ಮುದ್ದೇಬಿಹಾಳ: ಪಟ್ಟಣದ ಅರ್ಜುನ ಚಿಕ್ಕಮಕ್ಕಳ ಆಸ್ಪತ್ರೆಯಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ೫೯೯(ಶೇ.೯೬%) ಅಂಕಗಳನ್ನು ಪಡೆದು ರಾಜ್ಯಕ್ಕೆ ದ್ವಿತಿಯ ಸ್ಥಾನ ಗಿಟ್ಟಿಸಿಕೊಂಡ ರಾಮು ವಡ್ಡರ ಗೆ ಚೈತ್ರಾ ಆರೋಗ್ಯ, ಶಿಕ್ಷಣ ಸೇವಾ ಟ್ರಸ್ಟ್ ಮತ್ತು ದಿ.ನಾಗಮ್ಮ ಭೀಮಪ್ಪ ಬೆಳಗಲ್ಲ ಪೌಂಡೇಶನ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ವೇಳೆ ಚಿಕ್ಕಮಕ್ಕಳ ತಜ್ಞ ವೈದ್ಯ ಡಾ.ಪರಶುರಾಮ ವಡ್ಡರ ಮಾತನಾಡಿ, ಮಕ್ಕಳಿಗೆ ಶಿಕ್ಷಣ ನೀಡುವಲ್ಲಿ ಶಿಕ್ಷಕರ ಪಾತ್ರ ಎಷ್ಟಿದೆಯೋ ಅಷ್ಟೇ ಮಹತ್ವದ ಪಾತ್ರ ಪಾಲಕರದ್ದೂ ಇರುತ್ತದೆ. ಶಾಲೆಯಿಂದ ಮನೆಗೆ ಬರುವ ಮಗುವಿಗೆ ಮನೆಯಲ್ಲಿ ಅಂದಿನ ಶಾಲಾ ಪಾಠದ ಕುರಿತು ಮನನ ಮಾಡಿಸಿದಲ್ಲಿ ಮಗುವಿನ ಬೌದ್ಧಿಕ ಬೆಳವಣಿಗೆಯಾಗುತ್ತದೆ ಎಂದರು.
ಈ ವೇಳೆ ಟ್ರಸ್ ಅಧ್ಯಕ್ಷ ಯಮನಪ್ಪ ವಡ್ಡರ, ಸದಸ್ಯರಾದ ಕುಮಾರ ವಡ್ಡರ, ಹಾಗೂ ಪೌಂಡೇನ್ ಅಧ್ಯಕ್ಷ ಹಣಮಂತ ಬೆಳಗಲ್ಲ, ಉಪಾಧ್ಯಕ್ಷ ಹಣಮಂತ ಭೈರವಾಡಗಿ, ಸದಸ್ಯರುಗಳಾದ ಮಲ್ಲಣ್ಣ ಚೌಧರಿ, ಬುಡ್ಡಾ ನಿಡಗುಂದಿ, ಯಲ್ಲಪ್ಪ ವಡ್ಡರ ಸೇರಿದಂತೆ ಮತ್ತೀತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

