ಸಿಂದಗಿ: ಜ.೧೮ ರಿಂದ ಇಲ್ಲಿಯವರೆಗೆ ಆಯ್ದ ಪ್ರಾ.ಆ.ಕೇಂದ್ರಗಳಾದ ಚಾಂದಕವಟೆ,ಬಳಗಾನೂರ, ಆಲಮೇಲ, ಮಲಘಾಣ, ಮೋರಟಗಿ ಹಾಗೂ ಸಿಂದಗಿ ನಗರದ ವ್ಯಾಪ್ತಿಯ ಅಂಗನವಾಡಿ ಹಾಗೂ ಶಾಲೆಗಳಲ್ಲಿ ಮಕ್ಕಳಿಗೆ ಮಾತ್ರೆ ನುಂಗಿಸಲಾಗಿದೆ ಎಂದು ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಕುಲಕರ್ಣಿ ಹೇಳಿದರು.
ಪಟ್ಟಣದ ಬಸ್ ಡಿಪೋ ಆವರಣದಲ್ಲಿ ಹಮ್ಮಿಕೊಂಡ ಆನೆಕಾಲು ರೋಗ ಮುಕ್ತ ಸಮಾಜ ಕಾರ್ಯಕ್ರಮದಲ್ಲಿ ಮಾತನಾಡಿ ಅವರು, ಫೆ.೧೦ ರಿಂದ ೨೮ರವರೆಗೆ ಮನೆ ಮನೆ ಭೇಟಿ ಮಾಡಿ ಮನೆಯಲ್ಲಿರುವ ಅರ್ಹ ಕುಟುಂಬದ ಸದಸ್ಯರಿಗೆ ಮಾತ್ರೆ ನುಂಗಿಸಲಾಗುತ್ತಿದ್ದು, ದಯವಿಟ್ಟು ಮಾತ್ರೆ ಸೇವಿಸಿ ಆನೆಕಾಲು ರೋಗ ನಿಯಂತ್ರಿಸುವಲ್ಲಿ ಸಮುದಾಯ ಸಹಕರಿಸಬೇಕು ಎಂದು ಮನವಿ ಮಾಡಿಕೊಂಡರು.
ಮಾತ್ರೆಗಳನ್ನು ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಿಬ್ಬಂದಿ ಮನೆಗೆ ಭೇಟಿ ನೀಡಿ ನುಂಗಿಸುವರು. ಗರ್ಭಿಣಿ ಮಹಿಳೆಯರು, ದೀರ್ಘಕಾಲದ ರೋಗದಿಂದ ಬಳುಲುತ್ತಿರುವುರು ಸೇವಿಸಬಾರದು. ಮತ್ತು ಖಾಲಿ ಹೊಟ್ಟೆಯಲ್ಲಿ ಮಾತ್ರೆ ಸೇವನೆ ಮಾಡಬಾರದು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಮಲೇರಿಯಾ ಮೇಲ್ವಿಚಾರಕ ಪ್ರಭು ಜಂಗಿನಮಠ, ಆರೋಗ್ಯ ನಿರೀಕ್ಷಣಾಧಿಕಾರಿ ವಿರೇಂದ್ರ ಪವಾಡೆ, ಮಹಾಲಿಂಗ ಪಕೀರಪೂರ ಸೇರಿದಂತೆ ಸಾರಿಗೆ ವ್ಯವಸ್ಥಾಪಕರು, ಕಾರ್ಮಿಕರು, ಚಾಲಕರು, ನಿರ್ವಾಹಕರು ಹಾಗೂ ಸಿಬ್ಬಂದಿಗಳು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

