ಆಲಮಟ್ಟಿ: ಆಲಮಟ್ಟಿ ಜಲಾಶಯದ ವ್ಯಾಪ್ತಿಗೆ ಬರುವ ಮುಳವಾಡ ಹಾಗೂ ಚಿಮ್ಮಲಗಿ ಏತ ನೀರಾವರಿಗೆ ಸಂಬಂಧಿಸಿದ ಎಲ್ಲ ಕಾಲುವೆಗಳಿಗೆ ನೀರು ಹರಿಸಿ ಜಿಲ್ಲೆಯಲ್ಲಿರುವ 116 ಕೆರೆಗಳನ್ನು ಭರ್ತಿಮಾಡಬೇಕೆಂದು ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದ ಕಾರ್ಯಕರ್ತರು ಗುರುವಾರ ಮುಖ್ಯ ಎಂಜಿನಿಯರ್ ಅವರಿಗೆ ಮನವಿ ಸಲ್ಲಿಸಿದರು.
ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಕಳೆದ ತಿಂಗಳು ಕಾಲುವೆಗೆ ನೀರು ಹರಿಸಿದಾಗ 116 ಕೆರೆಗಳ ಪೈಕಿ ಅರ್ಧದಷ್ಟು ಮಾತ್ರ ಕೆರೆಗಳಿಗೆ ನೀರು ಸೇರಿದ್ದು ಮಧ್ಯದಲ್ಲಿ ರೈತರು ಹಳ್ಳಕ್ಕೆ ನೀರು ಹರಿಸಿದ ಪರಿಣಾಮ ಕೆಲವೊಂದು ಭಾಗದಲ್ಲಿ ಕೆರೆಗಳಿಗೆ ನೀರು ತಲುಪಿಲ್ಲ ಇದರಿಂದ ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆ ಎದುರಾಗಿದೆ ಪ್ರತಿ ಬಾರಿಯು ನೀರು ಹರಿಸಿದ ಸಂದರ್ಭದಲ್ಲಿ ಕಾಲುವೆ ಕೊನೆಯ ಅಂಚಿನವರೆಗೆ ನೀರು ತಲುಪುವದಿಲ್ಲ ಇದರಿಂದ ಕೊನೆಯ ಭಾಗದ ರೈತರು ನೀರಿನಿಂದ ವಂಚಿತರಾಗಿದ್ದಾರೆ.ಈ ಬಾರಿ ಬಿಸಿಲಿನ ಪ್ರಖರತೆ ಹೆಚ್ಚಿರುವದರಿಂದ ಬಹುತೇಕ ಕೆರೆಗಳಲ್ಲಿಯ ನೀರು ಬತ್ತಿ ಹೋಗಿವೆ ಜಲಾಶಯದಲ್ಲಿ ಇನ್ನು ಒಟ್ಟು ನೀರಿನ ಸಂಗ್ರಹ 30 ಟಿಎಂಸಿ ಅಡಿ ನೀರು ಇದೆ ಅದರಲ್ಲಿ 17 ಟಿಎಂಸಿ ಅಡಿ ಬಳಕೆಗೆ ನಿರ್ಭಂದದ ನೀರು ಹೊರತು ಪಡಿಸಿದರು ಬಳಕೆಗೆ ಇನ್ನೂ 13 ಟಿ.ಎಮ್.ಸಿ ಅಡಿ ನೀರು ಲಭ್ಯ ವಿದೆ .ಅದರಲ್ಲಿ ಕೇವಲ 1.5 ಟಿಎಂಸಿ ಅಡಿ ನೀರು ಹರಿಸಿದರೇ ಜಿಲ್ಲೆಯ ಎಲ್ಲಾ ಕೆರೆಗಳು ಭರ್ತಿಯಾಗಲಿವೆ ಎಂದರು.
ಈ ಹಿಂದೆ ನಡೆಸಿದ ನೀರಾವರಿ ಸಲಹಾ ಸಮೀತಿ ಸಭೆಯಲ್ಲಿ ಬೇಸಿಗೆಯ ಸಂದರ್ಭದಲ್ಲಿ ಒಟ್ಟು 3 ಬಾರಿ ನೀರು ಹರಿಸಲು ತೀರ್ಮಾನಿಸಲಾಗಿದ್ದು ಈ ಸಭೆಯ ನಿರ್ಣಯದಂತೆ ಮೇ ತಿಂಗಳು ಮೊದಲನೆಯ ವಾರದಲ್ಲಿ ನೀರು ಹರಿಸಲು ಪ್ರಾರಂಭಿಸಬೇಕಿತ್ತು ಎಂದರು.
ಬಸವನಬಾಗೇವಾಡಿ ಶಾಖಾ ಕಾಲುವೆಗೆ ತುರ್ತಾಗಿ ನೀರು ಹರಿಸಿ ಕೊನೆಯ ಅಂಚಿನವರೆಗೆ ನೀರು ತಲುಪುವಂತೆ ಕ್ರಮ ವಹಿಸಬೇಕು ಇಲ್ಲದಿದ್ದರೆ ಕಛೇರಿ ಮುಂದುಗಡೆ ಧರಣ ಸತ್ಯಾಗ್ರಹ ಹಮ್ಮಿಕೊಳ್ಳಬೇಕಾಗುತ್ತದೆಂದು ಅರವಿಂದ ಕುಲಕರ್ಣಿ ಎಚ್ಚರಿಕೆ ನೀಡಿದರು.
ತಾಂತ್ರಿಕ ಸಹಾಯಕ ಉಮೇಶ ಮನವಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ವಿಠಲ ಬಿರಾದಾರ, ಚಂದ್ರಶೇಖರ ಜಮ್ಮಲದಿನ್ನಿ ಭೀರಪ್ಪ ವಂದಾಲ,ರೇವಪ್ಪಗೌಡ ಪೋಲೆಶಿ, ಗುರುಲಿಂಗಪ್ಪ ಪಡಸಲಗಿ, ವಿಠಪ್ಪ ಗೋಡೇಕರ, ನಲ್ಲಪ್ಪ ಮನ್ಯಾಳ, ಲಾಲಸಾ ಹಳ್ಳುರ ರಾಮಣ್ಣ ಮನ್ಯಾಳ, ಸಿದ್ಲಿಂಗಪ್ಪ ಬಿರಾದಾರ ಯಲ್ಲಪ್ಪ ಮನ್ಯಾಳ, ಲಾಳೇಸಾ ಕೆಳಗಿನಮನಿ, ರಾಜು ಬಿರಾದಾರ, ಬಂದಗಿಸಾಬ ಹಳ್ಳುರ ಬಾಬು ಹಡಪದ, ದೇವಪ್ಪ ಪೋಲೆಶಿ ಶಿವರಾಜ ಗೋಡೆಕಾರ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

