ್ಲರೂ ಭಾಗಿಯಾಗಿ ಧನ್ಯರಾಗಿರಿ ಎಂದು ಬಗಲಿ ಅವರು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ವಿರಕ್ತಮಠದ ಷಡಕ್ಷರದೇವರು ಮಾತನಾಡಿ, ಪಟ್ಟಣದ ಎಲ್ಲ ಭಕ್ತಾದಿಗಳು ಪ್ರವಚನ ಆಲಿಸಿ. ಸುಂದರ ಬದುಕಿಗೆ ಪ್ರವಚನ ಸಹಾಯಕಾರಿ. ಮಹಾಂತ ಸ್ವಾಮಿಗಳು ಉತ್ತಮ ಪ್ರವಚನ ಪಟುಗಳಾಗಿದ್ದಾರೆ ಎಂದರು.
ಜಿ. ಡಿ. ಪಾವಲೆ ಮಾತನಾಡಿ, ಪ್ರತಿವರ್ಷವೂ ಪುಣ್ಯಾರಾಧನೆ ಎಲ್ಲ ಭಕ್ತಾದಿಗಳ ಸಹಕಾರದಿಂದ ಅದ್ದೂರಿಯಾಗಿ ಜರುಗುತ್ತಿದೆ. ಎಲ್ಲರೂ ಪ್ರವಚನ ಆಲಿಸಿ, ಭಕ್ತಿಯ ಮಾರ್ಗದಲ್ಲಿ ಸಾಗಿರಿ. ಈ ಮಠವು ಪಟ್ಟಣಕ್ಕೆ ಕೇರೀಟವಿದ್ದಂತೆ ಎಂದರು.
ಎಸ್. ಕೆ. ಕುಲಕರ್ಣಿ, ಚಂದ್ರಶೇಖರ ಮಟ್ಟಿಕಲ್ಲಿ, ಬಸಯ್ಯಸ್ವಾಮಿ, ಸಾಂಗೋಲಿ ಸರ್, ಮಹಾದೇವ ಪಾವಲೆ, ಬಸವರಾಜಅವಟಿ, ಚೇತನಕುಮಾರ ನಿರಾಳೆ ಸೇರಿದಂತೆ ಮಠದ ಭಕ್ತ ಕಮೀಟಿ ಉಪಸ್ಥಿತರಿದ್ದರು.
ಮಠದಲ್ಲಿ ದಿ.6 ರಂದು ಷಡಕ್ಷರ ಶಿವಯೋಗಿಗಳ ಗದ್ದುಗೆಗೆ ರುದ್ರಾಭೀಷೇಕ, ದಿ.8 ರಂದು ಕುಂಭೋತ್ಸವ, ಧರ್ಮಸಭೆ, ಉಡಿತುಂಬುವ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ ದಿ.9 ರಂದು ಮುಂಜಾನೆ ಪುಷ್ಪನಮನ, ಜರುಗುವದು.
ದಿ.8 ರವರೆಗೆ ಸಂಜೆ 7ರಿಂದ 8.30 ರವರೆಗೆ ಮಹಾಂತ ಸ್ವಾಮಿಗಳ ಪ್ರವಚನ ಜರುಗುವದು ಎಂದು ಕಮೀಟಿ ಅವರು ತಿಳಿಸಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

