ಬಸವನಬಾಗೇವಾಡಿ: ಮಗುವಿನ ಬೆಳವಣಿಗೆಯಲ್ಲಿ ತಾಯಿ ಪಾತ್ರ ಬಹುಮುಖ್ಯವಾಗಿದೆ. ತಾಯಿ ಮನಸ್ಸು ಮಾಡಿದರೆ ಮಗು ಇಡೀ ಜಗತ್ತನ್ನು ಬೆಳಗಬಲ್ಲ ವ್ಯಕ್ತಿಯಾಗಿ ರೂಪಿಸಬಹುದು ಎಂದು ಶಿಕ್ಷಕ ಅಶೋಕ ಹಂಚಲಿ ಹೇಳಿದರು.
ಪಟ್ಟಣದ ನಂದಿ ಶಿಕ್ಷಣ ಸಂಸ್ಥೆಯ ನಂದಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಮತ್ತು ನಂದಿ ಸಂಸ್ಕ್ರತ ಪಾಠಶಾಲೆಯ ಶಾಲಾ ವಾರ್ಷಿಕೋತ್ಸವದಂಗವಾಗಿ ಸೋಮವಾರ ಸಂಜೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ಮಕ್ಕಳು ಹೆಚ್ಚು ಅಂಕ ಪಡೆಯಬೇಕೆಂಬ ವಿಷಯ ಜೋತು ಬೀಳದೇ ಅವರಿಗೆ ಸಂಸ್ಕಾರಯುತ ಶಿಕ್ಷಣ ಸಿಗುವಂತೆ ಮಾಡಬೇಕು. ಹೃದಯದಲ್ಲಿ ಕತ್ತಲೆ ಇರಬಾರದು. ಜ್ಞಾನ-ಸಂಸ್ಕಾರ ಎಂಬ ಬೆಳಕು ಇದ್ದರೆ ಎಲ್ಲೆಡೆ ಬೆಳಗಬಲ್ಲದು. ಜನಪದ ತಾಯಂದಿರು ನೀಡಿರುವ ಮೌಲ್ಯಗಳನ್ನು ಅರಿತು ಅವುಗಳನ್ನು ಮಕ್ಕಳಿಗೆ ನೀಡಿದರೆ ಸಂಸ್ಕಾರಯುತ ಮಕ್ಕಳು ಹೊರಬರಲು ಸಾಧ್ಯ. ನಂದಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಸವರಾಜ ಪೂಜಾರಿ ಅವರು ತಮ್ಮ ನಂಬಿದ ಪೋಷಕರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ನಿರತರಾಗಿದ್ದಾರೆ. ಇವರ ಶೈಕ್ಷಣಿಕ ಕಾಳಜಿ ಶ್ಲಾಘನೀಯ. ಈ ಸಂಸ್ಥೆಯಲ್ಲಿ ಶಿಕ್ಷಣ ಪಡೆದ ಮಕ್ಕಳು ನಾಡಿನಲ್ಲಿ ಬೆಳಗುವಂತಾಗಲಿ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಬಿಇಓ ವಸಂತ ರಾಠೋಡ ಮಾತನಾಡಿದರು.
ಸಾನಿಧ್ಯ ವಹಿಸಿದ್ದ ಮನಗೂಳಿ ಹಿರೇಮಠ ಅಭಿನವ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ, ನಿಡಗುಂದಿಯ ಯಲಗೂರೇಶ ಏಜ್ಯುಕೇಶನ ಟ್ರಸ್ಟ್ ಅಧ್ಯಕ್ಷ ಪ್ರಾಣೇಶ ಜೋಶಿ ಮಾತನಾಡಿದರು.
ಅಧ್ಯಕ್ಷತೆಯನ್ನು ಸಂಸ್ಥೆಯ ಕಾರ್ಯದರ್ಶಿ ಡಾ.ಶಿವಾನಂದ ಪಾಟೀಲ ವಹಿಸಿದ್ದರು.ವೇದಿಕೆಯಲ್ಲಿ ನಂದಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ, ಅನುದಾನಹರಿತ ಶಾಲಾ ಆಡಳಿತ ಮಂಡಳಿಗಳ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಪೂಜಾರಿ, ನಿವರಗಿಯ ಶ್ರದ್ಧಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಲ್ಲಿಕಾರ್ಜನ ತುಪ್ಪದ, ನಿಡಗುಂದಿಯ ಬಿಎಂಎಸ್ ಪಿಯು ಸೈನ್ಸ್ ಕಾಲೇಜಿನ ಪ್ರಾಚಾರ್ಯ ಸೋಮಶೇಖರ ನಾಗರಬೆಟ್ಟ, ಲೋಣಿ ಬಿಕೆಯ ಮಹಾಲಕ್ಷ್ಮೀ ಮಹಿಳಾ ಸಂಘದ ಅಧ್ಯಕ್ಷ ಸಂದೀಪ ಶಿರಶ್ಯಾಡ, ವ್ಯಾಪಾರಸ್ಥ ಬಾಬು ಕೆಂಭಾವಿ, ಸಮೂಹ ಸಂಪನ್ಮೂಲ ವ್ಯಕ್ತಿ ಬಸವರಾಜ ಚನಗೊಂಡ, ಪಾಲಕರ ಪ್ರತಿನಿಧಿ ಸಿದ್ರಾಮ ನಂದ್ಯಾಳ ಇದ್ದರು. ಕಿರಣ ಪೂಜಾರಿ ಪ್ರಾರ್ಥಿಸಿದರು. ಶಾಲೆಯ ಮುಖ್ಯಗುರುಮಾತೆ ವೀಣಾ ಪೂಜಾರಿ ಅವರು ವರದಿ ವಾಚಿಸಿದರು. ಶಿವಾನಿ ಚವ್ಹಾಣ ಸ್ವಾಗತಿಸಿದರು. ಪುಷ್ಪಾ ಕಲ್ಯಾಣಿ ನಿರೂಪಿಸಿದರು. ಚನ್ನಬಸಪ್ಪ ಪೂಜಾರಿ ವಂದಿಸಿದರು. ಇದೇ ಸಂದರ್ಭದಲ್ಲಿ ಯುಕೆಜಿಯಿಂದ ಹತ್ತನೇ ತರಗತಿಯಲ್ಲಿ ಉತ್ತಮ ಸಾಧನೆಗೈದ ಮಕ್ಕಳಿಗೆ ಸ್ಟಾರ್ ಆಫ್ ದಿ ಸ್ಟುಡೆಂಟ್ ಅವಾರ್ಡ್ ನೀಡಲಾಯಿತು.
Subscribe to Updates
Get the latest creative news from FooBar about art, design and business.
Related Posts
Add A Comment

