ಸಿಂದಗಿ: ಪ್ರತಿಯೊಂದು ಇಲಾಖೆಯ ಕಛೇರಿಗಳಲ್ಲಿ ವಿಕಲಚೇತನರ ಪ್ರತ್ಯೇಕ ಕೌಂಟರ್ ನಿರ್ಮಾಣವಾಗಬೇಕು. ತಾಲೂಕಿನಲ್ಲಿ ಅನೇಕರ ಪಿಂಚಣಿ ರದ್ದಾಗಿದ್ದು, ಅದು ಬೇಗ ಮರುಚಾಲನೆಯಾಗಬೇಕು. ಮತ್ತು ವಿಕಲಚೇತನರ ಕುಂದು-ಕೊರತೆ ಸಭೆ ತಿಂಗಳಿಗೊಮ್ಮೆಯಾದರು ಸಭೆ ಕರೆಯಬೇಕು ಎಂದು ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಅಧ್ಯಕ್ಷ ವಿಠ್ಠಲ ಕರ್ಜಗಿ ತಹಶೀಲ್ದಾರ್ ಅವರಿಗೆ ಆಗ್ರಹಿಸಿದರು.
ಪಟ್ಟಣಡ ಆಡಳಿತ ಸೌಧದಲ್ಲಿ ವಿಕಲಚೇತನರ ೨೦೧೬ರ ಅಧಿನಿಯಮದನ್ವಯ ಸರಕಾರದ ವಿವಿಧ ಇಲಾಖೆಗಳಲ್ಲಿ ಮುಕ್ತವಾದ ವಾತಾವರಣ ನಿರ್ಮಾಣ ನಿರ್ಮಿಸುವಂತೆ ಮನವಿ ಸಲ್ಲಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಮುತ್ತುರಾಜ ಸಾತಿಹಾಳ, ಬಿ.ಎನ್.ಕಲ್ಲೂರ ಯಲ್ಲಪ್ಪ ಪೂಜಾರಿ, ಸುಧೀರ ಬಜಂತ್ರಿ, ಸುರೇಶ ಜವಳಗಿ, ವಿಜಯಕುಮಾರ ಬಜಂತ್ರಿ, ಮಲ್ಲು ಕರನಾಳ,sಶಿವಾನಂದ ಆನಗೊಂಡ, ಪುಂಡಲೀಕ ಪೂಜಾರಿ, ಶಬ್ಬೀರ ಅತ್ನನೂರ ಸೇರಿದಂತೆ ಎಂ.ಆರ್.ಡಬ್ಲೂö್ಯ, ವಿ.ಆರ್.ಡಬ್ಲೂö್ಯ ಮತ್ತು ಯು.ಆರ್.ಡಬ್ಲೂö್ಯ ಹಾಗೂ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು
Subscribe to Updates
Get the latest creative news from FooBar about art, design and business.
Related Posts
Add A Comment

