ವಿಜಯಪುರ: ಇದೊಂದು ನಿರಾಶದಾಯಕ, ಸುಳ್ಳಿನ ಕಂತೆ ಬಜೆಟ್ ಆಗಿದೆ. ಇದರಿಂದ ರಾಜ್ಯದ ಒಂದು ವರ್ಷದ ಭವಿಷ್ಯ ಇಲ್ಲ. ಯಾವುದೇ ಅಭಿವೃದ್ಧಿ ನಿರೀಕ್ಷೆ ಇಲ್ಲ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಸರ್ಕಾರದ ಬಳಿ ಹಣವೇ ಇಲ್ಲ. ನಮ್ಮ ಸರ್ಕಾರದ ಅವಧಿಯಲ್ಲಿ ಘೋಷಿಸಿದನ್ನೆ ಮರಳಿ ಬಹುತೇಕ ಯೋಜನೆಗಳನ್ನು ಘೋಷಣೆ ಮಾಡಿದ್ದು, ಯಾವುದೇ ರೀತಿಯ ಹೊಸ ಯೋಜನೆಗಳು ಈ ಬಜೆಟ್ ದಲ್ಲಿ ಇಲ್ಲ. ಕೃಷ್ಣಾ ನೀರಾವರಿಗೆ ಒಂದೂ ಪೈಸೆ ಹಣ ಇಟ್ಟಿಲ್ಲ. ವಿಜಯಪುರ ಜಿಲ್ಲೆಗೆ ಬೊಮ್ಮಾಯಿಯವರು ಘೋಷಣೆ ಮಾಡಿದ್ದ ಟೆಕ್ಸಟೈಲ್ ಪಾರ್ಕ್, ವೈನ್ ಬೋರ್ಡ್ ಗೂ ಯಾವುದೇ ಅನುದಾನ ಕೊಟ್ಟಿಲ್ಲ.
ಉತ್ತರ, ದಕ್ಷಿಣ, ಕಲ್ಯಾಣ ಯಾವ ಭಾಗಕ್ಕೂ ಏನನ್ನೂ ನೀಡದೆ, ಬರೀ ಅಲ್ಪಸಂಖ್ಯಾತರ ಯೋಜನೆಗಳಿಗೆ ಹೆಚ್ಚು ಒತ್ತು ಕೊಟ್ಟಿರುವ ಸಿದ್ದರಾಮಯ್ಯನವರು, ಒಂದೇ ವರ್ಗ ಹಿಡಿದುಕೊಂಡು ಹೊರಟಿದ್ದಾರೆ ಎನ್ನುವುದು ತೋರಿಸಿದೆ. ಹಿಂದುಳಿದ, ದಲಿತ, ಬಡ ಸಮುದಾಯಗಳಿಗೆ ಅನ್ಯಾಯ ಮಾಡಿದ್ದಾರೆ. ಈ ವರ್ಗದ ಜನ ತಕ್ಕ ಪಾಠ ಕಲಿಸುತ್ತಾರೆ.
ಸುಮಾರು 29 ಸಾವಿರ ಕೋಟಿ ಕೊರತೆ ಬಜೆಟ್ ಇದಾಗಿದ್ದು, 6 ತಿಂಗಳ ಬಜೆಟ್ ಗೆ ಈ ಹಣೆಬರವಾದರೆ, ಮುಂದಿನ ವರ್ಷ ಒಂದು ಲಕ್ಷ ಕೋಟಿ ಕೊರತೆ ಬಜೆಟ್ ಆಗಬಹುದು. ಕರ್ನಾಟಕ ದಿವಾಳಿ ಆಗುತ್ತಿದೆ ಎನ್ನುವುದು, ಅವರೇ ಹೇಳಿಕೊಂಡಂತಿದೆ ಎಂದಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

