ಕಲಕೇರಿ: ಗ್ರಾಮದ ಎಸ್.ಎಮ್.ವ್ಹಿ.ವ್ಹಿ.ಸಂಘದ ಶ್ರೀ ಬಸವೇಶ್ವರ ಪದವಿಪೂರ್ವ ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಶುಭಕೋರುವ ಸಮಾರಂಭವು ದಿ. ೧೦ರ ಶನಿವಾರ ಮುಂಜಾನೆ ೯:೩೦ಕ್ಕೆ ಶ್ರೀ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯಲಿದ್ದು, ಕಾರ್ಯಕ್ರಮದ ಸಾನಿಧ್ಯವನ್ನು ಗುರುಮರುಳಾರಾಧ್ಯ ಸಂಸ್ಥಾನ ಹಿರೇಮಠದ ಸಿದ್ದರಾಮ ಶಿವಾಚಾರ್ಯರು ವಹಿಸಲಿದ್ದು, ಗೌರವಾಧ್ಯಕ್ಷತೆಯನ್ನು ಸಂಸ್ಥೆಯ ಕಾರ್ಯದರ್ಶಿಗಳಾದ ಎಸ್.ಎಮ್.ಜೋಗೂರ, ಅಧ್ಯಕ್ಷರಾದ ಎಸ್.ಬಿ.ಪಾಟೀಲ ಮತ್ತು ಎಸ್.ಎಮ್.ಕಡಕೋಳ ವಹಿಸಲಿದ್ದು, ಉದ್ಘಾಟಕರಾಗಿ ಸಂಸ್ಥೆಯ ನಿರ್ಧೇಶಕರುಗಳಾದ ಎಸ್.ಜಿ.ಝಳಕಿ, ಎಸ್.ಸಿ.ಚಳ್ಳಗಿ ಆಗಮಿಸಲಿದ್ದು, ಮುಖ್ಯ ಅತಿಥಿಗಳಾಗಿ ವಿಜಯಪುರ ನೂತನ ಚಾಣಕ್ಯ ಕರಿಯರ್ನ ಸಂಸ್ಥಾಪಕ ಅಧ್ಯಕ್ಷರಾದ ಬಿ.ಡಿ.ಪಾಟೀಲ ಮತ್ತು ಕಲಕೇರಿ ಠಾಣಾಧಿಕಾರಿ ಶ್ರೀಮತಿ ಜಿ.ಜಿ. ಬಿರಾದಾರ ಆಗಮಿಸಲಿದ್ದು, ಅತಿಥಿಗಳಾಗಿ ಸಂಸ್ಥೆಯ ನಿರ್ಧೇಶಕರುಗಳಾದ ಎಸ್.ಎನ್.ಮಠ, ವ್ಹಿ.ಆರ್.ಝಳಕಿ, ಎಮ್.ಜೆ.ಬಿರಾದಾರ, ಜಿ.ಎಮ್.ಗುಮಶೆಟ್ಟಿ, ಎಮ್.ಎಸ್.ಕವದಿ, ಡಿ.ಎಮ್.ಗುಮಶೆಟ್ಟಿ, ಕೆ.ಡಿ.ದೇಸಾಯಿ, ಎಸ್.ಎಸ್.ಝಳಕಿ ಭಾಗವಹಿಸಲಿದ್ದು, ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ಮತ್ತು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ, ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Subscribe to Updates
Get the latest creative news from FooBar about art, design and business.
Related Posts
Add A Comment
