ವಿಜಯಪುರ: ನಾಗಠಾಣ ಮತಕ್ಷೇತ್ರದ ವಿಜಯಪುರ ನಗರದ ವಾರ್ಡ್ ನಂಬರ್ 10 ರ ವ್ಯಾಪ್ತಿಯ ಬೂತ್ ಸಂಖ್ಯೆ 247 ರಲ್ಲಿ ಗ್ರಾಮ ಚಲೋ ಅಭಿಯಾನಕ್ಕೆ ಸೋಮವಾರ ವಿದ್ಯುಕ್ತ ಚಾಲನೆ ದೊರಕಿತು.
ಅಭಿಯಾನ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ಅವಧಿಯಲ್ಲಿ ಕೈಗೊಂಡ ಅನೇಕ ಜನಪರ, ಅಭಿವೃದ್ಧಿ ಪರ ಯೋಜನೆ ವಿವರಿಸುವ ಕರಪತ್ರಗಳನ್ನು ವಿತರಿಸುವ ಮೂಲಕ ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ಚಾಲನೆ ನೀಡಿದರು.
ರಾಮ ಮಂದಿರ ಲೋಕಾರ್ಪಣೆ, ಕಾಶ್ಮೀರ ವಿಶೇಷ ಸ್ಥಾನಮಾನ ರದ್ದು, ಶಾಸನಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸುವ ಮಸೂದೆ ಮಂಡನೆ, ಕಿಸಾನ ಸಮ್ಮಾನ ಹೀಗೆ ಅನೇಕ ಯೋಜನೆಗಳ ವಿವರಗಳನ್ನು ಒಳಗೊಂಡಿರುವ ಕರಪತ್ರಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಉಮೇಶ ಕಾರಜೋಳ, ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದ ಕಾಲಘಟ್ಟದಲ್ಲಿ ನಮ್ಮ ಹೆಮ್ಮೆಯ ಭಾರತ ವಿಶ್ವಗುರು ಸ್ಥಾನವನ್ನು ಅಲಂಕರಿಸುವತ್ತ ಮುನ್ನಡೆದಿದೆ, ಅನೇಕ ಉತ್ತಮ ಯೋಜನೆಗಳ ಮೂಲಕ ದೇಶ ಮುನ್ನಡೆ ಸಾಧಿಸಿದೆ, ಪ್ರತಿಯೊಬ್ಬರೂ ಬ್ಯಾಂಕ್ ಖಾತೆ ಹೊಂದುವಂತಾಗಿದೆ, ಮುಖ್ಯವಾಗಿ ನೋಟ ಬ್ಯಾನ್ ಮೂಲಕ ಕಪ್ಪು ಹಣದ ವಿರುದ್ದ ಪ್ರಬಲ ಸಮರ, ಕಾಶ್ಮೀರ ವಿಶೇಷ ಸ್ಥಾನಮಾನ ರದ್ದತಿ, ರಾಮ ಮಂದಿರ ಲೋಕಾರ್ಪಣೆ, ರೈತರಿಗೆ ಅಭಯ ತುಂಬುವ ಕಿಸಾನ ಸಮ್ಮಾನ ಯೋಜನೆ, ಮಹಿಳೆಯರಿಗೆ ರಾಜಕೀಯ ಅದರಲ್ಲೂ ಶಾಸನ ಸಭೆಗಳಲ್ಲಿ ಮುಂಚೂಣಿ ಸ್ಥಾನವನ್ನು ಕಲ್ಪಿಸುವ ಮಸೂದೆ ಮಂಡನೆ ಹೀಗೆ ಮೋದಿಜಿ ಅವರ ಸಾಧನೆ ಪಟ್ಟಿ ದೊಡ್ಡದಿದೆ, ಮೋದಿಜಿ ಅವರ ಸಮರ್ಥ ಆಡಳಿತ, ನಾಯಕತ್ವಕ್ಕೆ ಜಗತ್ತೇ ಮೆಚ್ಚಿದೆ, ಹೀಗಾಗಿ ಈ ಬಾರಿಯೂ ಸಹ ಅಭಿವೃದ್ಧಿಗೆ ಪ್ರಧಾನಿ ಮೋದಿ ಅವರನ್ನು ಬೆಂಬಲಿಸಬೇಕು, ಕಾರ್ಯಕರ್ತರು ಮೋದಿಜಿ ಅವರ ಸಾಧನೆಯನ್ನು ತಿಳಿಸುವ ಕಾರ್ಯ ಮಾಡಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಾಬು ಮಾಶ್ಯಾಳ, ನಾಗಠಾಣ ಮಂಡಲ ಅಧ್ಯಕ್ಷ ನವೀನ ಅರಕೇರಿ, ಸಂಜೀವ ಐಹೊಳೆ, ಸಂಗಮೇಶ ಹೌದೆ , ಚಿದಾನಂದ ಚಲವಾದಿ, ಸಿದ್ದನಗೌಡ ಬಿರಾದಾರ, ಸಚೀನ ಕುಮಶಿ, ರವಿ ಬಿರಾದಾರ, ರವಿ ಮೂಕಾರ್ತಿಹಾಳ ಹಾಗೂ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment