ಕೊಲ್ಹಾರ: ಪಟ್ಟಣದ ಆರಾಧ್ಯ ಶಕ್ತಿ ದೇವತೆ ತೆರಪಿ ಯಲ್ಲಮ್ಮದೇವಿ ಜಾತ್ರಾ ಮಹೋತ್ಸವವು ಭಾರತ ಹುಣ್ಣಿಮೆಯ ದಿನವಾದ ಫೆ.೨೩ ಶುಕ್ರವಾರದಿಂದ ೨೭ ಮಂಗಳವಾರದವರೆಗೆ ಐದು ದಿನಗಳ ಕಾಲ ಬಹಳ ವಿಜೃಂಭಣೆಯಿಂದ ಜರಗುವುದು ಎಂದು ಯಲ್ಲಮ್ಮದೇವಿ ಜಾತ್ರಾ ಉತ್ಸವ ಸಮಿತಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
೨೩ ಶುಕ್ರವಾರ ಸಂಜೆ ೪ ಗಂಟೆಗೆ ಎತ್ತಿನ ಬಂಡಿಯಲ್ಲಿ ರೈತರು ತರುವ ಹಂದರ ತಪ್ಪಲದ ಮೆರವಣಿಗೆ, ಅನ್ನ ಸಂತರ್ಪಣೆ, ರಾತ್ರಿ ೧೦ಗಂಟೆಗೆ ಶ್ರೀ ರೇಣುಕಾಯಲ್ಲಮ್ಮ ಬಯಲಾಟ ಇರುವದು. ೨೪ ಶನಿವಾರ ಮುಂಜಾನೆ ೧೦ ಗಂಟೆಗೆ ಕುಂಭ ಮೇಳದೊಂದಿಗೆ ಪಲ್ಲಕ್ಕಿ ಉತ್ಸವ ಮತ್ತು ಕಳಸದ ಮೆರವಣಿಗೆ ಹಾಗೂ ಜೋಗುತಿ ನೃತ್ಯ ಬಂಡಾರಜಾತ್ರೆ ಜರಗುವದು. ರಾತ್ರಿ ೧೦:೩೦ಕ್ಕೆ ಯಲ್ಲಮ್ಮದೇವಿ ನಾಟ್ಯ ಸಂಘ ಕೊಲ್ಹಾರ ಇವರ ವತಿಯಿಂದ ‘ತಂಗಿ ತಂದ ಸೌಭಾಗ್ಯ’ ಎಂಬ ಸಾಮಾಜಿಕ ನಾಟಕ ಇರುವದು.
೨೫ ರವಿವಾರ ಮುಂಜಾನೆ ೧೧ ಗಂಟೆಗೆ ರಂಗೋಲಿ ಸ್ಪರ್ಧೆ, ಉಡಿತುಂಬುವ ಕಾರ್ಯಕ್ರಮ, ಮಧ್ಯಾಹ್ನ ೩ ಗಂಟೆಗೆ ಬೀರಲಿಂಗೇಶ್ವರ ದೇವಸ್ಥಾನದಿಂದ ಹಾಲು ತುಪ್ಪದ ಮೆರವಣಿಗೆ, ಸಂಜೆ ೪ ಗಂಟೆಗೆ ಹಾಲೋಕಳಿ ಸ್ಪರ್ದೆ ಜರಗುವದು. ರಾತ್ರಿ ೧೦ಗಂಟೆಗೆ ಯಲ್ಲಮ್ಮದೇವಿ ನಾಟ್ಯ ಸಂಘ ಕೊಲ್ಹಾರ ಇವರ ವತಿಯಿಂದ ‘ಕಲಿಯುಗದಲ್ಲಿ ಕರ್ಣಾರ್ಜುನರು’ ಎಂಬ ಸುಂದರ ಸಾಮಾಜಿಕ ನಾಟಕ ಜರಗುವದು.
೨೬ ಸೋಮವಾರ ಬೆಳಿಗ್ಗೆ ೧೦ಕ್ಕೆ ಸೈಕಲ್ ಸ್ಪರ್ಧೆ, ರಾತ್ರಿ ೭ಕ್ಕೆ ಚಿತ್ರವಿಚಿತ್ರ ಮದ್ದು ಸುಡುವ ಕಾರ್ಯಕ್ರಮ, ರಾತ್ರಿ ೮ ಗಂಟೆಗೆ ಟಗರಿನ ಕಾಳಗ ನಡೆಯುವದು. ೨೭ ಮಂಗಳವಾರ ಬೆಳಿಗ್ಗೆ ೧೦ ಗಂಟೆಗೆ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ಸಂಜೆ ಕಳಸ ಇಳಿಸುವುದರೊಂದಿಗೆ ಜಾತ್ರೆ ಮಂಗಲಗೊಳ್ಳುವುದು , ಜಾತ್ರಾ ಅಂಗವಾಗಿ ರಂಗೋಲಿ, ಪುರುಷರ ಹಾಗೂ ಮಹಿಳೆಯರ ಸೈಕಲ್ ಸ್ಪರ್ದೆ ಮತ್ತು ಹಾಲಲ್ಲಿ, ಎರಡಹಲ್ಲಿ, ನಾಲ್ಕಹಲ್ಲಿ ಹಾಗೂ ಓಪನ್ ಟಗರಿನ ಕಾಳಗ ಏರ್ಪಡಿಸಲಾಗಿದೆ ಎಂದು ಕೊಲ್ಹಾರ ಯಲ್ಲಮ್ಮದೇವಿ ಜಾತ್ರಾ ಉತ್ಸವ ಸಮಿತಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

