ವಿಜಯಪುರ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ ವತಿಯಿಂದ ಮೇ.೧೬ರಂದು ಬಿ.ಎಲ್.ಡಿ.ಇ ಸಂಸ್ಥೆಯ ಆವರಣದಲ್ಲಿರುವ ಡಾ.ಫ.ಗು. ಹಳಕಟ್ಟಿ ಇಂಜಿನಿಯರಿಂಗ ಕಾಲೇಜಿನ ಸಭಾಗೃಹದಲ್ಲಿ “Navigating Youth Towards Amrutha Kal: Knowledge Transfer Through Technology and Skill Development” ಎಂಬ ವಿಷಯದ ಕುರಿತು ಒಂದು ದಿನದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಬೆಳಗಾವಿಯ ಶ್ರೀನಿವಾಸ ಪಿ ಇವರು Revolutionising Artificial Intelligence in Knowledge Trnasfer ಎಂಬ ವಿಷಯದ ಕುರಿತು, ಐಐಟಿ ದೆಹಲಿಯ ಡಿ.ಎಸ್ .ಮಂಜುನಾಥ ಇವರು ToC Critical Chain-Theory of Constraints Tools Industry 4.0 Innovation,ಎಂಬ ವಿಷಯದ ಕುರಿತು, ಎಆರ್ಕೆ ವೈಡ್ ಇಂಡಸ್ಟೀಸ್ ಬೆಂಗಳೂರ ಇದರ ಡೈರೆಕ್ಟರ ಆದ ಸೂರಜ ಪಿ.ನಾಡಿಗ , ಇವರು Empowering Institutions Through Skill Development and Entrepreneurship ಎಂಬ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ.
ಕಾರ್ಯಾಗಾರದ ಅಧ್ಯಕ್ಷತೆಯನ್ನು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೋ.ಸಿ.ಎಂ.ತ್ಯಾಗರಾಜ ಅವರು ವಹಿಸಲಿದ್ದಾರೆ. ಕುಲಸಚಿವರಾದ ರಾಜೇಶ್ವರಿ ಜೈನಾಪೂರ, ಮತ್ತು ಕಾಲೇಜು ಅಭಿವೃದ್ಧಿ ಮಂಡಳಿಯ ನಿರ್ದೇಶಕರು ಮತ್ತು ಕಾರ್ಯಾಗಾರದ ಸಂಯೋಜಕರಾದ ಪ್ರೋ.ಎಸ್.ಎಂ ಗಂಗಾಧರಯ್ಯಾ ಇವರು ಉಪಸ್ಥಿತರಿರುತ್ತಾರೆ ಎಂದು ಡಾ.ಫ.ಗು. ಹಳಕಟ್ಟಿ ಸ್ನಾತಕೋತ್ತರ ಕೇಂದ್ರದ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
