ವಿಜಯಪುರ: ಜಿಲ್ಲೆಯ ಕಿಸಾನ ಕಾಂಗ್ರೆಸ್ನ ಜಿಲ್ಲಾ ಉಪಾಧ್ಯಕ್ಷರಾದ ಚನಬಸಯ್ಯ ಹಿರೇಮಠ ಅವರನ್ನು ಗಣೇಶ ನಗರದ ಅವರ ಅಭಿಮಾನಿಗಳಿಂದ ಸನ್ಮಾನಿಸಿ ಗೌರವಿಸಲಾಯಿತು.
ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊನಮಲ್ಲಗೌಡ ಸಾರವಾಡ ಅವರು ಮಾತನಾಡುತ್ತಾ, ಚನಬಸಯ್ಯ ಅವರು ಬಹಳ ಒಳ್ಳೆಯ ಮೃದು ಸ್ವಾಭಾವದ ಎಲ್ಲರೊಂದಿಗೆ ಸರಳವಾಗಿ ಬೆರೆಯುವ ವ್ಯಕ್ತಿತ್ವ ಉಳ್ಳವರು, ಅವರಿಗೆ ಈ ನೂತನ ಹುದ್ದೆ ಕೊಟ್ಟಿರುವುದು ಸ್ವಾಗತಾರ್.ಹ ನಿಮ್ಮಿಂದ ಜಿಲ್ಲೆಯ ರೈತರ ಕಷ್ಟ ಬಗೆಹರೆಸುವಂತಹ ಶಕ್ತಿ ಬಂದು ಒಳ್ಳೆಯ ಸಂಘಟನೆ ಮಾಡುವಂತಾಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಸಲೀಮ್ ಕಲಾದಗಿ ಅಶೋಕ ಬಾಗೇವಾಡಿ ಡಿ ಎಸ್ ಎಸ್ ಜಿಲ್ಲಾ ಸಂಚಾಲಕರಾದ ಚನ್ನು ಕಟ್ಟಿಮನಿ,ಮುತ್ತುಗೌಡ ಪಾಟೀಲ ಗ್ರಾಪಂ ಸದಸ್ಯರು ಸೋಲವಾಡಗಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ವಾಸೀಮ್ ಇನಾಮ್ದಾರ, ರಾಮನಗೌಡ ಪಾಟೀಲ ಬ್ಯಾಲಾಳ, ಲಕ್ಷ್ಮೀ ನಗರದ ಅಭಿವೃದ್ಧಿ ಸಂಘ ಅಧ್ಯಕ್ಷರಾದ ಪ್ರವೀಣ ಕಿಚಡಿ, ಪ್ರದೀಪ್ ಮಿಸ್ಕೀನ್ ಕಿಸಾನ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಕಲ್ಲಪ್ಪ ಪಾರಶೆಟ್ಟಿ, ಈಶ್ವರ ಹೂಗಾರ, ಶಂಕರ್ ಬಜಂತ್ರಿ, ಸಾಧಿಕ್ ಹೋನ್ನುಟಗಿ, ಶಿವು ಕಟ್ಟಿಮನಿ ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

