ವಿಜಯಪುರ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ- ವಿಜಯಪುರ ಹಾಗೂ ಕೆಎಸ್ಆರ್ಟಿಸಿ ಸ್ಟಾಫ್& ವರ್ಕರ್ಸ್ ಯೂನಿಯನ್ (ಎ.ಐ.ಟಿ.ಯು.ಸಿ) ವತಿಯಿಂದ ಒಂದು ದಿನದ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡು ವಿಜಯಪುರ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯದ ಮುಖ್ಯಮಂತ್ರಿಗಳಿಗೆ ಹಾಗೂ ವ್ಯವಸ್ಥಾಪಕ ನಿರ್ದೇಶಕರು, ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ, ಕಲಬುರಗಿ ಇವರಿಗೆ ಸಾರಿಗೆ ನೌಕರ ಬೇಡಿಕೆಳನ್ನು ಈಡೇರಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕೆಎಸ್ಆರ್ಟಿಸಿ ಸ್ಟಾಫ್& ವರ್ಕರ್ಸ್ ಯೂನಿಯನ್ (ಎ.ಐ.ಟಿ.ಯು.ಸಿ) ಪ್ರಧಾನ ಕಾರ್ಯದರ್ಶಿ ಐ.ಐ.ಮುಶ್ರೀಫ್ ರವರು ಮಾತನಾಡಿ, ತಮ್ಮೆಲ್ಲ ಬೇಡಿಕೆಗಳ ಕುರಿತು ವಿವರಿಸಿದರಲ್ಲದೆ,
ನಾಲ್ಕೂ ಸಾರಿಗೆ ನಿಗಮಗಳಲ್ಲಿ ಸಿಬ್ಬಂಧಿಗಳ ನೇಮಕಾತಿಯನ್ನು ಬೇಗ ಮುಗಿಸಿ, ಎಲ್ಲಾ ನಿಗಮಗಳಲ್ಲೂ ನೌಕರರ ಮುಂಬಡ್ತಿಗೆ ಕ್ರಮ ತೆಗೆದುಕೊಳ್ಳಬೇಕು. ಶಕ್ತಿ ಯೋಜನೆಯಿಂದ ಚಾಲಕ ನಿರ್ವಾಹಕರಿಗೆ ಆಗುತ್ತಿರುವ ಶಿಕ್ಷೆ ಮತ್ತು ಕಿರುಕುಳಗಳ ಬಗ್ಗೆ ಅಲಾಹಿತ ಟಿಪ್ಪಣಿ ಕೊಡುತ್ತಿದ್ದೇವೆ. ಅದನ್ನು ಜಂಟಿ ಕ್ರಿಯಾ ಸಮಿತಿ ಜೊತೆ ಚರ್ಚಿಸಿ ಸಮಸ್ಯೆಗಳನ್ನು ಪರಿಹರಿಸತಕ್ಕದ್ದು.ಮೇಲ್ಕಂಡ ಬೇಡಿಕೆಗಳನ್ನು ಜಂಟಿ ಕ್ರಿಯಾ ಸಮಿತಿ ಬದಲಿಸುವ, ಮಾರ್ಪಡಿಸುವ ಅಥವಾ ಹಿಂಪಡೆಯುವ ಹಕ್ಕನ್ನು ಕಾಯ್ದಿರಿಸಲಾಗಿದೆ ಎಂದು ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಎನ್ಈಕೆಆರ್ಟಿಸಿ ಎಸ್ಸಿ & ಎಸ್ಟಿ ಎಂಪ್ಲಾಯಿಸ್ ಕೆಎಸ್ಆರ್ಟಿಸಿ ಎಸ್ಸಿ & ಎಸ್ಟಿ ಅಸೋಸಿಯೇಷನ್, ವಿಜಯಪುರ ಅದ್ಯಕ್ಷ ರಾಚಪ್ಪ ಜಿ. ಲಿಂಗದಳ್ಳಿ, ಕೆಎಸ್ಆರ್ಟಿಸಿ ಎಸ್ಸಿ & ಎಸ್ಟಿ ಅಸೋಸಿಯೇಷನ್, ವಿಜಯಪುರ ಎಂಪ್ಲಾಯಿಸ್ ಯೂನಿಯನ್, ವಿಜಯಪುರ ಅಧ್ಯಕ್ಷ ಆರ್.ಎಮ್. ಮಡ್ಡಿಮನಿ,
ಕರಾರಸಾ ಸಂಸ್ಥೆ ಪ.ಜಾ/ಪ.ಪಂ ಅಧಿಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ, ವಿಜಯಪುರ ಪ್ರಧಾನ ಕಾಯದರ್ಶಿ ಬಸವರಾಜ ಭಜಂತ್ರಿ,ಆರ್ ಆರ್ ನದಾಫ್. ಶಿವಾನಂದ ಭೈಚಬಾಳ. ಅರುಣಕುಮಾರ ಹೀರೆಮಠ ಮುಸ್ತಾಕ ಹುಂಡೇಕಾರ, ಭೀಮಪ್ಪ ಗುಳೆದವರ, ಎಚ್.ಡಿ. ಪಟ್ಟಣಶೆಟ್ಟಿ, ನಿಂಗಪ್ಪ ಕವಲಗಿ, ನೂರಅಹ್ಮದ ಸೌದಾಗರ, ಜಯಶ್ರೀ ಹೂಗಾರ, ಜಿ.ಜಿ.ಬಿರಾದಾರ, ಬಾಬನಗೋಳ, ಮುನ್ನಾ ವಿಜಯಪುರ, ಆನಂದ ತಳವಾರ, ಶಿವಾನಂದ ಹದನೂರ, ಇನ್ನಿತರರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

