ಬ್ರಹ್ಮದೆವನಮಡು: ಕುಡಿದ ಮತ್ತಿನಲ್ಲಿ ಪತ್ನಿ ಶೀಲಶಂಕಿಸಿ ಕೊಡಲಿಯಿಂದ ಕೊಚ್ಚಿ ಪತಿ ಕೊಲೆ ಮಾಡಿದ ಘಟನೆ ಸಿಂದಗಿ ತಾಲೂಕಿನ ಢವಳಾರ ಗ್ರಾಮದಲ್ಲಿ ನಡೆದಿದೆ.
ಕಮಾಲಬಾಯಿ ಇಂಚಗೇರಿ (೪೫) ಕೊಲೆಯಾದ ಮೃತ ದುದೈ೯ವಿಯಾಗಿದ್ದು.ಕುಡಿದ ಮತ್ತಿನಲ್ಲಿ ಗೋಲ್ಲಾಳಪ್ಪಗೌಡ ಭಗವಂತಪಗೌಡ ಇಂಚಗೇರಿ ಗೆ ಜಗಳ ಮಾಡಿಕೊಂಡಿದ್ದಾನೆ.ಜಗಳ ವಿಕೋಪಕ್ಕೆ ಹೋಗಿ ಪತ್ನಿಯನ್ನೇ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಅಲ್ಲದೇ ಕೊಲೆ ಮಾಡಿ ಸ್ಥಳದಲ್ಲಿಯೇ ಮಲಗಿದ್ದಾನೆ.
ಘಟನಾ ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ಶಂಕರ ಮಾರಿಹಾಳ, ಇಂಡಿ ಡಿವೈಎಸ್ಪಿ ಎಚ್.ಜಗದೀಶ, ಸಿಂದಗಿ ಸಿಪಿಆಯ್ ನಾನಾಗೌಡ ಪೋಲಿಸ್ ಪಾಟೀಲ, ಕಲಕೇರಿ ಠಾಣೆಯ ಪಿಎಸೈ ರೋಹಿಣಿ ಪಾಟೀಲ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.ಕಲಕೇರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Subscribe to Updates
Get the latest creative news from FooBar about art, design and business.
Related Posts
Add A Comment
