ಸಿಂದಗಿ: ಶ್ರೀ ಸಮರ್ಥ ವಿದ್ಯಾವಿಕಾಸ ವಿವಿದ್ದೋದೇಶ ಸಂಸ್ಥೆಯ ಆಲಮೇಲ ರಸ್ತೆಯ ಹೊರವಲಯದಲ್ಲಿರುವ ಪ್ರೇರಣಾ ಪಬ್ಲಿಕ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಫೆ.೨೪ರಂದು ಶಾಸಕರ ಸನ್ಮಾನ ಹಾಗೂ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಶುಭಕೋರುವ ಸಮಾರಂಭವನ್ನು ರಾಂಪೂರ ರಸ್ತೆಯ ಶಾಲಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಆರ್.ಡಿ.ಕುಲಕರ್ಣಿ ತಿಳಿಸಿದ್ದಾರೆ.
ಕಾರ್ಯಕ್ರಮದ ಉದ್ಘಾಟಕರಾಗಿ ಶಾಸಕ ಅಶೋಕ ಮನಗೂಳಿ ಆಗಮಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಆರೀಫ್ ಬಿರಾದಾರ, ದಸಂಸ ಜಿಲ್ಲಾ ಸಂಚಾಲಕ ವಾಯ್.ಸಿ.ಮಯೂರ, ವಿ.ಡಿ.ಕುಲಕರ್ಣಿ, ಪಿ.ಡಿ.ಕುಲಕರ್ಣಿ, ಮುಖ್ಯೋಪಾದ್ಯಾಯ ಎಸ್.ಆಯ್.ಅಸ್ಕಿ, ಪಿ.ಎಂ ಬುಕ್ಕಾ ಇರಲಿದ್ದಾರೆ. ಈ ವೇಳೆ ಚಿಕ್ಕ ಮಕ್ಕಳ ತಜ್ಞ ಡಾ.ಇಸ್ಮಾಯಿಲ್ ಮೊಗಲಾಯಿ, ಇಸಿಒ ಸುಧೀರ ಕಮತಗಿ, ಆನಂದ ಮಾಡಗಿ ಸಿಆರ್ಪಿ ನೀಲಕಂಠ ತಿಳಗೂಳ ಅವರನ್ನು ಸನ್ಮಾನಿಸಲಾಗುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
