ವಿಜಯಪುರ: ಹುಲ್ಲೂರು (ಜೆಟ್ಟಗಿ) ವಿದ್ಯುತ್ ಉಪ ಕೇಂದ್ರದಲ್ಲಿ ಹೊಸದಾಗಿ ನಿರ್ಮಿಸಲಾಗುತ್ತಿರುವ ೧೧೦ ಕೆವಿ ಬಸವನ ಬಾಗೇವಾಡಿ – ಮುದ್ದೇಬಿಹಾಳ ಮಾರ್ಗದ ಗೋಪೂರ ಅಳವಡಿಸುವ ಹಾಗೂ ವಿದ್ಯುತ್ ಎಳೆಯುವ ಕಾಮಗಾರಿ ಸಲುವಾಗಿ ಮೇ. ೧೭ ರಂದು ಬೆಳಗ್ಗೆ ಎಂಟು ಗಂಟೆಯಿಂದ ಸಾಯಂಕಾಲ ೬ ಗಂಟೆಯವರೆಗೆ ೧೧೦ ಕೆವಿ ಉಪಕೆಂದ್ರ ಹಿರೇಮುರಾಳ, ೧೦೦ ಕೆವಿ ಕೆ ಎನ್ ಸೋಲಾರ ಮುದ್ದೇಬಿಹಾಳ, ೧೧೦ ಕೆವಿ ಕೋಳೂರು, ೧೧೦ ಕೆವಿ ಬಾಲಾಜಿ ಶುಗರ್ಸ್, ಹಾಗೂ ೧೧೦ ಕೆವಿ ಮುದ್ದೇಬಿಹಾಳ ಉಪ ಕೇಂದ್ರದಿಂದ ಹೊರಹೋಗುವ ೩೩ ಕೆವಿ ಉಪ ಕೇಂದ್ರಗಳ ಮಾರ್ಗದಲ್ಲಿ (ಢವಳಗಿ, ತಂಗಡಗಿ, ನಾಲತವಾಡ) ಮಾರ್ಗಗಳಲ್ಲಿ ಹಾಗೂ ಎಲ್ಲಾ ಉಪ ಕೇಂದ್ರಗಳಿಂದ ಹೊರಹೊಮ್ಮುವ ಎಲ್ಲಾ ೧೧ ಕೆವಿ ಮಾರ್ಗಗಳಿಗೆ ನಿರಂತರ ಜ್ಯೋತಿ ಮಾರ್ಗಗಳು, ನೀರು ಸರಬರಾಜು ಮಾರ್ಗಗಳು, ಕೃಷಿ ನೀರಾವರಿ ಮಾರ್ಗಗಳು ಹಾಗೂ ಗ್ರಾಮಗಳಿಗೆ ವಿದ್ಯುತ್ ಸರಬರಾಜು ಇರುವುದಿಲ್ಲ.
ಆದ ಕಾರಣ ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ಬಸವನ ಬಾಗೇವಾಡಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯ ನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
