ವಿಜಯಪುರ: ಇತ್ತೀಚೆಗೆ ನಿಧನರಾದ ಜನಸಂಘದ ಹಿರಿಯರು, ತಾಳಿಕೋಟಿ ಪಟ್ಟಣದ ಮುಖಂಡರಾದ ಬಾಳುಸಿಂಗ್ ರಾಮಸಿಂಗ್ ವಿಜಾಪುರ ಅವರ ಮನೆಗೆ ನಗರ ಶಾಸಕ ಬಸನಗೌಡ ರಾ.ಪಾಟೀಲ ಯತ್ನಾಳ ಅವರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಜನಸಂಘದ ಕಾಲದಿಂದಲೂ ನಮ್ಮ ಪಕ್ಷದ ಸಂಟನೆಗಾಗಿ ಶ್ರಮಿಸಿರುವುದು, ತಮ್ಮ ಜೊತೆಗಿದ್ದ ಆತ್ಮೀಯ ಒಡನಾಟ ಬಗ್ಗೆ ಕುಟುಂಬದವರೊಂದಿಗೆ ಹಂಚಿಕೊಂಡರು. ಭಾರತೀಯ ಜನತಾ ಪಕ್ಷ ಸಂಘಟನೆಗೆ ಬಾಳುಸಿಂಗ್ ಅವರು ಅಪಾರ ಕೊಡುಗೆ ನೀಡಿದ್ದಾರೆ. ಅವರ ನಿಧನದಿಂದ ಪಕ್ಷಕ್ಕೆ ಅಪಾರ ನಷ್ಟವಾಗಿದೆ ಎಂದರು.
ಈ ಸಂದರ್ಭದಲ್ಲಿ ರಜಪೂತ್ ಸಮಾಜದ ಅಧ್ಯಕ್ಷ ಹರಿಸಿಂಗ್ ಮೂಲಿಮನಿ, ಸುರೇಶ ಹಜೇರಿ, ರತನಸಿಂಗ್ ಕೊಕಟನೂರ, ರಮೇಶ ಗೌಡಗೇರಿ ಸೇರಿದಂತೆ ಬಿಜೆಪಿ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು, ಅಭಿಮಾನಿಗಳು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

