ಮುದ್ದೇಬಿಹಾಳ: ವಿದ್ಯುತ್ ತಗುಲಿ ರೈತನೋರ್ವ ಸಾವನ್ನಪ್ಪಿದ ಘಟನೆ ತಾಲೂಕಿನ ತಂಗಡಗಿ ಗ್ರಾಮದಲ್ಲಿ ಶನಿವಾರ ಸಂಭವಿಸಿದೆ.
ಮೃತ ದುರ್ದೈವಿ ಚಂದಪ್ಪ ವಾಲಿಕಾರ(೪೭) ಕುಂಚಗನೂರಿನ ಹುಲ್ಲಪ್ಪ ಮಲಗೌಡರ ಇವರ ಮುಳುಗಡೆಯಾದ ಹೊಲದಲ್ಲಿ ನೀರಿನ ಮೋಟಾರ ಚಾಲೂ ಮಾಡಲು ಹೋದಾಗ ಆಕಸ್ಮಿಕವಾಗಿ ಕರೆಂಟ್ ಕಂಬದಿಂದ ತೆಗೆದುಕೊಂಡು ಹೋದ ಕರೆಂಟ್ ಸರ್ವೀಸ್ ವೈರ್ ತುಳಿದಿದ್ದರಿಂದ ಈ ದುರ್ಘಟನೆ ಸಂಭವಿಸಿದ್ದು ಅದೇ ಸ್ಥಳದಲ್ಲಿ ಪ್ರಾಣ ಪಕ್ಷಿ ಹಾರಿದೆ. ಮೃತನ ಮರಣದಲ್ಲಿ ಯಾವುದೇ ಸಂಶಯವಿಲ್ಲ ಎಂದು ಪತ್ನಿ ವಿಜಯಲಕ್ಷ್ಮಿ ಸ್ಪಷ್ಠಪಡಿಸಿದ್ದಾರೆ.
ಘಟನಾ ಸ್ಥಳಕ್ಕೆ ಪಿಎಸ್ಐ ಸಂಜೀವ ತಿಪರೆಡ್ಡಿ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment