ಚಡಚಣ: ಸರ್ಕಾರಿ ಶಾಲೆಗಳು ಸ್ವಚ್ಛವಾಗಿರುವಂತೆ ಮಾಡಿ ಕಲಿಕೆಗೆ ಉತ್ತಮ ವಾತಾವರಣ ನಿರ್ಮಾಣ ಮಾಡಲು ಸ್ಥಳೀಯ ನಿವಾಸಿಗಳ ಸಹಕಾರ ಅಗತ್ಯ ಎಂದು ರೇವತಗಾಂವ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಆರ್.ಎನ್.ಹತ್ತಳ್ಳಿಯವರು ಹೇಳಿದರು.
ಶಾಲಾ ಆರಂಭೋತ್ಸವದ ಮನ್ನ ದಿನವಾದ ಬುಧವಾರದಂದು ಶಾಲಾ ಆವರಣ ಹಾಗೂ ಶಾಲೆಗಳ ಕೋಣೆಗಳ ಸ್ವಚ್ಛತೆ ಕಾರ್ಯಕ್ರಮವನ್ನು ಹಮ್ಮಿಕೊಂಡು ಮಾತನಾಡಿದ ಅವರು. ಸರ್ಕಾರಿ ಶಾಲೆಗಳು ಸಾರ್ವಜನಿಕರ ಆಸ್ತಿ. ಇದನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಶಾಲೆಯ ಜವಾಬ್ಧಾರಿಯಾಗಿದೆ. ಸಾರ್ವಜನಿಕರು ಶಾಲಾ ಆವರಣದಲ್ಲಿ ಕಸ ಕಡ್ಡಿ ಹಾಕದಂತೆ ತಡೆಯುವ ಕಾರ್ಯ ಆಗಬೇಕು. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಕಲಿಗೆ ಪೂರಕ ಪರಿಸರ ಕಲ್ಪಿಸುವ ಕರ್ತವ್ಯ ಸಾರ್ವಜನಿಕರು, ವಿವಿಧ ಸಂಘ ಸಂಸ್ಥೆಗಳು ಹಾಗೂ ಯುವಕರದ್ದು ಆಗಿರಬೇಕು ಎಂದು ಹೇಳಿದರು.
ಈ ವೇಳೆಯಲ್ಲಿ ಶಾಲೆಯ ಶಿಕ್ಷಕರಾದ ಎಸ್.ಡಿ.ಆದಿಗೊಂಡೆಯವರು ಮಾತನಾಡುತ್ತ. ಶಾಲೆ ಸುತ್ತಮುತ್ತಲಿನ ಯುವ ಮುಖಂಡರು ಸೇರಿದಂತೆ ಸಂಘ, ಸಂಸ್ಥೆ ಪದಾಧಿಕಾರಿಗಳ ನೆರವನ್ನು ಪಡೆದು ಶಾಲೆಗಳಿಗೆ ಅಗತ್ಯವಿರುವ ಮೂಲಭೂತ ಸೌಕರ್ಯ ಕಲ್ಪಿಸುವ ಅಗತ್ಯವಿದೆ. ತಾವು ವಾಸಿಸುವ ಸುತ್ತಮುತ್ತಲಿನ ಸ್ಥಳ ಮತ್ತು ಶಾಲಾ ಆವರಣವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬರ ಜವಾಬ್ಧಾರಿಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಲೆಯ ಆವರಣವನ್ನು, ಅಡುಗೆ ಕೋಣೆ ಹಾಗೂ ವರ್ಗ ಕೋಣೆಗಳನ್ನು ಕಸಗೂಡಿಸಿ, ನೀರನ್ನು ಹಾಕಿ ಸ್ವಚ್ಛಗೊಳಿಸಿದರು.
ಈ ವೇಳೆ ಎಲ್ಲ ಶಿಕ್ಷಕರುಗಳು ಹಾಗೂ ಅಡುಗೆ ಸಿಬ್ಬಂದಿಯವರುಗಳು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
ಶಾಲಾ ಆವರಣ, ಶಾಲೆಗಳ ಸ್ವಚ್ಛತೆ ಎಲ್ಲರ ಜವಾಬ್ಧಾರಿ :ಹತ್ತಳ್ಳಿ
Related Posts
Add A Comment