ಸಂವಿಧಾನ ಜಾಗೃತಿ ಜಾಥಾ ರಥಯಾತ್ರೆಯಲ್ಲಿ ಕೃಷಿ ಇಲಾಖೆ ಸ.ನಿದೇ೯ಶಕ ಸಿಂಗೆಗೋಳ ಅಭಿಮತ
ಬ್ರಹ್ಮದೇವನಮಡು: ಸಮ ಸಮಾಜದ ಬುನಾದಿ ಆಗಿರುವ ಸಂವಿಧಾನದ ಬಗ್ಗೆ ಜಾಗೃತಿ ಮೂಡಬೇಕಿದೆ ಎಂದು ಸಿಂದಗಿ ಕೃಷಿ ಇಲಾಖೆ ಸಹಾಯಕ ನಿದೇ೯ಶಕ ಹೆಚ್.ವೈ.ಸಿಂಗೆಗೋಳ ಹೇಳಿದರು. ಸಿಂದಗಿ ತಾಲೂಕು ಬ್ರಹ್ಮದೇವನಮಡು ಹಾಗೂ ಹೊನ್ನಳ್ಳಿ ಗ್ರಾಮಕ್ಕೆ ಸೋಮವಾರ ಆಗಮಿಸಿದ ಸಂವಿಧಾನ ಜಾಗೃತಿ ಜಾಥಾ ರಥಕ್ಕೆ ಕುಂಭಮೇಳದೊಂದಿಗೆ ಸ್ವಾಗತಿಸಿ, ಪುಷ್ಪಾಚ೯ನೆ ಮಾಡಿ ಅವರು ಮಾತನಾಡಿದರು.
ದೇಶದ ಸವ೯ಧಮ೯, ಜಾತಿ ಜನರ ಹಿತ ಕಾಪಾಡುವ ಅಂಬೇಡ್ಕರ್ ಅವರ ಸಂವಿಧಾನವನ್ನು ಪ್ರತಿಯೊಬ್ಬರೂ ಗೌರವಿಸಬೇಕಿದೆ. ಕಾನೂನುಗಳ ಪಾಲನೆ ಬದ್ದತೆ ಬೆಳಸಿಕೊಳ್ಳಬೇಕಿದೆ ಎಂದ ಅವರು, ಶಾಲೆಯ ಮಕ್ಕಳಿಗೆ ಸಂವಿಧಾನದ ಪೀಠಿಕೆ ಪ್ರತಿಜ್ಞಾವಿಧಿ ಬೋಧಿಸಿದರು.
ಸಂವಿಧಾನದ ಜಾಗೃತಿ ರಥಕ್ಕೆ ಬ್ರಹ್ಮದೇವನಮಡು ಗ್ರಾಮದಲ್ಲಿ ಅದ್ದೂರಿಯಾಗಿ ಸಂಭ್ರಮದಿಂದ ಸ್ವಾಗತಿಸಲಾಯಿತು. ಸಕಾ೯ರಿ ಶಾಲೆ ಹಾಗೂ ರಾಜೀವಗಾಂಧಿ ಸ್ಮಾರಕ ಪ್ರೌಢ ಶಾಲೆ ಮಕ್ಕಳಿಂದ ಪೂಣ೯ಕುಂಭ ಸ್ವಾಗತ, ಡೊಳ್ಳು ಕುಣಿತ, ಡಿಜೆ ಸೌಂಡಿಗೆ ಯುವಕರು ಕುಣಿದು ಕುಪ್ಪಳಿಸಿ ಮೆರವಣಿಗೆ ನಡೆಸಿದರು.
ಗ್ರಾಪಂ ಅಧ್ಶಕ್ಷ ಸಂಗನಗೌಡ ಪಾಟೀಲ, ದಲಿತ ಮುಖಂಡರಾದ ವೈ.ಸಿ.ಮಯೂರ, ಶ್ರೀಶೈಲ್ ಜಾಲವಾದಿ, ವಿಜುಗೌಡ ಬಿರಾದಾರ, ಕಲಕೇರಿ ಠಾಣಾಧಿಕಾರಿ ರೋಹಿಣಿ ಪಾಟೀಲ, ಸಂತೋಷ ಮಣಗಿರಿ, ಮಲ್ಲು ಗುಡಿಮನಿ, ಚಂದ್ರಶೇಖರ ಕೆಂಭಾವಿ, ರುಕ್ಮದ್ದಿನ್ ಹಳಿಮನಿ, ರವಿ ಯಡ್ರಾಮಿ, ರವಿ ಹೊಳಿ, ಯಮನೂರ ಬೇಕಿನಾಳ, ಬಸನಗೌಡ ಉಳ್ಳೆಸೂರ, ಸಾಹೇಪಟೇಲ ಮುರಡಿ, ತಿಪ್ಪಯ್ಶ ನೆಲ್ಲಗಿಮಠ, ಪಿಡಿಒ ಎಸ್.ಸಿ.ನಾಯ್ಕೋಡಿ, ಕಾಯ೯ದಶಿ೯ ಸಿ.ಡಿ.ಕೋರಬು, ಸಿಡಿಪಿಒ ಇಲಾಖೆ ಅಂಗನವಾಡಿ ಮೆಲ್ವಿಚಾರಕಿ ಸಜ್ಜನ ಮೆಡ್ಂ, ಗ್ರಾಮ ಲೆಕ್ಕಾಧಿಕಾರಿ ಹಸನ್ ಕೋರಬು, ಹಣಮಂತ ಯಂಟಮಾನ, ರಾಜು ಖಾನಾಪೂರ, ಹಣಮಂತ್ರಾಯಗೌಡ ಬಿರಾದಾರ, ಕೆ.ಬಿ.ಮನಗೂಳಿ, ಬಂದೇನಮಾಜ್ ಸೀತನೂರ, ಡಿ.ಕೆ.ಸೀತನೂರ, ಪತ್ರಕತ೯ ಮಲ್ಲು ಕೆಂಭಾವಿ, ಮಲ್ಕಣ್ಣ ಗಡಿಗೆನ್ನವರ, ಭಾಗಪ್ಪ ದೇವರಮನಿ, ಸಂಗನಗೌಡ ಪಾಟೀಲ, ಯಮುನು ಗುಡಿಮನಿ, ದೊಡ್ಡಮನಿ ಸೇರಿದಂತೆ ಗಣ್ಶರು, ಗ್ರಾಮದ ಪ್ರಮುಖರು,ದಲಿತ ಸಂಘಟನೆಯ ಪದಾಧಿಕಾರಿಗಳು ಇದ್ದರು.
ಕಲಕೇರಿ ಠಾಣಾಧಿಕಾರಿ ರೋಹಿಣಿ ಪಾಟೀಲ ಹಾಗೂ ಸಿಬ್ಬಂದಿ ಸೂಕ್ತ ಬಂದೊಬಸ್ತ್ ಒದಗಿಸಿದ್ದರು.
ಸಂವಿಧಾನದ ಜಾಗೃತಿ ಜಾಥಾ ಕಾಯ೯ಕ್ರಮಕ್ಕೆ ಹೊನ್ನಳ್ಳಿ ಗ್ರಾಪಂನ ಕೆಲವು ಸದಸ್ಶರು ಪಾಲ್ಗೊಳ್ಳದ್ದಿರುವುದಕ್ಕೆ ಡಿಎಸ್ಸೆಎಸ್ ಮುಖಂಡರು ಖಂಡಿಸಿದ್ದಾರೆ.