ವಿಜಯಪುರ: ಗ್ರಂಥಗಳು ಮಾನವೀಯ ಮೌಲ್ಯವನ್ನು ಕಾಪಾಡುವ ಸಾಹಿತ್ಯವಾಗಿದೆ. ಸಂಸ್ಕೃತಿಕ ಪ್ರತೀಕವೇ ಗ್ರಂಥಗಳು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಹೇಳಿದರು.
ಮಂಗಳವಾರ ಮನಗೂಳಿ ಗ್ರಾಮದ ಸುರೇಶ ಗೆಜ್ಜೆ ತೋಟದಲ್ಲಿ ಹಮ್ಮಿಕೊಂಡ ’ಸ್ವಾತಂತ್ರ್ಯ ಸಿರಿ’ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಪರಿಷತ್ ಗ್ರಾಮಮಟ್ಟದಲ್ಲಿ ಸಾಹಿತ್ಯ ಚಟುವಟಿಕೆಗಳನ್ನು ಮಾಡುವುದರ ಮೂಲಕ ಸಾಹಿತ್ಯವನ್ನು ಮನೆ ಮನೆಗೆ ತಲುಪಿಸುವ ಕಾರ್ಯ ಮಾಡಿದ ತೃಪ್ತಿ ನಮಗಿದೆ ಎಂದರು.
’ಸ್ವಾತಂತ್ರ್ಯ ಸಿರಿ’ ಕೃತಿ ಪರಿಚಯ ಮಾಡಿದ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಜಂಬುನಾಥ ಕಂಚಾಣಿ ಮಾತನಾಡಿ, ಲೇಖಕಿ ಕಮಲ ಗೆಜ್ಜೆ (ಮುರಾಳ ) ವಿಜ್ಞಾನ ಶಿಕ್ಷಕಿಯಾದರೂ ಕನ್ನಡ ಸಾಹಿತ್ಯದಲ್ಲಿ ಬಹಳಷ್ಟು ಗ್ರಂಥಗಳನ್ನು ರಚಿಸುವ ಮೂಲಕ ಕನ್ನಡ ಸಾಹಿತ್ಯ ಸಾರಸ್ವತ ಲೋಕಕ್ಕೆ ಅಮೂಲ್ಯವಾದ ’ಸ್ವಾತಂತ್ರ್ಯ ಸಿರಿ’ ಉಪಯುಕ್ತ ಗ್ರಂಥವಾಗಿದೆ ಎಂದರು.
ಸ್ವಾತಂತ್ರ್ಯ ಹೋರಾಟಗಾರರಾದ ದಿ. ಚಂದಪ್ಪ ಗೆಜ್ಜೆ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಅರ್ಪಿಸಿ ಮಾತನಾಡಿದ ಕಮಲ ಮುರಾಳ ಮತ್ತು ಸುರೇಶ್ ಗೆಜ್ಜೆ ದಂಪತಿ ಶಿಕ್ಷಣ ಸಾಹಿತ್ಯ ಕೃಷಿ ವೈದ್ಯಕೀಯ ಕ್ಷೇತ್ರದಲ್ಲಿ ಕುಟುಂಬವು ತೊಡಗಿಸಿಕೊಂಡು ಗಣನೀಯ ಸೇವೆ ಮಾಡುತ್ತಿರುವುದು ಸಂತೋಷದ ವಿಷಯ ಎಂದರು.
ಯರನಾಳ ವಿರಕ್ತ ಮಠದ ಸಂಗನಬಸವ ಸ್ವಾಮೀಜಿ ಮಾತನಾಡಿದರು.
ಕೃಷಿ ಅಧಿಕಾರಿ ಡಾ. ಡಿ. ಡಬ್ಲ್ಯೂ. ರಾಜಶೇಖರ ಹಾಗೂ ಪ್ರಕಾಶ
ಚೌಹಾಣ ದ್ರಾಕ್ಷಿ ಬೆಳೆಯ ಕುರಿತು ಮಾಹಿತಿ ನೀಡಿದರು.
ರೂಪಸಿಂಗ್ ಲೋಣಾರಿ ಸಂಗಣ್ಣ ಗೆಜ್ಜೆ ಸಂಗನಗೌಡ ಬಿರಾದಾರ್ ಶಂಕರಗೌಡ ಪಾಟೀಲ್ ಲೇಖಕಿ ಕಮಲ ಗೆಜ್ಜೆ ಪ್ರಸ್ತಾವಿಕವಾಗಿ ಮಾತನಾಡಿದರು.
ಜ್ಯೋತಿ ಗೆಜ್ಜೆ ಪ್ರಾರ್ಥಿಸಿದರು, ಈರಣ್ಣ ಚಿಮ್ಮಲಗಿ ಸ್ವಾಗತಿಸಿದರು. ಸಂತೋಷ್ ಬಿರಾದಾರ ನಿರೋಪಿಸಿದರು.
ಕಾಶಿನಾಥ್ ಮುರಾಳ, ಗಣೇಶ್ ಕಾಂಬ್ಳೆ, ಚಂದ್ರಶೇಖರ ಸಂಗಮ, ರತ್ನಬಾಯಿ ಬೊಮ್ಮನಹಳ್ಳಿ, ಉದಯ ಯಾಳವಾರ, ಅಣ್ಣಾ ಗೌಡ ಪಾಟೀಲ್, ರಾಜಶೇಖರ್ ಗೆಜ್ಜೆ, ಲತಾ ಗುಂಡಿ, ಮುಂತಾದವರು ಉಪಸ್ಥಿತರಿದ್ದರು.

