ಬಸವನಬಾಗೇವಾಡಿ: ತಾಲೂಕಿನ ವಡವಡಗಿ ಗ್ರಾಮದ ಪರಶುರಾಮ ದೊಡಮನಿ ತೋಟದ ಬಾವಿಯಲ್ಲಿ ಗುರುವಾರ ಆಕಸ್ಮಿಕವಾಗಿ ಶಿವಶಂಕ್ರೆಪ್ಪ ಅಂಬೇಕರ ಅವರ ಎತ್ತು ಬಿದ್ದ್ತಿತು. ಈ ಎತ್ತನ್ನು ಸ್ಥಳೀಯ ಅಗ್ನಿಶಾಮಕ ಠಾಣೆಯ ಸಿಬ್ಬಂದಿಗಳು ರಕ್ಷಣಾ ಕಾರ್ಯ ನಡೆಸಿ ಎತ್ತನ್ನು ಬಾವಿಯಿಂದ ಸುರಕ್ಷಿತವಾಗಿ ಮೇಲಕ್ಕೆ ತಂದರು. ಈ ಕಾರ್ಯಾಚರಣೆ ಸುಮಾರು ಮೂರು ಗಂಟೆ ಕಾಲ ನಡೆಯಿತು. ಬಾವಿಯಿಂದ ಸಿಬ್ಬಂದಿಗಳು ಸುರಕ್ಷಿತವಾಗಿ ಮೇಲಕ್ಕೆ ತಂದು ಎತ್ತಿನ ಮಾಲೀಕರಿಗೆ ಒಪ್ಪಿಸಿದರು. ರಕ್ಷಣಾ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣೆಯ ಸಿಬ್ಬಂದಿಗಳಾದ ಬಸಪ್ಪ ಜಾಲಗೇರಿ, ನಾರಾಯಣ ರಾಠೋಡ, ಮಲ್ಲಿನಗೌಡ ಬಿರಾದಾರ, ಅಶೋಕ ನಾಯಕ, ಮುತ್ತಣ್ಣ ಲಮಾಣಿ, ನಾಗಪ್ಪ ಉಂಡಿ ಇದ್ದರು ಎಂದು ಅಗ್ನಿಶಾಮಕ ಠಾಣಾಧಿಕಾರಿ ಸಂಗಮೇಶ ಶಿವಪೂಜೆ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

