ಮುದ್ದೇಬಿಹಾಳ: ಸಕಾರಣವಿಲ್ಲದೇ ಬಂದ ಮಾಡಲಾದ ಬಸ್ ಸೇವೆಗಳನ್ನು ಪುನರ್ ಆರಂಭಿಸಬೇಕು ಎಂದು ಆಗ್ರಹಿಸಿ ಪಟ್ಟಣದ ಮರ್ಚೆಂಟ್ ಅಸೋಸಿಯೇಶನ್, ನಗರಾಭಿವೃದ್ಧಿ ಹೋರಾಟ ವೇದಿಕೆ ಸೇರಿದಂತೆ ವಿವಿದ ಪ್ರಗತಿಪರ ಸಂಘಟನೆಗಳು ಮೇ.೧೭ ರಂದು ಸಂಜೆ ೪ಗಂಟೆಗೆ ಪಟ್ಟಣದ ಗ್ರಾಮದೇವತೆ ದೇವಸ್ಥಾನದಿಂದ ಪ್ರತಿಭಟನೆ ನಡೆಸುವ ಮೂಲಕ ಕೆಎಸ್ಆರ್ಟಿಸಿ ಘಟಕಾಧಿಕಾರಿಗಳಿಗೆ ಮನವಿ ಸಲ್ಲಿಸಲು ನಿರ್ಧರಿಸಿವೆ.
ಈ ಕುರಿತು ಮಾಹಿತಿ ನೀಡಿದ ಹೋರಾಟಗಾರ ಬಸವರಾಜ ನಂದಿಕೇಶ್ವರಮಠ, ಈ ಹಿಂದೆ ಆಲಮಟ್ಟಿ ರೇಲ್ವೆ ಸ್ಟೇಷನ್, ಮುಂಬೈ, ನಾಸಿಕ, ರತ್ನಾಗಿರಿ, ವಾಸ್ಕೋ, ಪುಣೆ, ಹಾಸನ, ಕಾಗಿನೆಲೆ ಹೀಗೆ ಹಲವು ಬಸ್ಗಳನ್ನು ಮುದ್ದೇಬಿಹಾಳದಿಂದ ಓಡಿಸಲಾಗಿತ್ತಿತ್ತು. ಆದರೆ ದಿಢೀರನೆ ಈ ಬಸ್ಸುಗಳ ಒಡಾಟವನ್ನು ಬಂದ್ ಮಾಡಿದ್ದು ಸಾರ್ವಜನಿಕರು ಪರದಾಡುವಂತಾಗಿದೆ. ಕಾರಣ ಈ ಎಲ್ಲ ಬಸ್ಗಳು ಸೇರಿದಂತೆ ಎಲ್ಲ ಬಂದ್ ಮಾಡಲಾದ ಬಸ್ಗಳನ್ನು ಪುನರ್ ಆರಂಭಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಲಾಗುತ್ತಿದೆ. ಎಲ್ಲರೂ ಭಾಗಿಯಾಗುವಂತೆ ಮನವಿ ಮಾಡಿಕೊಂಡಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
