ಬಸವನಬಾಗೇವಾಡಿ: ಸರ್ಕಾರ ಪಂಚಗ್ಯಾರಂಟಿಗಳಲ್ಲಿ ೨೦೦ ಯುನಿಟ್ ಬಳಕೆ ಮಾಡುವ ಗ್ರಾಹಕರಿಗೆ ಉಚಿತ ವಿದ್ಯುತ್ ನೀಡುತ್ತಿದೆಯಾದರೂ ವಿದ್ಯುತ್ ಬಿಲ್ ಕಟ್ಟುವ ಗ್ರಾಹಕರು ಸ್ಥಳೀಯ ಹೆಸ್ಕಾಂ ಕಚೇರಿಯ ಬಿಲ್ ಕೇಂದ್ರದ ಮುಂದೆ ನಿತ್ಯವೂ ಬಿಸಿಲಿನಲ್ಲಿಯೇ ನಿಂತು ತುಂಬುತ್ತಿರುವದು ಕಂಡುಬರುತ್ತಿದೆ.
ವಿದ್ಯುತ್ ಬಿಲ್ ಕಟ್ಟುವ ಒಂದು ಬದಿಯಲ್ಲಿ ಇಳಿಜಾರು ಇರುವದರಿಂದಾಗಿ ವೃದ್ದರಿಗೆ ತುಂಬಾ ತೊಂದರೆಯಾಗುತ್ತಿದೆ. ಬಿಲ್ ತುಂಬಲು ಬರುವ ಗ್ರಾಹಕರು ತಮ್ಮ ಬಿಲ್ ರಸೀದಿ ಬರುವವರೆಗೂ ಬಿಸಿಲಿನಲ್ಲಿಯೇ ನಿಂತು ಕೊಳ್ಳುವುದು ಅನಿವಾರ್ಯವಾಗಿದೆ. ಬಿಲ್ ರಸೀದಿ ತಡವಾಗಿ ಬರುತ್ತಿದೆ. ಇದರಿಂದಾಗಿ ಗ್ರಾಹಕರು ಕಾಯ್ದು ತೆಗೆದುಕೊಂಡು ಹೋಗಬೇಕಾಗಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಇದರ ಕಡೆಗೆ ಗಮನ ಹರಿಸಬೇಕೆಂದು ಎಂ.ಬಿ.ತೋಟದ ಹೇಳುತ್ತಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

