ಆಲಮೇಲ: ೧೨ನೇ ಶತಮಾನದ ಬಸವಣ್ಣನವರ ನೇತೃತ್ವದ ಶರಣರ ಅನುಭಾವ ಮಂಟಪದ ಚಿಂತನೆಗಳು ಮತ್ತು ಅಂಬೇಡ್ಕರ ಅವರ ಸಂವಿಧಾನದ ಆಶಯಗಳು ಉದ್ದೇಶ ಒಂದೇಯಾಗಿದೆ ಎಂದು ಪ್ರೊ. ಎಸ್.ಜೆ.ಮಾಡ್ಯಾಳ ಹೇಳಿದರು.
ಆಲಮೇಲ ತಾಲೂಕ ಆಡಳಿತ ನೇತೃತ್ವದಲ್ಲಿ ಬುಧವಾರ ಸಂವಿಧಾನ ಜಾಗೃತಿ ಜಾಥಾದ ರಥಯಾತ್ರೆ ನಿಮಿತ್ಯ ಹಮ್ಮಿಕೊಂಡಿದ್ದ ಬಹಿರಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಉಪನ್ಯಾಸ ನೀಡಿದರು.
ಶರಣರ ಅನುಭವ ಮಂಟಪದ ಉದ್ದೇಶ ಮತ್ತು ಅಂಬೇಡ್ಕರ ಅವರ ನೇತೃತ್ವದಲ್ಲಿ ರಚಿಸಿರುವ ಸಂವಿಧಾನದ ಆಶೆಯು ಎರಡು ಸಮಾನತೆ ಉದ್ದೇಶ ಹೊಂದಿದೆ, ಬಸವಣ್ಣನವರ ತತ್ವಗಳು ಸಂವಿಧಾನದಲ್ಲಿ ಅಳವಡಿಸಲಾಗಿದೆ. ೧೨ನೇ ಶತಮಾನದ ಅನುಭವ ಮಂಟಪದ ಚಿಂತನೆಗಳು ಮತ್ತು ಸಂವಿಧಾನ ಎರಡು ಒಂದು ನಾಣ್ಯದ ಎರಡು ಮುಖಗಳು ಎಂದರು.
೧೨ನೇ ಶತಮಾನದಿಂದಲು ಜಾತಿ ತಾರತಮ್ಯ ತಾಂಡವಾಡುತ್ತಿದ್ದು ಅದನ್ನು ಮನಗಂಡ ಶರಣರು ಅಲ್ಲಮ ಪ್ರಭು ಅವರ ಅಧ್ಯಕ್ಷತೆಯಲ್ಲಿ ಅನುಭವ ಮಂಟಪ ಮೂಲಕ ಒಂದು ಮಾಹನ ಸಭೆ ಅಯೋಜನೆ ಮಾಡಿದರು. ನಂತರ ಶರಣರು ತಮ್ಮ ವಚನಗಳ ಮೂಲಕ ಜಾಗೃತಿ ಮೂಡಿಸಿದರು, ಸ್ವತಂತ್ರö್ಯ ಭಾರತದ ಕಾನೂನಿ ಮೂಲಕ ಸಂವಿಧಾನ ರಚನೆಯಾದರು ಜಾತಿ ತಾರತಮ್ಯ ಹೋಗಲಾಡಿಸಲು ಸಾದ್ಯವಾಗಿಲ್ಲ ಎಂದರು.
ನಾದ ಸರಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಸಿ.ಎಂ. ಬಂಡಗಾರ ಮಾತನಾಡಿದರು.
ಬುಧವಾರ ಬೆಳಗ್ಗೆ ತಾಲೂಕಿನ ವಿಭೂತಿಹಳ್ಳಿ ಗ್ರಾಮದಿಂದ ಪ್ರಾರಂಬಗೊಂಡು ಗುಡ್ಡಳ್ಳಿ, ರಾಮನಹಳ್ಳಿ, ಬಳಗಾನೂರ ಮಾರ್ಗವಾಗಿ ಕೋರಹಳ್ಳಿ ಹುವಿಹಳ್ಳಿ ಮೂಲಕ ಸಂಜೆ ಆಲಮೇಲ ತಾಲೂಕ ಕೇಂದ್ರಸ್ಥಾನಕ್ಕೆ ಆಗಮಿಸಿ ಪಟ್ಟಣದಲ್ಲಿ ಬೃಹತ್ ಮೆರವಣಿಗೆ ಮಾಡಿ ನಂತರ ಪಟ್ಟಣದ ಮೇನ್ ಬಜಾರಿನಲ್ಲಿ ಬಹಿರಂಗ ವೇದಿಕೆ ಕಾರ್ಯಕ್ರಮ ಜರುಗಿತು.
ಜಿಲ್ಲಾ ಸಮಾಜಕಲ್ಯಾಣ ಇಲಾಖೆ ಅಧಿಕಾರಿ, ಸಂವಿಧಾನ ಜಾಗೃತಿ ರಥಯಾತ್ರೆಯ ನೋಡಲ್ ಅಧಿಕಾರಿ ಪ್ರಶಾಂತ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಿದರು. ತಹಶೀಲ್ದಾರ ಸುರೇಶ ಚಾವಲಾರ ಅಧ್ಯಕ್ಷತೆ ವಹಿಸಿದ್ದರು. ಪ.ಪಂ ಮುಖ್ಯಾಧಿಕಾರಿ ಸುರೇಶ ನಾಯಕ, ತಾಲೂಕ ಸಮಾಜ ಕಲಾಣ ಅಧಿಕಾರಿ ಎಸ್.ಬಿ. ಹಚಡದ, ಕ್ಷೇತ್ರ ಶಿಕ್ಷಣಾಧಿಕಾರಿ ಆರೀಪ ಬಿರಾದಾರ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಉಪತಶೀಲ್ದಾರ ಸಿ.ಎಂ ಮೂಕಿಹಾಳ, ಕಂದಾಯ ನಿರಿಕ್ಷಕ ಎಂ.ಎ. ಅತ್ತಾರ, ಬಿ.ಜಿ. ನಾರಯಣಕರ, ಮುಖಂಡರಾದ ಬಿ.ಆರ್. ಎಂಟಮಾನ, ಗುಂಡು ಮೇಲಿನಮನಿ, ಜಗದೀಶ ದಾಳಿ, ಪ.ಪಂ ಸದಸ್ಯರಾದ ಸಂಜುಕುಮಾರ ಎಂಟಮಾನ, ಸಾದೀಕ ಸುಂಬಡ, ರಾಹುಲ ಎಂಟಮಾನ, ಶ್ರೀಶೈಲ ಭೋವಿ, ಹರಿಶ ಎಂಟಮಾನ, ಶಿವು ಮೇಲಿನಮನಿ, ಮಂಜುನಾಥ ಎಂಟಮಾನ, ಪರಶುರಾಮ ಕಾಂಬಳೆ, ಶಶಿಧರ ಗಣಿಯಾರ ಮುಂತಾದವರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

