ಸಿಂದಗಿ: ಜಿಲ್ಲೆಯಲ್ಲಿ ಅಹಿಂದ ಮತಗಳನ್ನೂ ಒಟ್ಟುಗೂಡಿಸಿ ಅಹಿಂದ ಸಂಘಟನೆಯನ್ನು ತಳಮಟ್ಟದಿಂದ ಸಂಘಟಿಸಿ ಅಹಿಂದ ಸಂಘಟನೆಯನ್ನು ಮುನ್ನಡೆಸಿಕೊಂಡು ಹೋಗುತ್ತಿರುವ ಕೆಪಿಸಿಸಿ ವಕ್ತಾರ ಎಸ್.ಎಮ್.ಪಾಟೀಲ್ ಗಣಿಹಾರ ಇವರಿಗೆ ವಿಧಾನ ಪರಿಷತ್ ಸ್ಥಾನ ನೀಡಿ ಅವರ ಪಕ್ಷ ನಿಷ್ಠೆ ಹಾಗೂ ಅವರು ಪಕ್ಷಕ್ಕಾಗಿ ಶ್ರಮಿಸಿದ್ದನ್ನು ಗಮನಿಸಿ ಅವರಿಗೆ ಸ್ಥಾನ ಕೋಡಬೇಕು. ಹಾಗೂ ವಿಜಯಪುರ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಶಾಸಕರ ಗೆಲುವಿನಲ್ಲಿ ಇವರ ಪಾತ್ರ ಮುಖ್ಯವಾಗಿದೆ. ಜೊತೆಗೆ ಲೋಕಸಭೆ ಚುನಾವಣೆಯಲ್ಲಿಯೂ ಸಹ ಬಾಗಲಕೋಟೆ ಹಾಗೂ ವಿಜಯಪುರ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿ ನಿಷ್ಠಾವಂತರಾಗಿ ಕಾರ್ಯ ಮಾಡಿರುತ್ತಾರೆ. ಅನೇಕ ಬಾರಿ ಪಕ್ಷದಿಂದ ಅಧಿಕಾರ ವಂಚಿತರಾದ ಮೇಲು ಪಕ್ಷದ ಮೇಲಿನ ನಿಷ್ಠೆ ಕಡಿಮೆ ಮಾಡದೇ ಪಕ್ಷದ ಪರ ದುಡಿದಿರುವ ಯಾರಾದರೂ ವ್ಯಕ್ತಿ ಇದ್ದರೇ ಅದು ಎಸ್.ಎಮ್.ಪಾಟೀಲ್ ಗಣಿಹಾರ ಅವರು ಹಾಗಾಗಿ ಅವರಿಗೆ ವಿಧಾನ ಪರಿಷತ್ ಸ್ಥಾನ ಕೊಡಬೇಕು ಎಂದು ಸಿಎಂ, ಡಿಸಿಎಂ, ಜಿಲ್ಲೆಯ ಸಚಿವರು, ಹಾಗೂ ಕಾಂಗ್ರೆಸ್ ಪಕ್ಷದ ಶಾಸಕರಲ್ಲಿ ಸಿಂದಗಿ ನ್ಯಾಯಬೆಲೆ ಅಂಗಡಿಕಾರರ ತಾಲೂಕಾಧ್ಯಕ್ಷ ಅಸ್ಲಾಂ ಗೋಟ್ಯಾಳ ಹೆಸರು ಪ್ರಸ್ತಾಪಿಸುವಂತೆ ಆಗ್ರಹಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
