ಜ್ಞಾನ ಭಾರತಿ ಶಾಲೆಯ ೩೦ನೆಯ ವಾರ್ಷಿಕೋತ್ಸವದಲ್ಲಿ ಶಾಸಕ ಅಶೋಕ ಮನಗೂಳಿ ಭರವಸೆ
ಸಿಂದಗಿ: ಜ್ಞಾನ ಭಾರತಿ ಸಂಸ್ಥೆಯ ಕಟ್ಟಡಕ್ಕೆ ಸರಕಾರದಿಂದ ೨೫ಲಕ್ಷ ರೂ. ಅನುದಾನ ಮಂಜೂರು ಮಾಡಿಸಿ ಕೊಡುವೆ ಎಂದು ಶಾಸಕ ಅಶೋಕ ಮನಗೂಳಿ ಭರವಸೆ ನೀಡಿದರು.
ಪಟ್ಟಣದ ಜ್ಞಾನ ಭಾರತಿ ಶಾಲಾ ಆವರಣದಲ್ಲಿ ಹಮ್ಮಿಕೊಂಡ ಲಿಂ.ಮಡಿವಾಳಯ್ಯ ಹಿರೇಮಠ ಮೂರ್ತಿ ಅನಾವರಣ, ಜ್ಞಾನ ಭಾರತಿ ಶಾಲೆಯ ೩೦ನೆಯ ವಾರ್ಷಿಕೋತ್ಸವ ಹಾಗೂ ಪದವಿ ಪೂರ್ವ ಕಾಲೇಜಿನ ದಶಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಿಂದಗಿ ಶಿಕ್ಷಣ ಕಾಶಿ ಎಂದು ಪ್ರಖ್ಯಾತಿ ಪಡೆದಿದೆ. ನಮ್ಮ ತಂದೆಯವರಾದ ದಿ.ಎಂ.ಸಿ.ಮನಗೂಳಿ ಅವರ ಕಾಲದಲ್ಲಿ ಮಂಜೂರಾದ ತೋಟಗಾರಿಕಾ ಕಾಲೇಜು ನೆನೆಗುದಿಗೆ ಬಿದ್ದಿತ್ತು. ನಾನು ಶಾಸಕನಾಗಿ ಆಯ್ಕೆಯಾದ ಮೇಲೆ ಸಿಎಂ ಸಿದ್ದರಾಮಯ್ಯನವರು ಪುನಃ ಮಂಜೂರು ಮಾಡಿದ್ದಾರೆ ಎಂದರು.
ಈ ವೇಳೆ ಮೂರ್ತಿ ಅನಾವರಣಗೊಳಿಸಿದ ಮಾಜಿ ವಿಪ ಸದಸ್ಯ ಅರುಣ ಶಹಾಪುರ ಮಾತನಾಡಿದರು.
ಇದೇ ಸಂದರ್ಭದಲ್ಲಿ ರಾಮನಗೌಡ ಪಾಟೀಲ, ಚಂದ್ರಶೇಖರ ಕವಟಗಿ, ಬಿ.ಪಿ.ಕರ್ಜಗಿ, ಅಶೋಕ ವಾರದ, ಅಶೋಕ ಅಲ್ಲಾಪೂರ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು, ಸೊನ್ನ ದಾಸೋಹ ಮಠದ ಶಿವಾನಂದ ಶಿವಾಚಾರ್ಯರು, ಯಂಕಂಚ ಹಿರೇಮಠದ ಅಭಿನವ ರುದ್ರಮುನಿ ಶಿವಾಚಾರ್ಯರು, ಕನ್ನೋಳ್ಳಿ ಹಿರೇಮಠದ ಸಿದ್ದಲಿಂಗ ಶ್ರೀಗಳು, ಆಲಮೇಲ ಶ್ರೀಮಠದ ಚಂದ್ರಶೇಖರ ಶಿವಾಚಾರ್ಯರು, ಪುರದಾಳ-ಬೋರಗಿ ಶ್ರೀಮಠದ ತಪೋರತ್ನ ಮಹಾಲಿಂಗೇಶ್ವರ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು.
ಈ ವೇಳೆ ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಮತ್ತು ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಶ್ರೀ ಬಸವೇಶ್ವರ ವಿದ್ಯಾ ಪ್ರಸಾರ ಸಮಿತಿ ಅಧ್ಯಕ್ಷ ಶಿವಾನಂದ ಶಿವಾಚಾರ್ಯರು ಅಧ್ಯಕ್ಷತೆ ವಹಿಸಿದ್ದರು. ರಾಜಶೇಖರ ಉಮರಾಣಿ, ಅಶೋಕ ವಾರದ, ಎಸ್.ಎಮ್.ಪಾಟೀಲ ಗಣಿಹಾರ, ಅಶೋಕ ಅಲ್ಲಾಪೂರ, ಪ್ರಭು ಕಡಿ, ರಾಜಶೇಖರ ಪಾಟೀಲ, ದಯಾನಂದ ಹೆಚ್. ಬಿರಾದಾರ, ಎನ್.ಜಿ.ಸಜ್ಜನ, ಎಮ್.ಎ.ಖತೀಬ, ಎ.ಆಯ್.ಮುಲ್ಲಾ, ಆರ್,ಡಿ.ಕುಲಕರ್ಣಿ, ಸಿದ್ದನಗೌಡ ಬಿರಾದಾರ, ದೇವೆಂದ್ರ ಹಾಳಕಿ, ಈರಗಂಟೇಪ್ಪಗೌಡ ಬಿರಾದಾರ, ಮಾಹಾಂತಯ್ಯ ಹಿರೇಮಠ, ಕುಮಾರ ಹಿರೇಮಠ, ರವಿ ಪೂಜಾರಿ, ಸತೀಶ ಹಿರೇಮಠ, ಜೆ.ಸಿ.ನಂದಿಕೋಲ, ಜಗದೀಶ ಪಾಟೀಲ, ಬಸವರಾಜ ಶಿರೋಳಕರ, ಮಾಳು ಹೊಸುರ, ಬುಳ್ಳಪ್ಪ.ಡಿ, ಪ್ರಶಾಂತ ಪೂಜಾರಿ ಸೇರಿದಂತೆ ಶಾಲೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಪಾಲಕರು ಹಾಗೂ ವಿದ್ಯಾರ್ಥಿಗಳಿದ್ದರು.

