ಯಡ್ರಾಮಿ: ಮಕ್ಕಳನ್ನು ಅಂಕಪಟ್ಟಿಗಳ ತಯಾರಿಕೆಯ ಯಂತ್ರವನ್ನಾಗಿಸದೇ ಅವರಲ್ಲಿನ ನಿಜವಾದ ಪ್ರತಿಭೆ ಗುರುತಿಸಿ ಅವರನ್ನು ಸ್ವಾವಲಂಬಿಗಳನ್ನಾಗಿಸಿ ಜೀವನಕ್ಕೆ ಅಣಿಗೊಳಿಸುವಂತ ಶಿಕ್ಷಣ ನಮ್ಮದಾಗಬೇಕು ಎಂದು ಸಾಹಿತಿ, ಸಂಶೋಧಕ ಮುಡಬಿ ಗುಂಡೇರಾವ್ ಸೇಡಂ ಅವರು ಹೇಳಿದರು.
ಪಟ್ಟಣದ ಜ್ಞಾನೋದಯ ಶಿಕ್ಷಣ ಸಂಸ್ಥೆಯ ಜ್ಞಾನಭಾರತಿ ಪ್ರಾಥಮಿಕ, ಪ್ರೌಢ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯಯಲ್ಲಿ ಶುಕ್ರವಾರ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ವಾರ್ಷೀಕ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಕ್ಕಳಲ್ಲಿ ಟಾಟಾ, ಬಾಯ್ ಬಾಯ್, ಅಂಕಲ್, ಅಂಟಿ ಸಂಸ್ಕೃತಿಯಿಂದ ದೂರವಾಗಿರಿಸಿ ಅಪ್ಪಟ ನಮ್ಮ ದೇಶಿ ಸಂಸ್ಕೃತಿಯ ಉದಾತ್ತ ಮೌಲ್ಯಗಳನ್ನು ಬಿತ್ತಬೇಕಾಗಿದೆ. ಡಾ| ಬಾಬಾಸಾಹೇಬ ಅಂಬೇಡ್ಕರ್, ಅಬ್ದುಲ್ ಕಲಾಂ, ಸಂಗೊಳ್ಳಿ ರಾಯಣನಂಥ ಮಹಾನ್ ಪುರುಷರ ಜೀವನ ಚರಿತ್ರೆ ನಮ್ಮ ಮಕ್ಕಳಿಗೆ ಆದರ್ಶವಾಗಬೇಕಿದೆ. ಈ ನಿಟ್ಟಿನಲ್ಲಿ ಪಾಲಕ-ಪೋಷಕರು ತಮ್ಮ ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಬೆಳೆಸಿ ರಾಷ್ಟ್ರ ಪ್ರೇಮ, ನಾಡ ಅಭಿಮಾನ ಬೆಳೆಸುವಂತೆ ಸಜ್ಜುಗೊಳಿಸಬೇಕೆಂದರು.
ನಂತರ ಯುವ ಸಾಹಿತಿ ಡಾ| ಸಂತೋಷ ನವಲಗುಂದ ಮಾತನಾಡಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ ಯಡ್ರಾಮಿ ವಿರಕ್ತಮಠದ ಸಿದ್ಧಲಿಂಗ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.
ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಈ ಸಂದರ್ಭದಲ್ಲಿ ಮುಖಂಡರಾದ ಚಂದ್ರಶೇಖರ ಪುರಾಣಿಕ, ಮಹಾಲಿಂಗಪ್ಪಗೌಡ ಬಂಡೆಪ್ಪಗೌಡ್ರ, ಸಿದ್ಧನಗೌಡ ಮಾಲೀಪಾಟೀಲ, ತಾಲೂಕು ಕಸಾಪ ಅಧ್ಯಕ್ಷ ನಾಗಪ್ಪ ಸಜ್ಜನ, ಬಿ.ಬಿ.ವಾರದ, ಆರ್,ಜಿ. ಪುರಾಣಿಕ, ಅಬ್ದುಲ್ ರಜಾಕ್ ಮನಿಯಾರ, ಬಾಬಾಫರೀದ ಮಳ್ಳಿಕರ್, ನಾಗಣ್ಣ ಹಾಗರಗುಂಡಗಿ, ಬಸನಗೌಡ ಖಾನಗೌಡರ್, ಗುರುಬಸಪ್ಪ ಚಾಂದಕವಟೆ, ಮಲ್ಲನಗೌಡ ಪಾಟೀಲ, ಅಜ್ಮೀರ್ ಪಟೇಲ, ಸಂಸ್ಥೆಯ ಮುಖ್ಯಸ್ಥ ಜಿ.ಎಸ್.ಬಿರಾದಾರ, ಬಸವರಾಜ ಕೋನಸಿರಸಗಿ, ಶಾಲೆಯ ಶಿಕ್ಷಕ ಸಿಬ್ಬಂದಿ, ಪಾಲಕರು ಹಾಗೂ ವಿದ್ಯಾರ್ಥಿಗಳಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

