ಮುದ್ದೇಬಿಹಾಳ: ದುಡ್ಡಿಗೆ ಮಹತ್ವ ಕೊಡುವ ಬದಲು ಮಕ್ಕಳಿಗೆ ಯೋಗ್ಯವಾದ ಶಿಕ್ಷಣ, ಸಂಸ್ಕೃತಿ ನೀಡಿ ಬೆಳೆಸಿದಲ್ಲಿ ಅದುವೇ ನಮಗೆ ಸಂಪತ್ತು ಎಂದು ಬಲ್ಕೆರೂರಿನ ಬಿಲ್ವಾಶ್ರಮ ಹಿರೇಮಠದ ಪ.ಪೂಜ್ಯ ಸಿದ್ಧಲಿಂಗ ಶಿವಾಚಾರ್ಯ ನುಡಿದರು.
ಪಟ್ಟಣದ ಮಾರುತಿ ನಗರದಲ್ಲಿರುವ ವಿದ್ಯಾಜ್ಯೋತಿ ಪಬ್ಲಿಕ್ ಶಾಲೆಯ ಎರಡನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ದಿವ್ಯ ಸಾನಿಧ್ಯವಹಿಸಿ ಅವರು ಮಾತನಾಡಿದರು.
ದುಡ್ಡಿಗೆ ಪ್ರಾಮುಖ್ಯತೆ ನೀಡಿದವರ ಅದೆಷ್ಟೋ ಜನರ ಮಕ್ಕಳು ಇಂದು ದುಷ್ಚಟಗಳಿಗೆ ದಾಸರಾಗಿ ಹಾಳಾಗಿರುವದನ್ನು ನಾವು ಕಂಡಿದ್ದೇವೆ. ನಮ್ಮ ದೇಶದ ಸಂಸ್ಕೃತಿಯನ್ನು ಕಲಿಸುವ ಮೂಲಕ ಯೋಗ್ಯವಾದ ವಿದ್ಯೆಯನ್ನು ನೀಡಿದಲ್ಲಿ ಆ ಮಗು ಜಗತ್ತನ್ನೇ ಬೆಳಗುವ ಆದರ್ಶ ವ್ಯಕ್ತಿಯಾಗುತ್ತಾನೆ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ಸಾವಳಗಿ ಮಾತನಾಡಿದರು.
ಕಾಂಗ್ರೇಸ್ ಮುಖಂಡ ಶಾಂತಗೌಡ ಪಾಟೀಲ ನಡಹಳ್ಳಿ, ಚಿಂತಕ ಅರವಿಂದ ಕೊಪ್ಪ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಎಂ.ಎಚ್.ಹಾಲ್ಯಾಳ ಮಾತನಾಡಿದರು. ಈ ವೇಳೆ ಯಾದಗಿರಿಯ ಮುರಾರ್ಜಿ ದೇಸಾಯಿ ಶಾಲೆಗೆ ಆಯ್ಕೆಯಾದ ಆಕಾಶ ಚಲವಾದಿ, ಬಿದರಕುಂದಿಯ ಆರ್ಎಂಎಸ್ಎ ಗೆ ಆಯ್ಕೆಯಾದ ಸಮೀಕ್ಷಾ ಕುಲಕರ್ಣಿ ಮತ್ತು ಯಾದಗಿರಿಯ ನವೋದಯ ಶಾಲೆಗೆ ಆಯ್ಕೆಯಾದ ಕಿರಣಕುಮಾರ ಗರಸಂಗಿ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಪಟ್ಟಣದ ಮಾರುತಿ ನಗರದ ದೇವಿ ಉಪಾಸಕರಾದ ಲಾಲಲಿಂಗೇಶ್ವರ ಶರಣರು ಸಾನಿಧ್ಯವಹಿಸಿದ್ದರು. ಹೆಸ್ಕಾಂ ನ ಎಇಇ ರಾಜಶೇಖರ ಹಾದಿಮನಿ, ಎಪಿಎಂಸಿ ನಿರ್ದೇಶಕ ವಾಯ್.ಎಚ್.ವಿಜಯಕರ, ಸಂಸ್ಥೆಯ ಕಾರ್ಯಾಧ್ಯಕ್ಷ ವಿರೇಶ ಗುರುಮಠ, ನಿವೃತ್ತ ದೈಹಿಕ ಶಿಕ್ಷಕ ಎಸ್.ಬಿ.ಚಲವಾದಿ ಸೇರಿದಂತೆ ಮತ್ತೀತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

