ಬಸವನಬಾಗೇವಾಡಿ: ಜೀವನದಲ್ಲಿ ಪುರಾಣ-ಪ್ರವಚನ ಕೇಳುವದರಿಂದ ಮನಸ್ಸು ಹಸನಾಗುತ್ತದೆ ಎಂದು ಮನಗೂಳಿ ಸಂಸ್ಥಾನ ಹಿರೇಮಠದ ಅಭಿನವ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಮನಗೂಳಿ ಪಟ್ಟಣದ ಸಂಸ್ಥಾನ ಹಿರೇಮಠದಲ್ಲಿ ಗುರುವಾರ ಶತಾಯುಷಿ ಲಿಂ.ಸಂಗನಬಸವ ಶಿವಾಚಾರ್ಯ ಸ್ವಾಮೀಜಿಯವರ ೪೧ ನೇ ಪುಣ್ಯಸ್ಮರಣೋತ್ಸವ ಹಾಗೂ ೨೦೦೮ ಜಗದ್ಗುರು ಲಿಂ.ಡಾ.ಮಹಾಂತ ಶಿವಾಚಾರ್ಯ ಸ್ವಾಮೀಜಿಯವರ ಜಾತ್ರಾಮಹೋತ್ಸವದಂಗವಾಗಿ ೧೧ ದಿನಗಳ ಕಾಲ ಹಮ್ಮಿಕೊಂಡಿರುವ ಶಿವಶರಣೆ ಹೇಮರಡ್ಡಿ ಮಲ್ಲಮ್ಮಳ ಪುರಾಣ ಉದ್ಘಾಟನೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪುರಾಣ-ಪ್ರವಚನ ಕೇಳುವದರಿಂದ ಮನುಷ್ಯನಿಗೆ ಸಂಸ್ಕಾರ ತಿಳಿಯುತ್ತದೆ. ಸಂಸಾರದ ಜಂಜಾಟದಲ್ಲಿ ಪ್ರತಿನಿತ್ಯ ಚಿಂತೆ ಮಾಡುವದನ್ನು ಬಿಟ್ಟು ಪುರಾಣ-ಪ್ರವಚನಗಳು ನಡೆಯುವ ಸ್ಥಳಕ್ಕೆ ಹೋಗಿ ಅಲ್ಲಿನ ನಾಲ್ಕು ಹಿತ-ನುಡಿಗಳನ್ನು ಆಲಿಸುವದರಿಂದ ಜೀವನ ಹಸನಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ವ್ಹಿಡಿಸಿಸಿ ಬ್ಯಾಂಕಿನ ನಿರ್ದೇಶಕ ಚಂದ್ರಶೇಖರಗೌಡ ಪಾಟೀಲ ಮಾತನಾಡಿ, ಮನಗೂಳಿಯ ಸಂಸ್ಥಾನ ಹಿರೇಮಠವು ಜಿಲ್ಲೆಯಲ್ಲಿಯೇ ಅದರದೇ ಆದ ಸಾಮಾಜಿಕ ಕಾರ್ಯಗಳ ಮೂಲಕ ಗಮನ ಸೆಳೆಯುತ್ತಿದೆ. ಶ್ರೀಮಠದ ಲಿಂಗೈಕ್ಯ ಪೂಜ್ಯರ ಸಂಕಲ್ಪಗಳನ್ನು ಪ್ರಸ್ತುತ ಶ್ರೀಗಳು ಈಡೇರಿಸುತ್ತಿದ್ದಾರೆ. ಈ ಮೂಲಕ ಶ್ರೀಮಠದ ಕೀರ್ತಿಯನ್ನು ನಾಡಿನಲ್ಲಿ ಪಸರಿಸುತ್ತಿದ್ದಾರೆ. ಶ್ರೀಮಠದ ಕಲ್ಯಾಣ ಮಂಟಪ ಉದ್ಘಾಟನಾ ಸಮಾರಂಭವನ್ನು ಕೆಲ ತಿಂಗಳ ಹಿಂದೆ ಅದ್ದೂರಿಯಾಗಿ ಮಾಡಿದ್ದನ್ನು ಸ್ಮರಿಸಿಕೊಂಡರು.
ಕಾರ್ಯಕ್ರಮದಲ್ಲಿ ಹೊನ್ನಿಗನೂರಿನ ಪ್ರವಚನಕಾರ ವಿರುಪಾಕ್ಷಿ ಶಾಸ್ತ್ರೀಜಿ, ಈರಪ್ಪ ಹುಣಸಿಕಟ್ಟಿ, ರಾಮು ಬಿರಾದಾರ,ಯಂಕಪ್ಪ ಬನ್ನೂರ, ಗವಾಯಿ ಅಂಬರೀಶ, ತಬಲಾ ವಾದಕ ಮಲ್ಲೇಶಕುಮಾರ ಮದ್ಲಾಪುರ ಇದ್ದರು.
ಮಹಾಂತೇಶ ಮನಗೂಳಿ ಸ್ವಾಗತಿಸಿ, ನಿರೂಪಿಸಿದರು. ಶ್ರವಣ ಕೋಟ್ಯಾಳ ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

