ಬಸವನಬಾಗೇವಾಡಿ: ಪಟ್ಟಣದ ಸೇರಿದಂತೆ ತಾಲೂಕಿನಲ್ಲಿ ಭಾನುವಾರ ಸಂಜೆ ೬.೫೦ ಗಂಟೆಗೆ ಅಬ್ಬರದ ಗಾಳಿ, ಮಿಂಚು-ಸಿಡಿಲಿನೊಂದಿಗೆ ಆರಂಭವಾದ ಮಳೆ ಅರ್ಧ ಗಂಟೆ ಕಾಲಕ್ಕಿಂತಲೂ ಜೋರಾಗಿ ನಂತರ ಜಿಟಿ ಜಿಟಿ ಮಳೆ ರಾತ್ರಿ ೯ ಗಂಟೆಗೆಯವರೆಗೂ ಮಳೆ ಸುರಿಯಿತು.
ಪಟ್ಟಣದ ನಂದಿ ಬಡಾವಣೆ ರಸ್ತೆಯಲ್ಲಿರುವ ಮರ ಸೇರಿದಂತೆ ಪಟ್ಟಣ ಸೇರಿದಂತೆ ವಿವಿದೆಢೆ ವಿವಿಧ ಮರಗಳು, ಟೆಂಗಿನ ಮರಗಳು ಅಬ್ಬರದ ಗಾಳಿಗೆ ಧರೆಗುಳಿದಿವೆ. ಅಬ್ಬರದ ಗಾಳಿಗೆ ಕೆಲವೆಡೆ ಶೆಡ್ ಮೇಲಿನ ಪತ್ರಾಸ್ ಗಳು ಹಾರಿ ಹೋದ ವರದಿಯಾಗಿವೆ.
ತಾಲೂಕಿನ ಜಾಲಿಹಾಳ ತಾಂಡಾದ ಕಿಸಾನ ಲಿಂಬು ನಾಯಕ ಅವರ ಆಕಳು ಸಿಡಿಲು ಬಡಿದು ಮೃತ ಪಟ್ಟಿದೆ. ಬಸವನಬಾಗೇವಾಡಿಯ ಶಂಕರ ಸಾಬು ಲಮಾಣಿ ಅವರ ದ್ರಾಕ್ಷಿ, ಉಕ್ಕಲಿಯ ಭೀಮಾಬಾಯಿ ಶಂಕರ ರಾಠೋಡ ಅವರ ಲಿಂಬೆ ಬೆಳೆ, ಜಾಲಿಹಾಳ ತಾಂಡಾದ ಪ್ರಕಾಶ ಬೆಣ್ಣೂರ ಅವರ ಟೆಂಗಿನ ಮರಗಳು, ಮನಗೂಳಿಯ ಮಾರುತಿ ದ್ಯಾಮಣ್ಣ ಕಾರಜೋಳ ಅವರ ಪಪ್ಪಾಯ ಗಿಡಗಳು ಗಾಳಿ-ಮಳೆಗೆ ಹಾನಿಯಾಗಿವೆ.
ಬಸವನಬಾಗೇವಾಡಿಯ ಪರಸಪ್ಪ ಮುತ್ತಪ್ಪ ಒಡೆಯರ ,ಹುಣಶ್ಯಾಳ ಪಿಬಿಯ ರಾಜಮಾ ರಾಜೇಸಾಬ ಚಪ್ಪರಬಂದ, ಉಕ್ಕಲಿಯ ಯಂಕು ಗಂಗು ರಾಠೋಡ, ಯರನಾಳ ಗ್ರಾಮದ ಸಂಗಪ್ಪ ಕಲ್ಲಪ್ಪ ಒಂಟಗೊಡಿ ಅವರ ಮನೆಗಳು ಹಾನಿಯಾಗಿವೆ ಎಂದು ತಹಸೀಲ್ದಾರ ಕಚೇರಿಯ ಪ್ರಾಥಮಿಕ ವರದಿಯಿಂದ ತಿಳಿದುಬಂದಿದೆ.
ವಿವಿಧೆಡೆ ಇರುವ ಮಳೆ ಮಾಪನ ಕೇಂದ್ರದಲ್ಲಿ ದಾಖಲಾದ ಮಳೆ ವಿವರ: ಬಸವನಬಾಗೇವಾಡಿ ಮಳೆ ಮಾಪನ ಕೇಂದ್ರದಲ್ಲಿ ೩೫.೭ ಎಂ.ಎಂ., ಮನಗೂಳಿ ಮಳೆ ಮಾಪನ ಕೇಂದ್ರದಲ್ಲಿ ೧೫.೧ ಎಂ.ಎಂ. ಹೂವಿನಹಿಪ್ಪರಗಿ ಮಳೆ ಮಾಪನ ಕೇಂದ್ರದಲ್ಲಿ ೩.೨ ಎಂ.ಎಂ. ಮಳೆ ದಾಖಲಾದ ವಿವರ ತಹಸೀಲ್ದಾರ ಕಚೇರಿಯ ಮೂಲದಿಂದ ತಿಳಿದುಬಂದಿದೆ.
Subscribe to Updates
Get the latest creative news from FooBar about art, design and business.
Related Posts
Add A Comment

